ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಳುನಾಡ ‘ವೀರಕೇಸರಿ’ಯಾಗಿ ಸತೀಶ್ ಬೆಂಗ್ರೆ
ಮಂಗಳೂರು : ಮಂಗಳೂರು ನೆಹರೂ ಮೈದಾನದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಸತೀಶ್ ಬೆಂಗ್ರೆ ಅವರು ತುಳುನಾಡ ಕೇಸರಿ ಬಿರುದು ಗಿಟ್ಟಿಸಿಕೊಂಡಿದ್ದಾರೆ.
ವೀರಾಂಜನೇಯ ವ್ಯಾಯಾಮ ಗರಡಿಯಲ್ಲಿ ಪಳಗಿದ ಸತೀಶ್ ಅವರಿಗೆ ಮಂಗಳವಾರ ಸಂಜೆ ತುಳುನಾಡ ವೀರ ಕೇಸರಿ ಬಿರುದು ನೀಡಿ ಸನ್ಮಾನಿಸಲಾಯಿತು. ಎರಡನೇ ಸ್ಥಾನ ವೀರಭಾರತಿ ಬೆಂಗ್ರೆ ಶಾಲೆಯ ನವೀನ್ ಬಿ ಕಾಂಚನ್ ಅವರಿಗೆ ಮತ್ತು ಮೂರನೇ ಸ್ಥಾನ ವೀರ ಹನುಮಾನ್ ವ್ಯಾಯಾಮ ಶಾಲೆಯ ಅರುಣ್ ಪುತ್ರನ್ ಬೆಂಗ್ರೆ ಅವರಿಗೆ ಸಂದಿದೆ.
ಮಾಜಿ ಶಾಸಕ ಬ್ಲೇಸಿಯಸ್ ಡಿಸೋಜ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
(ಇನ್ಫೋ ವಾರ್ತೆ)
Comments
Story first published: Wednesday, May 2, 2001, 5:30 [IST]