ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಕಾನಂದ ನದಿಗೆ ಬಸ್‌ ಬಿದ್ದು 40 ಯಾತ್ರಾರ್ಥಿಗಳ ಸಾವು

By Staff
|
Google Oneindia Kannada News

ನೈನಿತಾಲ್‌ : ಚಾಲಕನ ನಿಯಂತ್ರಣ ತಪ್ಪಿ ಬದರೀನಾಥ ಸಮೀಪದ ಅಲಕಾನಂದ ನದಿಗೆ ಬಸ್ಸೊಂದು ಬಿದ್ದ ಪರಿಣಾಮ ಕನಿಷ್ಠ 40 ಯಾತ್ರಾರ್ಥಿಗಳು ಸೋಮವಾರ ಮೃತ ಪಟ್ಟಿದ್ದಾರೆ.

ಜನರಿಂದ ಖಚಾಖಚಿ ತುಂಬಿದ್ದ ಬಸ್ಸು ಹರಿದ್ವಾರದಿಂದ ಬದರೀನಾಥಕ್ಕೆ ಸಾಗುತ್ತಿತ್ತು. ಇದಿರಾದ ಟ್ಯಾಕ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬಸ್ಸನ್ನು ತಿರುಗಿಸಿದಾಗ ನಿಯಂತ್ರಣ ತಪ್ಪಿ, ಬಂಡೆಗಳಿಗೆ ಬಡಿದುಕೊಂಡು 50 ಮೀಟರ್‌ಗಳಷ್ಟು ಆಳದಲ್ಲಿದ್ದ ಅಲಕಾನಂದ ನದಿಗೆ ಬಿದ್ದಿತು. ಬಸ್ಸು ಬೀಳುವಾಗ ಸಿನಿಮೀಯ ರೀತಿಯಲ್ಲಿ ಚಾಲಕ ಬಚಾವಾದ. ಸುಮಾರು 40 ಯಾತ್ರಾರ್ಥಿಗಳು ಜಲಸಮಾಧಿಯಾಗಿದ್ದಾರೆ. ತೀವ್ರ ಶೋಧ ನಡೆಸಿರುವ ಪೊಲೀಸರಿಗೆ ಬಸ್‌ ಕಂಡಕ್ಟರ್‌ ಒಬ್ಬನ ಶವ ಮಾತ್ರ ಸಿಕ್ಕಿದೆ. ಬದರೀನಾಥ ಪೊಲೀಸರು ಈ ವಿಷಯವನ್ನು ದೃಢಪಡಿಸಿದ್ದಾರೆ.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X