ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ಆಫೀಸಿನಲ್ಲಿ ಮುಗಿಸಬೇಕಾದ ಅಸೈನ್ಮೆಂಟ್ ಮುಗಿಸಿದ ಆರಾಮ ನಿಮ್ಮ ಬಳಿಯಿರುತ್ತದೆ. ರಿಲ್ಯಾಕ್ಸ್ಗೆಂದು ಸಣ್ಣ ಪಿಕ್ನಿಕ್ಗೆ ಯಾಕೆ ಹೋಗಬಾರದು?
ಮಿಥುನ : ಬೈಗುಳ, ಜಗಳಗಳಿಂದ ನೀವಿನ್ನೂ ಪೂರ್ತಿ ಮುಕ್ತರಾಗಿಲ್ಲ . ಮನೆಯಿಂದ ನೆಮ್ಮದಿ ತರುವ ಸುದ್ದಿಗಳು ನಿಮ್ಮ ಖುಷಿಯಾಗಿರಿಸಬಲ್ಲವು.
ಕಟಕ : ಇಂದು ಉದ್ಯೋಗ ಬೇಟೆಯಾಡುವವರಿಗೆ ಶುಭವಿದೆ. ಲಕ್ಷ್ಮೀ ಆರಾಧನೆಯಿಂದ ಇಷ್ಟ ಸಿದ್ಧಿಯಾಗಲಿದೆ. ದೇವಸ್ಥಾನಕ್ಕಾದರೂ ಹೋಗುವುದನ್ನು ಮರೆಯಬೇಡಿ.
ಸಿಂಹ : ಪರೀಕ್ಷೆಗಳು ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಗೆಲವು ಕೂಡ ಹಾಗೇ. ಆದರೆ ಈ ಬಾರಿ ನಿಮಗೆ ಸಿಗುವ ಗೆಲವು ಎಂದಿಗಿಂತ ರೋಮಾಂಚನ ತರುವಂತಹುದು.
ಕನ್ಯಾ : ಪ್ರವಾಸ ಹೊರಟು ಹೋಗಿ ಬಹಳ ದಿನಗಳಾದವು ಹೌದು. ಆದರೆ, ಸದ್ಯಕ್ಕೆ ನಿಮ್ಮ ಆರ್ಥಿಕ ಲಾಭವನ್ನು ಬೇರೆ ಯೋಜನೆಗಳಲ್ಲಿ ತೊಡಗಿಸಬೇಕಾಗಿ ಬರಬಹುದು. ನಿಧಾನ ಲಾಭವಾದರೂ ಸಂತೋಷದ ಸುದ್ದಿ ತಾನೇ?
ತುಲಾ : ಬರೀ ಕಿರಿಕಿರಿ ಮಾಡುವ ಸ್ನೇಹಿತರ ಬಳಿಯೇ ಯಾಕೆ ಹರಟುತ್ತೀರಿ. ಎಲ್ಲ ಕೆಲಸಗಳನ್ನು ಪಕ್ಕಕ್ಕಿಟ್ಟರೆ ಸೋಲುತ್ತೀರಿ ಅಲ್ವಾ?
ವೃಶ್ಚಿಕ : ಮೂಗಿನ ತುದಿಯಲ್ಲಿಯೇ ಇರುವ ಸಿಟ್ಟನ್ನು ಆಚೆಗೆ ದೂಡದಿದ್ದರೆ ಚೆಂದದ ದಿನವನ್ನು ಕಳೆದುಕೊಳ್ಳುತ್ತೀರಿ. ಕಾಯುತ್ತಿರುವ ಸ್ನೇಹಿತರಿಗೆ ನಗು ಮುಖ ತೋರಿಸಿ.
ಧನಸ್ಸು : ನಿರ್ಧಾರಗಳನ್ನು ಮಾಡುವುದರಲ್ಲಿ ಎಷ್ಟು ನಿಸ್ಸೀಮರೋ, ಅದನ್ನು ಮುರಿಯುವುದರಲ್ಲಿಯೂ ಅಷ್ಟೇ ನಿಸ್ಸೀಮರು ನೀವು ಎಂಬುದು ಸ್ನೇಹಿತರಿಗೆ ತಿಳಿದರೆ ಬೇಜಾರಾಗುತ್ತಾರೆ.
ಮಕರ : ಕನಸುಗಳು ಅಪರೂಪಕ್ಕೆ ಮಾತ್ರ ನನಸಾಗುವುದು. ಅವುಗಳನ್ನು ಯಾರೋ ಕಿತ್ತು ಕೊಳ್ಳುತ್ತಾರೆ ಎಂಬ ಭಯದಲ್ಲಿ ಹುರುಳಿಲ್ಲ.
ಕುಂಭ : ಹುಚ್ಚು ಆವೇಶಗಳಿಗೆಲ್ಲಾ ನೀವು ಬಲಿಯಾದರೆ ಹೇಗೆ ? ಇವತ್ತು ಸಂಜೆ ಅಪರೂಪದ ಸ್ನೇಹಿತರನ್ನು ಭೇಟಿಯಾಗುವ ಯೋಗವಿದೆ. ಶುಭ ತಾನೇ?
ಮೀನ : ಅಕ್ಕರೆ ಸಕ್ಕರೆ ನಿಮ್ಮ ಬಳಿಯೂ ಇದೆ ಎಂಬುದನ್ನು ಕಂಡು ನಿಮ್ಮ ಬಂಧುಗಳು ಖುಷಿ ಪಡುತ್ತಾರೆ. ನಿಮ್ಮ ಪ್ಲಾನ್ಗಳು ಕಾರ್ಯರೂಪಕ್ಕೆ ಬರುವುದು ತಡವಾದರೂ ಅವು ಸುಂದರವಾಗಿರುತ್ತವೆ.