ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರಣಿ ಸ್ಫೋಟ : ದೀನ್ದಾರ್ ಅಂಜುಮನ್ಗೆ 1 ವರ್ಷ ನಿಷೇಧ?
ಹೈದರಾಬಾದ್ : ವಾಡಿ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಕರ್ನಾಟಕ, ಗೋವಾ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಳೆದ ವರ್ಷ ಮೇ ಹಾಗೂ ಜೂನ್ ತಿಂಗಳಿನಲ್ಲಿ ಸಂಭವಿಸಿದ ಸರಣಿ ಚರ್ಚ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಎನ್ನಲಾದ ದೀನ್ದಾರ್ ಅಂಜುಮನ್ ಸಂಸ್ಥೆಗೆ ಭಾರತ ಸರಕಾರ ಒಂದು ವರ್ಷಗಳ ನಿಷೇಧ ಹೇರಿದೆ.
ಕಾನೂನು ವಿರೋಧಿ ಚಟುವಟಿಕೆ ನಿಯಂತ್ರಣ ಕಾಯಿದೆಯಡಿಯಲ್ಲಿ ದೀನ್-ದಾ-ರ್ ಅಂಜು-ಮ-ನ್ಗೆ ಏಪ್ರಿಲ್ 27ರಂದು ನಿಷೇಧ ಹೇರಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಈವರೆಗೂ ತತ್ಸಬಂಧವಾಗಿ ಅಂಜುಮನ್ ಸಂಸ್ಥೆಗೆ ಸರಕಾರದಿಂದ ಯಾವುದೇ ನೋಟಿಸ್ ಬಂದಿಲ್ಲ ಎಂದೂ ಮೂಲಗಳು ತಿಳಿಸಿವೆ. ಕೇಂದ್ರ ಸರಕಾರದ ಈ ಆದೇಶದ ಬಗ್ಗೆ ತಮಗೂ ಕೂಡ ಈವರೆಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಉಮೇಶ್ ಷರಫ್ ಅವರು ತಿಳಿಸಿದ್ದಾರೆ.
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Thursday, May 3, 2001, 5:30 [IST]