ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ : ನಿಮ್ಮ ಕೈಗುಣವನ್ನು ಬಂಧುಗಳು ಇವತ್ತೆಲ್ಲಾ ಕೊಂಡಾಡುತ್ತಾರೆ. ಉಬ್ಬಿ ಹೋಗದಿದ್ದರಾಯ್ತು. ಮತ್ತೆ ನಿಮ್ಮ ಬಳಿಗೆ ಅಸೈನ್ಮೆಂಟ್ಗಳು ಬರುತ್ತವೆ.
ಮಿಥುನ : ನಿಮ್ಮ ನಿತ್ರಾಣದಿಂದ ಇನ್ನೊಬ್ಬರಿಗೆ ನೋವಾಗದ ಹಾಗೋ ಸ್ವಲ್ಪ ಜಾಗರೂಕರಾಗಿರಬೇಕು. ನಿರೀಕ್ಷೆಗಳನ್ನು ಸುಳ್ಳು ಮಾಡಿಯೇ ಸಣ್ಣವರಾಗುತ್ತೀರಿ.
ಕಟಕ : ಎಲ್ಲ ವಿಷಯಗಳ ಬಗ್ಗೆಯೂ ‘ಚಲ್ತಾ ಹೈ’ ಅನ್ನುವ ಮನೋಭಾವ ಬೇಡ. ಕೆಲವರು ನಿಮ್ಮ ನಡವಳಿಕೆಗಳನ್ನು ಸೂಕ್ಷ್ಮ ವಾಗಿ ಗಮನಿಸುತ್ತಾರೆ.
ಸಿಂಹ : ದೂರ ಪ್ರಯಾಣ ಹೊರಟಿದ್ದೀರಿ. ಅಲ್ಲಿಂದಲೇ ನಿಮ್ಮವರಿಗೆ ಆಜ್ಞೆಗಳನ್ನು ಕಳುಹಿಸುತ್ತಿರುತ್ತೀರಿ. ಆದರೆ ನೀವು ಅಂದುಕೊಂಡಷ್ಟು ಪರಿಸ್ಥಿತಿಗಳು ಗಂಭೀರವಾಗಿಲ್ಲ.
ಕನ್ಯಾ : ನಿಮ್ಮ ಕಿತಾಪತಿಗಳು ನಿಮ್ಮ ಮನೋವಲಯದಾಚೆಗೆ ಕಾಣಿಸುವುದಿಲ್ಲ ಎಂದುಕೊಂಡರೆ ನೀವು ಜಾಣರಲ್ಲ ಎಂದರ್ಥ. ಇಷ್ಟಕ್ಕೂ ಆಫೀಸಿನಲ್ಲಿ ನಿಮ್ಮ ವಿರುದ್ಧ ಪಿತೂರಿ ನಡೆಸುವವರು ಯಾರೂ ಇಲ್ಲ.
ತುಲಾ : ಪುಟ್ಟ ಮಕ್ಕಳು ತರುವ ಕಿರಿಕಿರಿಗೆಲ್ಲಾ ಸಿಟ್ಟಾಗಬಾರದು. ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದೂ ಒಂದು ಕಲೆ ಅಲ್ವೇ?
ವೃಶ್ಚಿಕ : ಸ್ನೇಹಿತರು ಬಂಧುಗಳ ಅಗಲಿಕೆಯಿದ್ದರೂ, ಅವರಿಗಿಂತಲೂ ಆಪ್ತರನ್ನು ಭೇಟಿಯಾಗುತ್ತಿರುವುದರಿಂದ ದುಃಖ ಸ್ವಲ್ಪ ಕಡಿಮೆ ಇರುತ್ತದೆ.
ಧನಸ್ಸು : ಪ್ರವಾಸ ಹೋಗುವ ಯೋಚನೆಯೇನೂ ಒಳ್ಳೆಯದೆ. ಆದರೆ ಸ್ನೇಹಿತರ ಮೂಡ್ ಕೂಡ ತಿಳಿದುಕೊಳ್ಳುವುದು ಅಗತ್ಯ.
ಮಕರ : ಎಲ್ಲರೂ ಕೈ ಕೊಟ್ಟು ಹೋಗಿದ್ದಾರೆ ಎಂಬ ಬೇಜಾರು ಬೇಡ. ಬೇಕಾಗಿರುವುದು ತುಸು ಪ್ರೀತಿ ಅಷ್ಟೆ. ಕೊಟ್ಟು ಪಡೆದುಕೊಂಡರಾಯ್ತು.
ಕುಂಭ : ನಿಮ್ಮ ಸಂಗಾತಿಯ ಮನಸ್ಸಿನೊಳಗಿನ ಗೊಂದಲವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸವಾದರೂ, ಪ್ರಯತ್ನಿಸಬೇಕಾದ್ದು ನಿಮ್ಮ ಧರ್ಮ ತಾನೇ ?
ಮೀನ : ನಿಮ್ಮ ಕೆಲಸ ಕಾರ್ಯಗಳೆಲ್ಲವೂ ಮುಖ್ಯವಾದದ್ದೇ. ಆದರೂ ಅವಕಾಶವಾದಿಯಾಗಲು ಬಯಸುವ ಮನಸ್ಸಿಗೆ ಲಂಗರು ಹಾಕಬೇಕಲ್ವಾ ? ಇಂದೆಲ್ಲಾ ನಿಮ್ಮ ಬಳಿ ಶ್ಲಾಘನೆಗಳಿರುತ್ತವೆ.