ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಂಭ್ರಮದ ದಿನವನ್ನು ಎದುರು ನೋಡುತ್ತಿರುವ ನಿಮ್ಮ ನಿರೀಕ್ಷೆ ಸುಳ್ಳಾಗುವುದಿಲ್ಲ. ಪುತ್ರನಿಂದ ಶ್ರೇಯಸ್ಸಿನ ವಾರ್ತೆ ಲಭಿಸಲಿದೆ.ವೃಷಭ : ಆಫೀಸಿನಲ್ಲಿ ಮುಗಿಸಬೇಕಾದ ಅಸೈನ್ಮೆಂಟ್ ಮುಗಿಸಿದ ಆರಾಮ ನಿಮ್ಮ ಬಳಿಯಿರುತ್ತದೆ. ರಿಲ್ಯಾಕ್ಸ್ಗೆಂದು ಸಣ್ಣ ಪಿಕ್ನಿಕ್ಗೆ ಯಾಕೆ ಹೋಗಬಾರದು?
ಮಿಥುನ : ಬೈಗುಳ, ಜಗಳಗಳಿಂದ ನೀವಿನ್ನೂ ಪೂರ್ತಿ ಮುಕ್ತರಾಗಿಲ್ಲ . ಮನೆಯಿಂದ ನೆಮ್ಮದಿ ತರುವ ಸುದ್ದಿಗಳು ನಿಮ್ಮ ಖುಷಿಯಾಗಿರಿಸಬಲ್ಲವು.
ಕಟಕ : ಇಂದು ಉದ್ಯೋಗ ಬೇಟೆಯಾಡುವವರಿಗೆ ಶುಭವಿದೆ. ಲಕ್ಷ್ಮೀ ಆರಾಧನೆಯಿಂದ ಇಷ್ಟ ಸಿದ್ಧಿಯಾಗಲಿದೆ. ದೇವಸ್ಥಾನಕ್ಕಾದರೂ ಹೋಗುವುದನ್ನು ಮರೆಯಬೇಡಿ.
ಸಿಂಹ : ಪರೀಕ್ಷೆಗಳು ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಗೆಲವು ಕೂಡ ಹಾಗೇ. ಆದರೆ ಈ ಬಾರಿ ನಿಮಗೆ ಸಿಗುವ ಗೆಲವು ಎಂದಿಗಿಂತ ರೋಮಾಂಚನ ತರುವಂತಹುದು.
ಕನ್ಯಾ : ಪ್ರವಾಸ ಹೊರಟು ಹೋಗಿ ಬಹಳ ದಿನಗಳಾದವು ಹೌದು. ಆದರೆ, ಸದ್ಯಕ್ಕೆ ನಿಮ್ಮ ಆರ್ಥಿಕ ಲಾಭವನ್ನು ಬೇರೆ ಯೋಜನೆಗಳಲ್ಲಿ ತೊಡಗಿಸಬೇಕಾಗಿ ಬರಬಹುದು. ನಿಧಾನ ಲಾಭವಾದರೂ ಸಂತೋಷದ ಸುದ್ದಿ ತಾನೇ?
ತುಲಾ : ಬರೀ ಕಿರಿಕಿರಿ ಮಾಡುವ ಸ್ನೇಹಿತರ ಬಳಿಯೇ ಯಾಕೆ ಹರಟುತ್ತೀರಿ. ಎಲ್ಲ ಕೆಲಸಗಳನ್ನು ಪಕ್ಕಕ್ಕಿಟ್ಟರೆ ಸೋಲುತ್ತೀರಿ ಅಲ್ವಾ?
ವೃಶ್ಚಿಕ : ಮೂಗಿನ ತುದಿಯಲ್ಲಿಯೇ ಇರುವ ಸಿಟ್ಟನ್ನು ಆಚೆಗೆ ದೂಡದಿದ್ದರೆ ಚೆಂದದ ದಿನವನ್ನು ಕಳೆದುಕೊಳ್ಳುತ್ತೀರಿ. ಕಾಯುತ್ತಿರುವ ಸ್ನೇಹಿತರಿಗೆ ನಗು ಮುಖ ತೋರಿಸಿ.
ಧನಸ್ಸು : ನಿರ್ಧಾರಗಳನ್ನು ಮಾಡುವುದರಲ್ಲಿ ಎಷ್ಟು ನಿಸ್ಸೀಮರೋ, ಅದನ್ನು ಮುರಿಯುವುದರಲ್ಲಿಯೂ ಅಷ್ಟೇ ನಿಸ್ಸೀಮರು ನೀವು ಎಂಬುದು ಸ್ನೇಹಿತರಿಗೆ ತಿಳಿದರೆ ಬೇಜಾರಾಗುತ್ತಾರೆ.
ಮಕರ : ಕನಸುಗಳು ಅಪರೂಪಕ್ಕೆ ಮಾತ್ರ ನನಸಾಗುವುದು. ಅವುಗಳನ್ನು ಯಾರೋ ಕಿತ್ತು ಕೊಳ್ಳುತ್ತಾರೆ ಎಂಬ ಭಯದಲ್ಲಿ ಹುರುಳಿಲ್ಲ.
ಕುಂಭ : ಹುಚ್ಚು ಆವೇಶಗಳಿಗೆಲ್ಲಾ ನೀವು ಬಲಿಯಾದರೆ ಹೇಗೆ ? ಇವತ್ತು ಸಂಜೆ ಅಪರೂಪದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಶುಭ ತಾನೇ?
ಮೀನ : ಅಕ್ಕರೆ ಸಕ್ಕರೆ ನಿಮ್ಮ ಬಳಿಯೂ ಇದೆ ಎಂಬುದನ್ನು ಕಂಡು ನಿಮ್ಮ ಬಂಧುಗಳು ಖುಷಿ ಪಡುತ್ತಾರೆ. ನಿಮ್ಮ ಪ್ಲಾನ್ಗಳು ಕಾರ್ಯರೂಪಕ್ಕೆ ಬರುವುದು ತಡವಾದರೂ ಅವು ಸುಂದರವಾಗಿರುತ್ತವೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications