ಮ್ಯಾಕ್ಸ್ ನ್ಯೂಯಾರ್ಕ್ ಭಾರತಕ್ಕೆ ಕಾಲಿಟ್ಟ ಪ್ರಥಮಜೀವವಿಮಾ ಸಂಸ್ಥೆ
ಬೆಂಗಳೂರು : ವಿದೇಶೀ ಬಂಡವಾಳಕ್ಕೆ ಈಗ ವಿಮಾ ಕ್ಷೇತ್ರವೂ ಮುಕ್ತ. ಜೀವವಿಮಾ ಕ್ಷೇತ್ರದಲ್ಲಂತೂ ಭಾರತ ಅತಿ ಫಲವತ್ತಾದ ಪ್ರದೇಶ. ಇಲ್ಲಿ ಎಷ್ಟು ಬೇಕಾದರೂ ಬೆಳೆ ತೆಗೆಯಬಹುದು ಎಂಬುದು ವಿದೇಶೀ ವಿಮಾ ಕಂಪನಿಗಳ ಅನಿಸಿಕೆ.
ಈ ಹಿನ್ನೆಲೆಯಲ್ಲಿ ವಿಶ್ವದ ಅತಿ ದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾದ ಮ್ಯಾಕ್ಸ್ ನ್ಯೂಯಾರ್ಕ್ ಜೀವವಿಮಾ ಸಂಸ್ಥೆ ಭಾರತಕ್ಕೆ ಪದಾರ್ಪಣ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಏಷ್ಯಾ ಪ್ರತಿನಿಧಿ ಡೆನ್ನಿಸ್ ಪೆಡಿನಿ ಈ ವಿಷಯ ತಿಳಿಸಿದರು.
ಜಾಗತಿಕ ಲೆಕ್ಕಾಚಾರದಲ್ಲಿ ಭಾರತದಲ್ಲಿ ವಿಮಾ ಕ್ಷೇತ್ರಕ್ಕೆ ವಿಫುಲ ಅವಕಾಶವಿದೆ, ಇಲ್ಲಿ ತಮ್ಮ ಸಂಸ್ಥೆ ಅಭೂತಪೂರ್ವ ಯಶಸ್ಸು ಕಂಡೇ ಕಾಣುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮ್ಯಾಕ್ಸ್ ಇಂಡಿಯಾದೊಂದಿಗಿನ ಸಹಯೋಗದೊಂದಿಗೆ ಮ್ಯಾಕ್ಸ್ ನ್ಯೂಯಾರ್ಕ್ ಬೆಂಗಳೂರಿನಲ್ಲಿ ಈಗ ಕಾರ್ಯಾರಂಭ ಮಾಡಿದೆ.
ಅಮೆರಿಕದಲ್ಲಿ ಅತಿ ಹೆಚ್ಚು ಜೀವವಿಮೆ ಮಾಡಿಸಿರುವ ಕಂಪನಿ ಎಂಬ ಹೆಗ್ಗಳಿಕೆ ಮ್ಯಾಕ್ಸ್ ನ್ಯೂಯಾರ್ಕ್ಗೆ ಸಲ್ಲುತ್ತದೆ. ಚೀನಾದಲ್ಲಿ ಮಾಕ್ಸ್ ನ್ಯೂಯಾರ್ಕ್ಗೆ ಕೇವಲ ಒಂದೇ ಒಂದು ನಗರದಲ್ಲಿ ಮಾತ್ರ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಆದರೆ, ಭಾರತದಲ್ಲಿ ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಎಂದರು.
ಭಾರತದ ವಿಮಾ ಕಂಪನಿಗಳ ಸಾಲಿನಲ್ಲಿ ತಮ್ಮ ಸಂಸ್ಥೆ ನಂ1 ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ವ್ಯವಸ್ಥಾಪಕ ನಿರ್ದೇಶಕ ಅನುರೂಪ್ ಟೋನಿ ಸಿಂಗ್, ತಮ್ಮ ಸಂಸ್ಥೆ ಭಾರತದ 8 ನಗರಗಳಲ್ಲಿ ಶಾಖೆ ತೆರೆದ ಮೊದಲ ಖಾಸಗಿ ವಿಮಾ ಸಂಸ್ಥೆಯಾಗಿದೆ ಎಂದೂ ಹೇಳಿದರು. ಈಗಾಗಲೇ ಸಂಸ್ಥೆ 500 ಮಂದಿ ಅರ್ಹ ಏಜೆಂಟರನ್ನೂ ನೇಮಕ ಮಾಡಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications