ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಅಕಾಲಿಕ ಸುರಿಮಳೆತಂದ ತಂಪು- ತೊಂದರೆ

By Staff
|
Google Oneindia Kannada News

ಬೆಂಗಳೂರು : ಗುರುವಾರ ಇಳಿಸಂಜೆ ನಗರದಲ್ಲಿ ಸುರಿದ ಅನಿರೀಕ್ಷಿತ ಸುರಿಮಳೆ, ಬಿಸಿಲಿನಿಂದ ಬೆಂದ ನಾಗರಿಕರಿಗೆ ತಂಪಿನ ಸಿಂಚನ ಎರೆಯುವ ಜೊತೆಗೆ ತಗ್ಗು ಪ್ರದೇಶದ ಜನರಿಗೆ ತಲೆನೋವಾಗಿಯೂ ಪರಿಣಮಿಸಿತು. ಯಥಾಪ್ರಕಾರ ಸಂಚಾರ ಅಸ್ತವ್ಯಸ್ತಗೊಂಡಿತು.

ಚಾಮರಾಜಪೇಟೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯ ಮರಗಳು ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು . ಚಾಮರಾಜಪೇಟೆ ಮೂರನೇ ಮುಖ್ಯರಸ್ತೆಯಲ್ಲಿ 7 ವಿದ್ಯುತ್‌ ಕಂಬಗಳು ಹಾಗೂ ಒಂದು ತೆಂಗಿನಮರ ಕೆಳಗುರುಳಿವೆ. ಹಾಗೆಯೇ ಈದ್ಗಾ ಮೈದಾನದ ಬಳಿ ಒಂದು ದೊಡ್ಡ ಮರವುರುಳಿ ಟೆಂಪೊ ಜಖಂಗೊಂಡಿದೆ.

ಈಜಿಪುರ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳ ಜನತೆ ನೀರು ನುಗ್ಗಿದ್ದರಿಂದ ತೊಂದರೆ ಅನುಭವಿಸಿದರು. ವಿದ್ಯುತ್‌ ಕಂಬಗಳು ಬುಡ ಮೇಲಾದ್ದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X