ಜಿಂಬಾಬ್ವೆ ಪ್ರವಾಸ : ತರಬೇತಿ ಶಿಬಿರಕ್ಕೆ 26 ಮಂದಿ ತಂಡ ಆಯ್ಕೆ
ಬರೋಡಾ : ಜಿಂಬಾಬ್ವೆ ಪ್ರವಾಸಕ್ಕೆ ಮುನ್ನ ನಡೆಯುವ ತರಬೇತಿ ಶಿಬಿರಕ್ಕೆ ರಾಷ್ಟ್ರೀಯ ಆಯ್ಕೆದಾರರ ಸಮಿತಿ 7 ಮಂದಿ ವೇಗದ ಬೌಲರ್ಗಳೂ ಸೇರಿದಂತೆ ಒಟ್ಟು 26 ಮಂದಿ ಸಂಭವನೀಯ ಆಟಗಾರರನ್ನು ಆರಿಸಿದೆ. ತೋಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೈದ್ಯಕೀಯ ತಪಾಸಣೆಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಅನಿಲ್ ಕುಂಬ್ಳೆ ಹಾಗೂ ಕರ್ನಾಟಕದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಸಂಭವನೀಯರ ಪಟ್ಟಿಯಲ್ಲಿ ಸ್ಥಾನಪಡೆದಿಲ್ಲ.
ವಿಕೆಟ್ ಕೀಪರ್ ಸ್ಥಾನಕ್ಕೆ ನಯನ್ ಮೊಂಗಿಯಾ, ವಿಜಯ್ ದಹಿಯಾ ಇಬ್ಬರನ್ನೂ ಕೈಬಿಟ್ಟು, ಮುಂಬೈನ ಸಮೀರ್ ದಿಘ ಹಾಗೂ ಅಜಯ್ ರಾತ್ರಾ ಅವರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಮೇ 13ರಿಂದ 18ರವರೆಗೆ ತರಬೇತಿ ಶಿಬಿರ ನಡೆಯಲಿದೆ. ತರಬೇತಿ ಶಿಬಿರದ ನಂತರ ಅಂತಿಮ ತಂಡವನ್ನು 18ರಂದು ಪ್ರಕಟಿಸಲಾಗುವುದು.
ಈ ವಿಷಯವನ್ನು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯವಂತ ಲೆಲೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಂಭವನೀಯರ ಪಟ್ಟಿಯಲ್ಲಿರುವವರು ಇವರು:
ಸೌರವ್ ಗಂಗೂಲಿ (ನಾಯಕ) ರಾಹುಲ್ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್, ಹೇಮಾಂಗ್ ಬದಾನಿ, ಸಡಗೋಪನ್ ರಮೇಶ್, ಶಿವಸುಂದರ ದಾಸ್, ಮೊಹ್ಮದ್ ಕೈಫ್, ಯುವರಾಜ್ಸಿಂಗ್, ವೀರೇಂದ್ರ ಶೇಹ್ವಾಗ್, ದಿನೇಶ್ ಮೊಂಗಿಯಾ, ಸಮೀರ್ ದಿಘ, ಅಜಯ್ ರಾತ್ರಾ, ದೀಪ್ದಾಸ್ ಗುಪ್ತಾ, ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕರ್, ಜಹೀರ್ಖಾನ್, ಹರ್ವೀಂದರ್ಸಿಂಗ್, ಅಶಿಶ್ ನೇಹ್ರ, ದೇಬಶಿಷ್ ಮೊಹಂತಿ, ರಾಖೇಶ್ ಪಾಟೀಲ್, ರಿತೇಂದ್ರ ಸಿಂಗ್ ಸೋಧಿ, ಹರಭಜನ್ ಸಿಂಗ್, ಶರಣದೀಪ್ ಸಿಂಗ್, ರಾಹುಲ್ ಸಾಂಘ್ವಿ ಹಾಗೂ ಸಾಹಿರಾಜ್ಬಹುತಲೆ.