ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು - ಗುರುವಾಯೂರು ನಡುವೆ ಹೊಸ ಬಸ್‌ ಸಂಚಾರ

By Staff
|
Google Oneindia Kannada News

ಕುಂದಾಪುರ : ಮೂಕಾಂಬಿಕೆಯ ಕ್ಷೇತ್ರವಾದ ಕೊಲ್ಲೂರಿನಿಂದ ಶ್ರೀಕೃಷ್ಣ ನೆಲೆಸಿಹ ಗುರುವಾಯೂರಿಗೆ ಏ.24ರ ಮಂಗಳವಾರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರವನ್ನು ಆರಂಭಿಸಿದೆ.

ಕುಂದಾಪುರ ಘಟಕ ಆರಂಭಿಸಿರುವ ಈ ಹೊಸ ವೇಗದೂತ ಬಸ್‌ ಪ್ರತಿದಿನ ರಾತ್ರಿ 8.30ಕ್ಕೆ ಕೊಲ್ಲೂರಿನಿಂದ ಹೊರಟು ಮಾರನೆಯ ದಿನ ಬೆಳಗ್ಗೆ 6-55ಕ್ಕೆ ಗುರುವಾಯೂರು ತಲುಪಲಿದೆ. ಗುರುವಾಯೂರಿನಿಂದ ರಾತ್ರಿ 7.20ಕ್ಕೆ ಬಿಡುವ ಬಸ್‌ ಮರುದಿನ ಬೆಳಗ್ಗೆ 5.45ಕ್ಕೆ ಕೊಲ್ಲೂರಿಗೆ ಮರಳಲಿದೆ.

ಕೊಲ್ಲೂರಿನಿಂದ ಗುರುವಾಯೂರಿಗೆ ಹೊರಡುವ ಬಸ್‌ ಕುಂದಾಪುರ ಬಸ್‌ ನಿಲ್ದಾಣವನ್ನು 9-25ಕ್ಕೆ ಬಿಡಲಿದೆ. ಉಡುಪಿ ಹಾಗೂ ಕುಂದಾಪುರಗಳಲ್ಲಿ ಸ್ಥಳ ಕಾಯ್ದಿರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಕುಂದಾಪುರ ಘಟಕದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X