ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ದಶಕದ ನಂತರ ಮಂಗಳೂರಿನಲ್ಲಿ ಕುಸ್ತಿ ಸ್ಪರ್ಧೆ

By Staff
|
Google Oneindia Kannada News

ಮಂಗಳೂರು : ಮೂವತ್ತು ವರ್ಷಗಳ ಬಳಿಕ ಆಯೋಜಿಸಲಾಗಿರುವ ಜನಪ್ರಿಯ ಅಖಾಡ ಕುಸ್ತಿ ಸ್ಪರ್ಧೆ ಮಂಗಳೂರಿನ ನೆಹರು ಮೈದಾನದಲ್ಲಿ ಭಾನುವಾರ ಆರಂಭವಾಗಿದೆ. ಅಪರೂಪಕ್ಕೆ ನಡೆಯುತ್ತಿರುವ ಈ ಸ್ಪರ್ಧೆಗೆ ಮಂಗಳೂರಿನಲ್ಲಿ ಅಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಖಾಡ ಕುಸ್ತಿ ಸ್ಪರ್ಧೆಯನ್ನು ಪಿ.ಪಿ. ಹೆಗಡೆ ಮಿತ್ರ ಬಳಗ ಸಂಘಟಿಸಿದೆ. ಸುಮಾರು ನೂರಕ್ಕೂ ಹೆಚ್ಚು ಸ್ಪರ್ಧಿಗಳು ಅಖಾಡ ಕುಸ್ತಿಯಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಸ್ಪರ್ಧೆ ವಿಧ್ಯುಕ್ತವಾಗಿ ಆರಂಭವಾದಾಗ ಅಸಂಖ್ಯ ಪ್ರೇಕ್ಷಕರು ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು. ಕಾರ್ಮಿಕೋತ್ಸವ- 2001 ಕಾರ್ಯಕ್ರಮದ ಒಂದಂಗವಾಗಿ ಅಖಾಡ ಕುಸ್ತಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

ಮೂರು ದಿನಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮಂಗಳವಾರ, ತುಳುನಾಡ ಕೇಸರಿ ಬಿರುದು ನೀಡಿ ಸನ್ಮಾನಿಸಲಾಗುವುದು. ಅಂದು ನಡೆಯುವ ಕಾರ್ಮಿಕೋತ್ಸವದಲ್ಲಿ ಮಾಜಿ ಸಚಿವ ಬ್ಲೇಸಿಯಸ್‌ ಡಿಸೋಜ, ಶಾಸಕ ಯೋಗಿಶ್‌ ಭಟ್‌, ಡಿ.ವಿ. ಸದಾನಂದ ಗೌಡ, ಎಂ.ಕೆ. ಇಬ್ರಾಹಿಂ ಅವರು ಭಾಗವಹಿಸುವರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X