ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಪುರಿ ರಸ್ತೆ ಅಪಘಾತಕ್ಕೆ ಏಳು ಮಂದಿಬೆಂಗಳೂರಿಗರ ಬಲಿ

By Staff
|
Google Oneindia Kannada News

ಚೆನ್ನೈ : ಇಲ್ಲಿನ ಧರ್ಮಪುರಿಗೆ ಸಮೀಪ ಮಹೇಂದ್ರ ಮಂಗಳಂನಲ್ಲಿ ಮಂಗಳವಾರ ಬೆಳಗ್ಗೆ ಟಾಟಾ ಸುಮೋ ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಏಳು ಮಂದಿ ಮೃತರಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಟಾಟಾ ಸುಮೋದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಬೆಂಗಳೂರಿನವರಾಗಿದ್ದು, ತಮಿಳುನಾಡಿನ ಹೊಗೇನಕಲ್‌ ಫಾಲ್ಸ್‌ಗೆ ಪ್ರವಾಸ ಹೊರಟಿದ್ದರು. ಮೃತರ ಪೈಕಿ ಇಬ್ಬರು ಬೆಂಗಳೂರಿನ ತಾರಕನ್‌ ಮತ್ತು ಸಂಪತ್‌ ಎಂದು ಗುರುತಿಸಲಾಗಿದೆ. ಇತರ ಐದು ಮಂದಿಯ ಮುಖವನ್ನು ಗುರುತಿಸುವುದು ಸಾಧ್ಯವಾಗಿಲ್ಲ.

ಇನ್ನಿಬ್ಬರು ಪ್ರಯಾಣಿಕರಾದ ಶ್ರೀನಿವಾಸ್‌ ಮತ್ತು ಸುರೇಶ್‌ ಕುಮಾರ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರವಾಸ ಹೊರಟವರು ಟಾಟಾ ಸುಮೋ ವಾಹನವನ್ನು ಮಹಾಲಕ್ಷ್ಮೀ ಲೇಔಟಿನಿಂದ ಬಾಡಿಗೆಗೆ ತೆಗೆದುಕೊಂಡಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X