ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಆಫೀಸಿನ ಉಸಾಬರಿಯಿಂದ ಹೊರಬಂದ ನಿಮಗೆ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು ಆಗುತ್ತಿಲ್ಲ. ಇವತ್ತಿನ ಮಟ್ಟಿಗೆ ನೀವು ಆಫೀಸಿನ ಯೋಚನೆಯನ್ನು ಮನದಿಂದ ಕಿತ್ತೆಸೆಯಿರಿ.
ಮಿಥುನ : ಸಿಕ್ಕಾಪಟ್ಟೆ ಬಳಿದು ತಿನ್ನುವುದು ತರವಲ್ಲ. ಸಿಕ್ಕಿ ಬಿದ್ದರೆ ಪೆಟ್ಟು ಗ್ಯಾರಂಟಿ. ಇಂಥಾ ಭಯದ ಸೂಚನೆಗಳು ನಿವ್ವಳವಾಗಿವೆ. ಎಚ್ಚರ.
ಕಟಕ : ಕುಂಟುತ್ತಿದ್ದ ಹೊಸ ಯೋಜನೆಗೆ ಮಿಂಚಿನ ಚಾಲನೆ. ಇನ್ನು ನೀವು ಸಿಕ್ಕಾಪಟ್ಟೆ ಬ್ಯುಸಿಯಾಗಲಿದ್ದೀರಿ.
ಸಿಂಹ : ಅಡಿಕೆ ಕತ್ತರಿಗೆ ಸಿಕ್ಕಿರುವ ನಿಮ್ಮನ್ನು ಕಾಪಾಡಲು ಆ ದೇವರಿಗೆ ಮಾತ್ರ ಸಾಧ್ಯ. ಆತನ ಮೊರೆಹೋಗಿ.
ಕನ್ಯಾ : ಬಿಸಿಲ ಬೇಗೆಯಲ್ಲಿ ವಿಪರೀತ ಸುತ್ತಾಡಿದ್ದಕ್ಕಷ್ಟೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿರುವುದು. ಹಠ ಬಿಟ್ಟು ವೈದ್ಯರ ಬಳಿಗೆ ಹೋಗಿ, ಎಲ್ಲಾ ಸರಿ ಹೋಗುತ್ತೆ.
ತುಲಾ : ಒಂದು ದೀರ್ಘ ನಿದ್ದೆಯಿಂದ ಎದ್ದ ಅನುಭವ. ನೀಗಿದ ಜಡ ನಿಮ್ಮನ್ನು ಚೈತನ್ಯದ ಬುಗ್ಗೆಯಾಗಿಸಲಿದೆ.
ವೃಶ್ಚಿಕ : ನಗು ಮುಖ ಮೇಲೆ, ವೇದನೆ ಒಳಗೆ. ಇದು ಸಲ್ಲ. ಒಳಗಿನ ಕೊಳಕ ಹೊರಚೆಲ್ಲಿ. ಹೃದಯ ಹಗೂರಾಗುತ್ತೆ.
ಧನಸ್ಸು : ಆಡಿದೊಂದು ಮಾತಿಗೆ ನೀವು ತಪ್ಪಿರುವುದೇ ಇಷ್ಟೆಲ್ಲಾ ಆಭಾಸಕ್ಕೆ ಕಾರಣ. ಇವಕ್ಕೆಲ್ಲಾ ಫುಲ್ಸ್ಟಾಪ್ ಹಾಕಬೇಕಾದರೆ ನೀವೇ ರಾಜಿಯಾಗಬೇಕು.
ಮಕರ : ಮಧುರ ನೆನಪುಗಳ ಮರುಕಳಿಕೆ ಹಾಯ್ ಅನ್ನಿಸುತ್ತದೆ. ಕೆಲಸದ ಬಿಡುವಿನ ಈ ದಿನದ ಹರಟೆ ದಿನಾ ಇದ್ದರೆಷ್ಟು ಚೆನ್ನ ಅಂದುಕೊಳ್ಳುವಿರಿ.
ಕುಂಭ : ಬಹು ದಿನಗಳಿಂದ ದೇವಸ್ಥಾನದ ಕಡೆಗೆ ತಿರುಗಿಯೂ ನೋಡಿಲ್ಲ. ಇವತ್ತು ಹೋಗಿಬನ್ನಿ . ಮನಸ್ಸು ತಿಳಿಯಾಗುತ್ತೆ.
ಮೀನ : ನಿಮ್ಮ ನೆಚ್ಚಿನ ಆಟ ಆಡುವ ಯೋಗ ಇಂದಿ-ಲ್ಲ . ಮೈಕೈ ನೋವನ್ನು ಎಳೆದುಕೊಳ್ಳುವ ಮನಸ್ಸಿದ್ದಲ್ಲಿ ಮಾತ್ರ ನುಗ್ಗಬೇಕಷ್ಟೆ.