ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಏನೆಲ್ಲಾ ಇದ್ದರೂ ಮನಸ್ಸಿಗೆ ಹತ್ತಿರವಿದ್ದ ಸ್ನೇಹಿತರು ಇಲ್ಲವೆಂದರೆ, ಎಲ್ಲ ಸಂತೋಷಗಳೂ ಸಣ್ಣದೆನಿಸುತ್ತವೆ. ಆದರೆ ಆಕಾಶ ಕಳಚಿ ಬೀಳುವಂತಹುದೇನೂ ಆಗಿಲ್ಲ ಎಂಬ ನಿಜವನ್ನು ಮರೆತು ಬಿಡಬೇಡಿ.

ವೃಷಭ : ಸಿಟ್ಟು ಬೇಸರಗಳಿಗೆಲ್ಲಾ ಇದು ಕಾಲವಲ್ಲ, ಹರಿ ಅಪ್‌, ನಿಮ್ಮ ಅದೃಷ್ಟ ಇರುವುದು ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ . ಆದ್ದರಿಂದ ಮನೆಯ ವ್ಯವಹಾರಗಳೆಲ್ಲಾ ಸದ್ಯಕ್ಕೆ ಪಕ್ಕದಲ್ಲಿರಲಿ.

ಮಿಥುನ : ನಿಮಗೇ ಅರ್ಥವಾಗದ ಸಮಸ್ಯೆಗಳ ಬಗ್ಗೆಯೆಲ್ಲಾ ಚಿಂತಿಸಲು ಇದು ಸಮಯ ಅಲ್ಲ. ಹೊಡೆಯುವ ದಾರಿಗೆ ಹೋಗುವ ಬಂಡಿಯ ಸಾಮರ್ಥ್ಯ ಕಡಿಮೆ ಆಗದಿದ್ದರೆ ಆಯ್ತು.

ಕಟಕ : ನೀವು ಕಣ್ಣಿಟ್ಟಿರುವುದು ಒಳ್ಳೆಯ ಪ್ರೊಜೆಕ್ಟ್‌ಗೇ. ಆದರೆ ನಿಮ್ಮ ವಿರೋಧಿಗಳು ಹಿಮಾಲಯದಂತೆ ನಿಮಗೆ ಅಡ್ಡ ನಿಂತಿದ್ದಾರಲ್ವಾ?

ಸಿಂಹ : ಪ್ರೀತಿ ಪ್ರೇಮಗಳ ವಿಷಯದಲ್ಲಿ ನೀವು ಸೋಲುತ್ತಿದ್ದರೆ, ಸದ್ಯಕ್ಕೆ ಆ ವಿಷಯವನ್ನು ಕೈಬಿಟ್ಟು ಬೇರೆ ಕೆಲಸಗಳತ್ತ ಗಮನ ಕೊಟ್ಟರಾಯ್ತು.

ಕನ್ಯಾ : ಧನ ಲಾಭವೆಂಬುದು ನಿಮ್ಮ ಚಾಲಾಕಿತನವನ್ನು ಅವಲಂಬಿಸಿ ಬರುತ್ತದೆ. ಮನೆಯಲ್ಲಿ ಸಿಗುವ ಬಿಟ್ಟಿ ಸಲಹೆಯ ಮೂಲೆಯಲ್ಲೂ ಸ್ವಲ್ಪ ಹುರುಳಿರಬಹುದು.

ತುಲಾ : ಬೈಗುಳಗಳ ನಿರೀಕ್ಷೆ ಮಾಡಿ, ದಿನದ ಕೊನೆಗೆ ಅವಾಕ್ಕಾಗುತ್ತೀರಿ. ನೀವು ಪೂರೈಸುತ್ತಿರುವ ಕೆಲಸಗಳಲ್ಲಿ ಆಸ್ಥೆಯಿದ್ದಲ್ಲಿ ಸೋಲು ಹೇಗೆ ತಾನೇ ಹತ್ತಿರ ಸುಳಿಯುತ್ತದೆ?

ವೃಶ್ಚಿಕ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯೋಗ ನಿಮ್ಮ ಬಳಿಗೆ ಬಂದಿದೆ. ಹಾಗೇ ಬುದ್ಧಿ ಹೇಳಿಸಿಕೊಳ್ಳುವುದಕ್ಕೆ, ಚಿಂತನೆಗೆ ಇದು ಸಕಾಲ.

ಧನಸ್ಸು : ಲೆಕ್ಕಾಚಾರಗಳು, ಅಂದಾಜುಗಳು ಎಲ್ಲ ಕಾಲದಲ್ಲಿಯೂ ನಿಜವಾಗಿರುವುದಿಲ್ಲ. ಅದಕ್ಕೆಲ್ಲಾ ಹೆಚ್ಚು ಬೇಜಾರು ಮಾಡಿಕೊಳ್ಳಬಾರದು. ಮಕ್ಕಳ ಆರೈಕೆಯತ್ತ ಗಮನ ಕಡಿಮೆಯಾಗದಿರಲಿ.

ಮಕರ : ನಿಮಿಷಕ್ಕೆಲ್ಲಾ ನೀವು ನೋವು ಬೇಜಾರುಗಳನ್ನು ಮರೆಸುವ, ಮುಗಿಸುವ ಪ್ರಕ್ರಿಯೆಯನ್ನು ಮತ್ತೆ ಚಾಲ್ತಿಗೆ ತರುತ್ತೀರಿ. ಹೆಚ್ಚಿನ ಲಾಭವಿಲ್ಲದಿರಬಹುದು.

ಕುಂಭ : ಇವತ್ತೆಲ್ಲಾ ಸರಸ್ವತಿ ನಿಮಗೊಲಿದಿರುತ್ತಾಳೆ. ಆದರೂ ಸುಮ್ಮಾ ಸುಮ್ಮನೇ ಜಗಳಗಳನ್ನು ಹುಟ್ಟು ಹಾಕುವುದನ್ನು ಕಂಪಲ್‌ಸರಿ ಕಡಿಮೆ ಮಾಡಬೇಕು.

ಮೀನ : ನಿಮ್ಮ ಸಿಹಿ ಮುಖ ಕಂಡು ಕಾಲ ಬಹಳಾಯ್ತು ಎಂದುಕೊಂಡು ಖುಷಿಯಾಗಿರುವ ಗೆಳೆಯರ ಎದೆಗೆ ಕಲ್ಲು ಹಾಕುವುದಿಲ್ಲ ತಾನೇ ? ಮನೆಯಲ್ಲಿನ ಜವಾಬ್ದಾರಿಗಳು ನಿಮ್ಮನ್ನು ಹಣ್ಣಾಗಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X