ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚನ್ನಪಟ್ಟಣ : ಮೇ 5ರಂದು ರಾಮಪ್ರಮೇಯ ಸ್ವಾಮಿ ರಥೋತ್ಸವ
ಚನ್ನಪಟ್ಟಣ : ಬಣ್ಣದ ಬೊಂಬೆಯ ನಾಡು ಚನ್ನಪಟ್ಟಣ ತಾಲೂಕಿನ ಮಳೂರು ಅಗ್ರಹಾರದ ಜ್ಞಾನಮಂಟಪ ಕ್ಷೇತ್ರದಲ್ಲಿ ಮೇ 5ರಂದು ಶನಿವಾರ ಶ್ರೀ ರಾಮಪ್ರಮೇಯ ಸ್ವಾಮಿಗಳ ಬ್ರಹ್ಮ ರಥಾರೋಹಣ ಜರುಗಲಿದೆ.
ಮಳೂರು ಅಗ್ರಹಾರದಲ್ಲಿ ಏಪ್ರಿಲ್ 28ರಿಂದಲೇ ರಾಮ ಪ್ರಮೇಯ ಸ್ವಾಮಿಗಳವರ ಮಹೋತ್ಸವ ಹಾಗೂ ಸೇವಾಕಾರ್ಯಗಳು ನಡೆಯುತ್ತಿವೆ. ಮೇ 5ರಂದು ಮಹಾ ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿದೆ. ರಥೋತ್ಸವ ನಿಮಿತ್ತ ದೇವಾಲಯದಲ್ಲಿ ಭಜನೆ, ಪ್ರಾತಃಪೂಜೆ, ಅಭಿಷೇಕ, ಕಳಶಪೂಜೆಯೇ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿವೆ.
ಈ ವಿಷಯವನ್ನು ಮಳೂರು ದೇವಸ್ಥಾನದ ಸಂಚಾಲಕರಾದ ಎಂ.ಎನ್. ಕೃಷ್ಣ ಕುಮಾರ್ ಹಾಗೂ ತಹಶೀಲ್ದಾರ್ ವೈ.ಬಿ. ಕೃಷ್ಣ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Story first published: Wednesday, May 2, 2001, 5:30 [IST]