ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಲ್ಲಿ ಕರ್ನಾಟಕ ಬ್ಯಾಂಕ್ನ ಸಾಗರೋತ್ತರ ಶಾಖೆ ಆರಂಭ
ಬೆಂಗಳೂರು : ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿ ಕರ್ನಾಟಕ ಬ್ಯಾಂಕ್ನ ನೂತನ ಸಾಗರೋತ್ತರ ಶಾಖೆ ಸೋಮವಾರ ಕಾರ್ಯಾರಂಭ ಮಾಡಿತು. ಕರ್ಲಾನ್ ಸಂಸ್ಥೆಯ ಅಧ್ಯಕ್ಷ ಹಾಗೂ ಬ್ಯಾಂಕ್ನ ಮಾಜಿ ನಿರ್ದೇಶಕ ಕೆ.ಕೆ. ರಾವ್ ಅವರು ಈ ಸಾಗರೋತ್ತರ ಶಾಖೆಯನ್ನು ಉದ್ಘಾಟಿಸಿದರು.
ಬ್ಯಾಂಕ್ ಈಗಾಗಲೇ ದೆಹಲಿ ಮತ್ತು ಮುಂಬಯಿಯಲ್ಲಿ ಸಾಗರೋತ್ತರ ಶಾಖೆ ಹೊಂದಿದೆ. ಇದು ಮೂರನೇ ಸಾಗರೋತ್ತರ ಶಾಖೆ. ಈ ಶಾಖೆಯ ನೆರವಿನಿಂದ ಆಯಾತ, ನಿರ್ಯಾತ ಹಾಗೂ ವಿದೇಶಿ ವಿನಿಮಯ ಗಳಿಕೆಗೂ ನೆರವಾಗಲಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಅನಂತಕೃಷ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಇದು ಬ್ಯಾಂಕ್ನ 355ನೇ ಸಾಮಾನ್ಯ ಶಾಖೆಯೂ ಆಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸಾಗರೋತ್ತರ ಶಾಖೆ ಆರಂಭಿಸಲಾಯಿತು ಎಂದು ಅವರು ಹೇಳಿದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಕೆ. ಶಾಮರಾವ್, ಶಾಸಕ ಎಂ.ಆರ್. ಸೀತಾರಾಂ, ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಜಿ.ಕೆ. ಭಟ್ ಮೊದಲಾದವರು ಹಾಜರಿದ್ದರು.
Comments
Story first published: Tuesday, May 1, 2001, 5:30 [IST]