ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಧರಣಿ ಆಳುವ ಯೋಗ ನೋಡಿ ನಿಮ್ಮ ಸ್ನೇಹಿತರು ನಿಮ್ಮನ್ನು ಮುತ್ತಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಭಾಗ್ಯವನ್ನು ಕಾಪಾಡಿಕೊಂಡು ಬರುವುದು ಮುಖ್ಯ.ವೃಷಭ : ಇವತ್ತಿನ ರಿಲ್ಯಾಕ್ಸ್ ಮೂಡ್ ನಂತರ ನಿಮ್ಮ ಬಳಿ ಸದ್ಯಕ್ಕೆ ಸುಳಿಯುವುದಿಲ್ಲ. ಸಂಜೆಯೆಲ್ಲಾ ಸುಂದರವಾಗಿರುತ್ತದೆ.
ಮಿಥುನ : ನಿಮ್ಮ ಪ್ರೀತಿಯ ತಿಂಡಿ ತಿನಿಸುಗಳನ್ನೆಲ್ಲಾ ನಿಮ್ಮ ಸ್ನೇಹಿತರು ಕೊಡಿಸ್ತಾರೆ. ಸಂಜೆ ಕೂಡ ಮತ್ತೆ ಸ್ನೇಹಿತರ ಗುಂಪಿನಲ್ಲಿಯೇ ಮುಳುಗಿರುತ್ತೀರಿ.
ಕಟಕ : ನೌಕರಿ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ಇದೆ. ಶಿಫಾರಸುಗಳ ಕುರಿತು ಮಾತುಕತೆ ನಡೆಸಲು ಇದು ಸೂಕ್ತ ದಿನ.
ಸಿಂಹ : ನಿಮ್ಮ ಕಿರಿಕಿರಿ ಮನಸ್ಸಿಗೆ ಇವತ್ತು ತಂಪೆರೆಯುವವರು ನಿಮ್ಮ ಬಳಿ ಸಾಗಿ ಬರುತ್ತಾರೆ. ನಿರೀಕ್ಷೆ ನಿಜವಾದಾಗ ಆಗುವ ಸಂತೋಷಕ್ಕಿಂತ ದೊಡ್ಡದು ಬೇರೇನಿದೆ.
ಕನ್ಯಾ : ನಿಮ್ಮ ನೌಕರಿ ಸ್ವರೂಪಕ್ಕೂ ನಿಮ್ಮ ಮನೋಭಾವಕ್ಕೂ ಸರಿ ಹೊಂದುತ್ತಿಲ್ಲ ಎಂಬ ಕೀಳರಿಮೆ ಬೇಡ. ನಿಮ್ಮ ಸೃಜನ ಶೀಲತೆಗೆ ಒಂದು ವೇದಿಕೆ ಸಿಕ್ಕಿದೆ ಎಂಬುದನ್ನು ಮರೆಯಬೇಡಿ.
ತುಲಾ : ಉತ್ಸಾಹದಲ್ಲಿ ಕೆಲಸಗಳನ್ನು ಆರಂಭಿಸುವಾಗ ಮುಂದಿನ ದಿನಗಳ ಬಗ್ಗೆ ಸರಿಯಾಗಿ ಯೋಚಿಸುವುದು ಸೂಕ್ತ. ಧನಲಾಭವಾದರೆ ಸ್ನೇಹಿತರೂ ಕೂಡ ಹತ್ತಿರದಲ್ಲಿರುತ್ತಾರೆ.
ವೃಶ್ಚಿಕ : ಹೊಸ ಖುಷಿಯಲ್ಲಿದ್ದೀರಿ. ಮನೆಯವರ ಆಕಾಂಕ್ಷೆಗಳು ನಿಮ್ಮೆದೆಯಲ್ಲಿ ನಿಚ್ಚಳವಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲಾ ಎದುರಿಸುವುದು ಕಷ್ಟವೇ ?
ಧನಸ್ಸು : ಮತ್ತೆ ಸಂತೋಷದ ದಿನಗಳು ನಿಮ್ಮನು ಹುಡುಕಿಕೊಂಡು ಬಂದಿವೆ. ಕಳೆದೊಂದು ನಿಧಿ ಸಿಕ್ಕಿದಷ್ಟು ಖುಷಿ ಕೊಡುವ ಸ್ನೇಹಿತರು ನಿಮ್ಮ ಭೇಟಿಯಾಗಬಹುದು.
ಮಕರ : ಕೈಗೆ ನಿಲುಕುತ್ತಿದೆ ಎಂದೇ ಅಂದುಕೊಂಡಿರುವ ವಿಷಯಗಳು ದೂರವಿದೆ ಎಂಬುದು ಗೊತ್ತಾದಾಗ ಬೇಜಾರು ಸಹಜ. ಅದರಿಂದ ವಾಸ್ತವದಲ್ಲಿ ನೀವು ಕಳೆದುಕೊಳ್ಳುವುದು ಏನೂ ಇಲ್ಲ.
ಕುಂಭ : ಮನೆಯಲ್ಲಿ ಶುಭ ಕಾರ್ಯಗಳು ನಡೆಯುವಾಗ ನೀವು ಕೈಕೊಡುವುದು ಸರಿಯಲ್ಲ. ಮನೆಯ ರಾಶಿ ಕೆಲಸಗಳನ್ನು ಹಗುರಾಗಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಿ.
ಮೀನ : ದಿನವೂ ನೋವುಂಡ ಮನಸ್ಸಿಗೆ ಇವತ್ತು ಸಾಂತ್ವನ ಸಿಗಲಿದೆ. ತುಂಬಾ ಕೆಲಸಗಳಿವೆ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವುದು ಬೇಡ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications