ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲ್ಲೂರು - ಗುರುವಾಯೂರು ನಡುವೆ ಹೊಸ ಬಸ್ ಸಂಚಾರ
ಕುಂದಾಪುರ : ಮೂಕಾಂಬಿಕೆಯ ಕ್ಷೇತ್ರವಾದ ಕೊಲ್ಲೂರಿನಿಂದ ಶ್ರೀಕೃಷ್ಣ ನೆಲೆಸಿಹ ಗುರುವಾಯೂರಿಗೆ ಏ.24ರ ಮಂಗಳವಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರವನ್ನು ಆರಂಭಿಸಿದೆ.
ಕುಂದಾಪುರ ಘಟಕ ಆರಂಭಿಸಿರುವ ಈ ಹೊಸ ವೇಗದೂತ ಬಸ್ ಪ್ರತಿದಿನ ರಾತ್ರಿ 8.30ಕ್ಕೆ ಕೊಲ್ಲೂರಿನಿಂದ ಹೊರಟು ಮಾರನೆಯ ದಿನ ಬೆಳಗ್ಗೆ 6-55ಕ್ಕೆ ಗುರುವಾಯೂರು ತಲುಪಲಿದೆ. ಗುರುವಾಯೂರಿನಿಂದ ರಾತ್ರಿ 7.20ಕ್ಕೆ ಬಿಡುವ ಬಸ್ ಮರುದಿನ ಬೆಳಗ್ಗೆ 5.45ಕ್ಕೆ ಕೊಲ್ಲೂರಿಗೆ ಮರಳಲಿದೆ.
ಕೊಲ್ಲೂರಿನಿಂದ ಗುರುವಾಯೂರಿಗೆ ಹೊರಡುವ ಬಸ್ ಕುಂದಾಪುರ ಬಸ್ ನಿಲ್ದಾಣವನ್ನು 9-25ಕ್ಕೆ ಬಿಡಲಿದೆ. ಉಡುಪಿ ಹಾಗೂ ಕುಂದಾಪುರಗಳಲ್ಲಿ ಸ್ಥಳ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್ಆರ್ಟಿಸಿಯ ಕುಂದಾಪುರ ಘಟಕದ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, April 25, 2001, 5:30 [IST]