Get Updates
Get notified of breaking news, exclusive insights, and must-see stories!

ಜನತಾ ದರ್ಶನ ! ಭೂಕಂಪ ಸಂತ್ರಸ್ತ ಮಹಿಳೆ ನೆರವಿಗೆ ಜನಾರ್ಧನ

ಬೆಂಗಳೂರು : ಜನವರಿ 26 ರಂದು ಸಂಭವಿಸಿದ ಸಮೂಹ ನಾಶಕ ಗುಜರಾತ್‌ ಭೂಕಂಪದಲ್ಲಿ ಗಂಡ, ಮಗ ಹಾಗೂ ಬಲಗೈ ಕಳೆದುಕೊಂಡಿರುವ ಮಹಿಳೆಯಾಬ್ಬರ ಜೀವನೋಪಾಯಕ್ಕಾಗಿ 50 ಸಾವಿರ ರುಪಾಯಿಗಳನ್ನು, ಮಂಗಳವಾರ ತಮ್ಮ ಜನತಾದರ್ಶನ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸ್ಥಳದಲ್ಲೇ ಮಂಜೂರು ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರಾಜಾಜಿನಗರದ ಕಿರಣ್‌ ಬೆನ್‌ ಎನ್ನುವ ಮಹಿಳೆ, ತಮ್ಮ ಅಳಲನ್ನು ತೋಡಿಕೊಂಡರು. ಸಂತ್ರಸ್ತ ಹೆಣ್ಣು ಮಗಳ ಅಳಲಿಗೆ ತಕ್ಷಣವೇ ಸ್ಪಂದಿಸಿದ ಕೃಷ್ಣ , 50 ಸಾವಿರ ರುಪಾಯಿಗಳನ್ನು ಮಂಜಾರು ಮಾಡಿ, ಅಗತ್ಯ ದಾಖಲೆಗಳನ್ನು ಪೂರೈಸಿ ಹಣ ಪಡೆಯುವಂತೆ ಸೂಚಿಸಿದರು.

ಉದ್ಯೋಗ ಮಾರ್ಗದರ್ಶಿ : ಇದೇ ಸಂರ್ದದಲ್ಲಿ ಬಿಜಾಪುರದ ಅಂಗವಿಕಲ ಮಹಿಳೆ ಲಕ್ಷ್ಮೀಬಾಯಿ ಎನ್ನುವವರಿಗೆ ಬಿಎಚ್‌ಇಎಲ್‌ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ನೆರವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೃಷ್ಣ ಸೂಚಿಸಿದರು. ಬಿಎಚ್‌ಇಎಲ್‌ ಅಧಿಕಾರಿಗಳನ್ನು ಸೆಲ್‌ಫೋನ್‌ನಲ್ಲಿ ಸಂದರ್ಶಿಸಿದ ಮುಖ್ಯಮಂತ್ರಿಗಳು, ನೇಮಕಾತಿ ಸಂದರ್ಭದಲ್ಲಿ ಅಂಗವಿಕಲ ಮಹಿಳೆಗೆ ಸಾಧ್ಯವಾಗುವ ನೆರವು ನೀಡಲು ಸೂಚಿಸಿದರು.

ಬಿಎಚ್‌ಇಎಲ್‌ 12 ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು , ಈ ಹುದ್ದೆಗಳಿಗಾಗಿ ಒಟ್ಟು 12 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ 850 ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆ ಕಳುಹಿಸಲಾಗಿದ್ದು, ಅವರಲ್ಲಿ ಲಕ್ಷ್ಮೀಬಾಯಿ ಒಬ್ಬರಾಗಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+