ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ನಿಮಗೆ ವಹಿಸಿಕೊಟ್ಟಿರುವ ಜವಾಬ್ದಾರಿಗಳ ಬಗ್ಗೆ ಅತಿ ಧಾವಂತದಿಂದ ವರ್ತಿಸಿದರೆ ಸುಮ್ಮನೇ ಸೋಲನ್ನು ಆಹ್ವಾನಿಸಿಕೊಂಡಂತೆ.
ಮಿಥುನ : ಕೈಗೆತ್ತಿಕೊಂಡ ಯಾವ ಕೆಲಸವೂ ಸರಿಯಾಗಿ ಮುಂದೆ ಹೋಗುತ್ತಿಲ್ಲ ಎಂಬ ಬಗ್ಗೆ ಇರುವ ಬೇಸರವನ್ನು ಪಕ್ಕಕ್ಕಿಟ್ಟು ಜವಾಬ್ದಾರಿಯಿಂದ ವರ್ತಿಸಿ.
ಕಟಕ : ಮನೆಯಲ್ಲಿ ಅರಳು ಹುರಿದಂತೆ ಮಾತನಾಡಿದರೆ ಎಲ್ಲ ಸಂದರ್ಭದಲ್ಲಿಯೂ ಅದು ಸೂಟ್ ಆಗುವುದಿಲ್ಲ. ಹರಟೆ ಕೆಲಸಗಳನ್ನು ಬಿಟ್ಟು ವಾಸ್ತವದ ಕಡೆಗೆ ಗಮನ ಹರಿಸಬೇಕು.
ಸಿಂಹ : ಎಲ್ಲಿದ್ದೀರಿ ಸ್ವಾಮಿ ನೀವು, ಎಷ್ಟು ಕೆಲಸಗಳು ನಿಮ್ಮ ಕಾಯುತ್ತಿವೆ. ಸೋಮಾರಿತನದೊಡನೆ ನಿಮ್ಮ ದೊಡ್ಡ ಯುದ್ಧದಲ್ಲಿ ನೀವು ಗೆಲ್ಲಬೇಕು.
ಕನ್ಯಾ : ಪೋಸ್ಟ್ ಮ್ಯಾನ್ ನಿಂದ ಇವತ್ತು ಶುಭ ಸುದ್ದಿ ನಿರೀಕ್ಷಿಸಿ. ಮನೆಯಲ್ಲಿ ಶುಭ ಕಾರ್ಯಗಳಿರುವುದರಿಂದ ಖರ್ಚಿನ ಬಗ್ಗೆ ಚಿಂತೆ ಸಲ್ಲ.
ತುಲಾ : ನಿಮ್ಮ ಅಮಾಯಕತೆಯನ್ನು ಇತರರು ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಆದ್ದರಿಂದ ತುಂಬಾ ಜಾಗ್ರತೆಯಿಂದ ಇರಬೇಕು.
ವೃಶ್ಚಿಕ : ಮುನಿಸು, ಕೋಪಗಳ ಬಗ್ಗೆ ಸ್ನೇಹಿತರು ನುರಿತವರಾಗಿದ್ದಾರೆ. ನಿಮ್ಮ ಇನ್ನಷ್ಟು ಮುಖಗಳ ಕಂಡು ಅವರೇನೂ ಬೇಸರ ಪಟ್ಟುಕೊಳ್ಳುವುದಿಲ್ಲ. ಎಷ್ಟೆಂದರೂ ಹಚ್ಚಿಕೊಂಡವರು ತಾನೇ ?
ಧನಸ್ಸು : ಲಗೇಜು ರೆಡಿ ಆಯ್ತಾ ? ಪುಣ್ಯ ಕ್ಷೇತ್ರ ಪ್ರವಾಸ ಯೋಗ ನಿಮ್ಮನರಸಿಕೊಂಡು ಬಂದಿದೆ. ಜೊತೆಗೆ ಪುತ್ರವರ್ಗದಿಂದ ಧನಲಾಭ.
ಮಕರ : ನೀವೆದುರಿಸುತ್ತಿರುವ ಪರಿಸ್ಥಿತಿಗಳು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವುದು. ಆದ್ದರಿಂದ ಧೈರ್ಯವೇ ನಿಮ್ಮ ಬಂಡವಾಳವಾಗಿರಬೇಕು.
ಕುಂಭ : ಅಪರೂಪದ ಸ್ನೇಹಿತರು ನಿಮ್ಮ ಭೇಟಿಗಾಗಿ ಹಲವು ದಿನಗಳಿಂದ ಕಾಯುತ್ತಿದ್ದಾರೆ. ಆದರೆ ನಿಮ್ಮ ನಿರಾಸಕ್ತಿಯೇ ಅವರನ್ನು ಹಿಂದಿರಿಸಿದೆ. ಇವತ್ತಾದರೂ ಮುಹೂರ್ತ ಕೂಡಿ ಬರುತ್ತದೆಯೇ ?
ಮೀನ : ಸೋತರೆ ನೋವಿರುವುದಿಲ್ಲ. ರಕ್ಷಣೆ ಇರುತ್ತದೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಆ ವಿಷಯದಲ್ಲಿ ನೀವು ಪರಿಣತರಾದ್ದರಿಂದ ಇವತ್ತು ಶುಭದಿನ.