Get Updates
Get notified of breaking news, exclusive insights, and must-see stories!

ಕೆಎಎಸ್‌ ಅಧಿಕಾರಿ ಮನೆ ಮೇಲೆ ದಾಳಿ : ಕೋಟಿ ರು.ಆಸ್ತಿ ಪತ್ತೆ

ಬೆಂಗಳೂರು : ಹಿರಿಯ ಕೆ.ಎ.ಎಸ್‌. ಅಧಿಕಾರಿ ಎ.ಎನ್‌. ಗೋವಿಂದರಾಜ್‌ ಅವರ ಕಚೇರಿ ಮತ್ತು ತುಮಕೂರಿನ ಅವರ ಮನೆಯ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು ಒಂದು ಕೋಟಿ ರುಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ 40 ಲಕ್ಷ ರುಪಾಯಿ ಮೌಲ್ಯದ ಭವ್ಯ ಬಂಗಲೆಯ ದಾಖಲೆ ಪತ್ರ, ಮನೆಯಿಂದ 2.5 ಲಕ್ಷ ರುಪಾಯಿ ನಗದು, 2.5 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ, 3 ಲಕ್ಷ ರುಪಾಯಿಗೂ ಹೆಚ್ಚು ವಿದ್ಯುನ್ಮಾನ ಉಪಕರಣಗಳು, 10 ಲಕ್ಷ ರುಪಾಯಿ ಮೌಲ್ಯದ ಉಳಿತಾಯ ಪತ್ರ, ಕಾರ್ಖಾನೆಯ ದಾಖಲೆ, 30 ಎಕರೆ ಜಮೀನು, ತೋಟದ ಮನೆಯೇ ಮೊದಲಾದ ಆದಾಯಕ್ಕೂ ಮೀರಿದ ಆಸ್ತಿಯನ್ನು ಪತ್ತೆ ಮಾಡಲಾಗಿದೆ.

ಈ ಎಲ್ಲ ದಾಖಲೆಗಳನ್ನು ಜಫ್ತಿ ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‌.ಪಿ. ನಾಗರಾಜ್‌ ಎಂ.ಎನ್‌ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ಕೆ. ತಳಕೇರಿ, ಇನ್ಸ್‌ಪೆಕ್ಟರ್‌ ಎ.ಎಸ್‌.ಎನ್‌. ಅರಟ್ಟಿ ಮುಂತಾದವರು ತಂಡದಲ್ಲಿದ್ದರು.

ಈ ಹಿರಿಯ ಕೆ.ಎ.ಎಸ್‌. ಅಧಿಕಾರಿ ಈ ಮುನ್ನ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇವರು ತುಮಕೂರಿನಲ್ಲಿ ಷಾಪಿಂಗ್‌ ಕಾಂಪ್ಲೆಕ್ಸ್‌ ಕೂಡ ಹೊಂದಿದ್ದಾರೆ. ದಾಳಿಯ ಸಂದರ್ಭದಲ್ಲಿ 2 ಲಕ್ಷ ರುಪಾಯಿ ಬ್ಯಾಂಕ್‌ ಠೇವಣಿ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+