ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಜ್ಜೆಗೆ ಅಡ್ಡಬರುವ ದೇವಸ್ಥಾನಗಳಮುಲಾಜಿಲ್ಲದೆ ಕೆಡವಿ - ಕೃಷ್ಣ

By Staff
|
Google Oneindia Kannada News

ಬೆಂಗಳೂರು : ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ನಗರದ ರಸ್ತೆಗಳ ಕಾಲುದಾರಿಗಳಲ್ಲಿ ನಿರ್ಮಿಸಿರುವ ದೇವಸ್ಥಾನಗಳನ್ನು ಧ್ವಂಸ ಮಾಡುವಂತೆ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸ್ಪಷ್ಟ ಸೂಚನೆ ನೀಡಿದ್ದಾರೆ.

ನಗರದ ಮೇಯರ್‌ ಪ್ರೇಮಾ ಕಾರಿಯಪ್ಪ ಹಾಗೂ ಆಯುಕ್ತ ಅಶೋಕ್‌ ದಳವಾಯಿ ಅವರ ಜೊತೆ ಶುಕ್ರವಾರ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಕೃಷ್ಣ ಈ ಸೂಚನೆ ನೀಡಿದ್ದಾರೆ. ಫುಟ್‌ಪಾತ್‌ ಮೇಲೆ ಕಟ್ಟಡ ಕಟ್ಟುವುದು ಕಾನೂನು ವಿರುದ್ಧವಾದುದು. ಇಂಥಾ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ, ಓಡಾಡುವವರಿಗೆ ಮುಕ್ತ ಹಾದಿಗಳನ್ನು ಒದಗಿಸಬೇಕೆಂದು ಕೃಷ್ಣ ತಿಳಿಸಿದರು.

ಒಳಚರಂಡಿ, ಮೋರಿಗಳನ್ನು ಸ್ವಚ್ಛಗೊಳಿಸಿ ಮಳೆಯ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು, ತಗ್ಗಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಲು ಹಾಗೂ ಮಳೆ ಹಾವಳಿಗೆ ನಗರ ತುತ್ತಾಗದಂತೆ ಜರೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಪಾಲಿಕೆಗೆ ಅವರು ಸೂಚಿಸಿದರು. ಆಮೆ ಗತಿಯಲ್ಲಿ ಸಾಗುತ್ತಿರುವ ಆಪ್ಟಿಕಲ್‌ ಕೇಬಲ್‌ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಹಾಗೂ ಕೇಬಲ್‌ ಅಳವಡಿಕೆಯನ್ನು ಶೀಘ್ರ ಕೊನೆಗೊಳಿಸಲು ಸಂಬಂಧಿಸಿದವರಿಗೆ ಎಚ್ಚರಿಕೆ ನೀಡುವಂತೆ ಕೃಷ್ಣ ಸೂಚಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X