ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೆಜ್ಜೆಗೆ ಅಡ್ಡಬರುವ ದೇವಸ್ಥಾನಗಳಮುಲಾಜಿಲ್ಲದೆ ಕೆಡವಿ - ಕೃಷ್ಣ
ಬೆಂಗಳೂರು : ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಗರದ ರಸ್ತೆಗಳ ಕಾಲುದಾರಿಗಳಲ್ಲಿ ನಿರ್ಮಿಸಿರುವ ದೇವಸ್ಥಾನಗಳನ್ನು ಧ್ವಂಸ ಮಾಡುವಂತೆ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಪಷ್ಟ ಸೂಚನೆ ನೀಡಿದ್ದಾರೆ.
ನಗರದ ಮೇಯರ್ ಪ್ರೇಮಾ ಕಾರಿಯಪ್ಪ ಹಾಗೂ ಆಯುಕ್ತ ಅಶೋಕ್ ದಳವಾಯಿ ಅವರ ಜೊತೆ ಶುಕ್ರವಾರ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಕೃಷ್ಣ ಈ ಸೂಚನೆ ನೀಡಿದ್ದಾರೆ. ಫುಟ್ಪಾತ್ ಮೇಲೆ ಕಟ್ಟಡ ಕಟ್ಟುವುದು ಕಾನೂನು ವಿರುದ್ಧವಾದುದು. ಇಂಥಾ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ, ಓಡಾಡುವವರಿಗೆ ಮುಕ್ತ ಹಾದಿಗಳನ್ನು ಒದಗಿಸಬೇಕೆಂದು ಕೃಷ್ಣ ತಿಳಿಸಿದರು.
(ಇನ್ಫೋ ವಾರ್ತೆ)
Comments
Story first published: Friday, April 27, 2001, 5:30 [IST]