ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಇವತ್ತು ನಿಮಗೆ ರಿಲ್ಯಾಕ್ಸಿಂಗ್ ಮೂಡ್ ಇರುತ್ತದೆ. ಆದರೆ ಅದಕ್ಕೆ ಅವಕಾಶ ಇರುವುದಿಲ್ಲ ಎಂಬುದು ಬೇಸರದ ಸಂಗತಿ. ಸ್ನೇಹಿತರ ಸಾಂತ್ವನ ನಿಮ್ಮ ತಟ್ಟಲಿದೆ.
ಮಿಥುನ : ಓದು, ಬರಹ ಎನ್ನುವುದನ್ನೆಲ್ಲಾ ಮೂಲೆಗೆ ತಳ್ಳಿರುವ ನಿಮಗೆ ತಕ್ಕ ಶಾಸ್ತಿಯಾಗಲಿದೆ. ಆದ್ದರಿಂದ ನೀವು ಈಗಲೇ ಚೇತರಿಸಿಕೊಳ್ಳಬೇಕು.
ಕಟಕ : ಮನೆಯಲ್ಲಿ ಸಂತೋಷದ ವಾತಾವರಣ ಇರುವುದರಿಂದ ಮನಸ್ಸು ಕೂಡ ಉಲ್ಲಾಸವಾಗಿರುತ್ತದೆ. ಕೆಲಸಗಳೆಲ್ಲ ಚಕಚಕಾಂತ ಮುಗಿದುಹೋಗುತ್ತದೆ.
ಸಿಂಹ : ಕೈ ತುಂಬಾ ಕೆಲಸಗಳು ನಿಮ್ಮ ಹೆಗಲ ಮೇಲೆ ಬಿದ್ದಿವೆ. ಅದಕ್ಕೆ ಅನುಕೂಲಕರ ವಾತಾವರಣ ಇದೆ ಎನ್ನುವುದು ಒಂದು ಪಾಸಿಟಿವ್ ಪಾಯಿಂಟ್.
ಕನ್ಯಾ : ಎಂದೋ ಹೇಳಿರುವ ಸುಳ್ಳು ನಿಮ್ಮ ಕತ್ತಿಗೆ ಬಂದಿರಬಹುದು. ಅದನ್ನು ನಿವಾರಿಸಲು ಮತ್ತೊಂದು ಸುಳ್ಳು ಹೇಳದೇ ಇದ್ದರೆ ಆಯ್ತು. ಎಲ್ಲವೂ ನಿರಾಳವಾಗುತ್ತದೆ.
ತುಲಾ : ಧನಲಾಭಕ್ಕಾಗಿ ಕಾಯುತ್ತಿರುವ ನಿಮಗೆ ಸದ್ಯಕ್ಕೆ ಶುಭ ಸುದ್ದಿ ಇಲ್ಲ. ಹಣದ ಅಡಚಣೆಯಿಂದ ಎಲ್ಲ ಕೆಲಸಗಳನ್ನೂ ಹಾಳು ಮಾಡಿಕೊಳ್ಳಬೇಡಿ.
ವೃಶ್ಚಿಕ : ಸ್ನೇಹಿತರಿಗೆ ಸಿಹಿ ಕೊಡಿಸಿದ ಖುಷಿ ನಿಮ್ಮ ಮನಸ್ಸಿನ ತುಂಬಾ ಇರುತ್ತದೆ. ಸುಳ್ಳು ಹೇಳುವುದನ್ನು ಬಿಟ್ಟು ಬಿಟ್ಟರೆ ಚೆಂದ ಎನಿಸುತ್ತದೆ ಅನ್ನುತ್ತಾರೆ ಗೆಳೆಯರು.
ಧನಸ್ಸು : ಅಪರೂಪಕ್ಕೆ ಸಿಗುವ ಸ್ನೇಹಿತರನ್ನು ಕಾಳಜಿಯಿಂದ ಮಾತನಾಡಿಸಿದರೆ ಸಾಲದು. ವರ್ತನೆಯಲ್ಲಿಯೂ ತೋರಿಸಬೇಕು. ಆಗ ನಿಮ್ಮನ್ನು ಅವರು ಮೆಚ್ಚಿಕೊಳ್ಳುತ್ತಾರೆ.
ಮಕರ : ನಿಮ್ಮ ಯೋಚನೆಗಳು ಗುಣಾತ್ಮಕವಾಗಿದ್ದರೆ, ಕೆಲಸ ಕಾರ್ಯಗಳೂ ಗುಣಾತ್ಮವಾಗಿರುತ್ತವೆ. ಆದರೆ ತೀರಾ ಸುಳ್ಳು ಹೇಳುವುದು ನಿಮ್ಮ ಕೈಲಾಗದ ವಿಷಯ.
ಕುಂಭ : ಪುತ್ರವರ್ಗದಿಂದ ಯಶಸ್ಸಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿನ ಆಸಕ್ತಿಗೆ ಪೂರಕ ವಾತಾವರಣವೂ ಒದಗಿ ಬರುವುದರಿಂದ ಆರಾಮವಾಗಿರುತ್ತೀರಿ.
ಮೀನ : ಧನಲಾಭವಿದೆ. ಹಾಗಂತ ಸ್ನೇಹಿತರನ್ನೆಲ್ಲಾ ಕಲೆ ಹಾಕಿಕೊಳ್ಳುವ ಗೋಜಿಗೆ ಹೋಗಬೇಡಿ. ಅಧ್ಯಾತ್ಮದತ್ತ ಒಲವಿದ್ದರೆ ಅತ್ತ ಗಮನ ಹರಿಸುವುದು ಒಳ್ಳೇದು.