ನವೆಂಬರ್ನಲ್ಲಿ ನಿಮ್ಮ ಕೈಗೆ ಯಕ್ಷಗಾನ ಮೇಳಗಳ ಡೈರೆಕ್ಟರಿ
ಮಂಗಳೂರು : ಯಕ್ಷಗಾನ ಎಂದರೆ ಕರಾವಳಿಯ ಸೊಬಗು ಕಣ್ಮುಂದೆ ಬಂದು ನಿಲ್ಲುತ್ತದೆ. ಬಯಲಾಟ, ಮೇಳದಾಟ, ಟೆಂಟಿನಾಟ, ಹವ್ಯಾಸಿ ಬಳಗದವರು ಅಪರೂಪಕ್ಕೊಮ್ಮೊಮ್ಮೆ ಆಡುವ ಆಟ... ಹೀಗೆ.
ಯಕ್ಷಗಾನವನ್ನು ನೆಚ್ಚಿಕೊಂಡಿರುವ, ಹುಚ್ಚು ಹಿಡಿಸಿಕೊಂಡಿರುವ ಎಷ್ಟು ಗುಂಪುಗಳು ಕರಾವಳಿ ಮತ್ತು ಮಲೆನಾಡಿನಲ್ಲಿವೆ ಎಂದು ಕೇಳಿದರೆ ಎಲ್ಲಿಯೂ ಅಂಕಿ ಅಂಶಗಳು ನಿಮಗೆ ಸಿಗುವುದಿಲ್ಲ. ಪ್ರಶ್ನೆಗೆ ಉತ್ತರ ಕೊಡುವ ಪ್ರಯತ್ನ ಮಾಡಲು ಪುತ್ತೂರಿನ ಯಕ್ಷ ಕೂಟದವರು ಮುಂದೆ ಬಂದಿದ್ದಾರೆ. ಮುಂದಿನ ದೀಪಾವಳಿ ಹೊತ್ತಿಗೆ ಯಕ್ಷಗಾನ ಮೇಳಗಳಿಗೆ ಸಂಬಂಧಿಸಿದ ಡೈರೆಕ್ಟರಿ ಒಂದು ರೆಡಿಯಾಗುತ್ತದೆ.
ಯಕ್ಷಗಾನದಲ್ಲಿ ಮತ್ತೆ ವಿಧಗಳಿವೆ. ತೆಂಕು ತಿಟ್ಟು, ಬಡಗುತಿಟ್ಟು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತುಳುತಿಟ್ಟು . ಮಹಿಳಾ ಯಕ್ಷಗಾನ ಕಲಾವಿದೆಯರ ಗುಂಪೂ ಆಗಲೇ ಯಕ್ಷವಾಹಿನಿಗೆ ಸೇರಿಕೊಂಡಿದೆ. ಶಿವಮೊಗ್ಗ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇರುವ ಎಲ್ಲ ತರಾವಳಿಯ ಯಕ್ಷಗಾನ ಮೇಳಗಳ ಮಾಹಿತಿ ಕಲೆ ಹಾಕಿ ಡೈರೆಕ್ಟರಿ ತರುವ ಜವಾಬ್ದಾರಿಯನ್ನು ಯಕ್ಷಕೂಟ ಹೊತ್ತುಕೊಂಡಿದೆ.
ಯಕ್ಷಕೂಟ ಈ ಬಾರಿ ದಶಮಾನೋತ್ಸವ ಆಚರಿಸುತ್ತಿದೆ. ಆ ನೆನಪಿಗಾಗಿ ಕೂಟ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದಶಮಾನೋತ್ಸವದಲ್ಲಿ ಡೈರೆಕ್ಟರಿ ಬಿಡುಗಡೆಯಾಗುವುದು ಅಂತ ಯಕ್ಷಕೂಟದ ಸಂಯೋಜಕ ನಾರಾಯಣ ಕಾರಂತ್ ಹೇಳುತ್ತಾರೆ.
ನೀವೂ ಯಾವುದಾದರೂ ಮೇಳಕ್ಕೆ ಸೇರಿದವರಾ ? ಅಥವಾ ನಿಮಗೆ ಯಾವುದಾದರೂ ಮೇಳದ ಬಗ್ಗೆ ಮಾಹಿತಿ ಗೊತ್ತಿದೆಯಾ ? ಹಾಗಾದರೆ ಯಕ್ಷಕೂಟದವರಿಗೆ ಒಂದು ಪತ್ರ ಬರೆದು ಎಲ್ಲ ವಿವರ ತಿಳಿಸಿ. ಅವರು ಮಾಡುತ್ತಿರುವ ಯಜ್ಞದಲ್ಲಿ ನಿಮ್ಮ ಪಾಲಿನ ಹವಿಸ್ಸಿರಲಿ. ವಿಳಾಸ ನಾವು ಕೊಡುತ್ತೇವೆ. ಯಕ್ಷಕೂಟ c/o ರಮಾನಂದ ನೆಲ್ಲಿತ್ತಾಯ , ಕೊಂಬೆಟ್ಟು , 11-526 , ಪುತ್ತೂರು - 574 201
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications