ಶಾಸ್ತ್ರೀಯ ಸಂಗೀತಕ್ಕೊಂದು ಟೀ.ವಿ. ಚಾನೆಲ್ ಬೇಕು : ಏಸುದಾಸ್
ಬೆಂಗಳೂರು : ಶಾಸ್ತ್ರೀಯ ಸಂಗೀತಕ್ಕೇ ಮುಡಿಪಾದ ಟೀವಿ ಚಾನೆಲ್ ಒಂದನ್ನು ಆರಂಭಿಸುವಂತೆ ಖ್ಯಾತ ಗಾಯಕ ಕೆ.ಜೆ. ಏಸುದಾಸ್ ಭಾನುವಾರ ಬೆಂಗಳೂರಿನಲ್ಲಿ ಕರೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಗೀತಕ್ಕೆ ಮಾರುಹೋಗುತ್ತಿದ್ದು, ನಮ್ಮ ತನ, ನಮ್ಮ ಸಂಸ್ಕೃತಿ, ನಮ್ಮ ಸಂಗೀತ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಅರಿವು ಮೂಡಿಸುವ ಪ್ರತ್ಯೇಕ ಟೀವಿ ಚಾನೆಲ್ ಒಂದರ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿಯ ರಾಮೋತ್ಸವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗಾನಸುಧೆ ಹರಿಸುವ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಏಸುದಾಸ್ ಈ ಅಭಿಪ್ರಾಯ ಮಂಡಿಸಿದಾಗ ಸಾವಿರಾರು ಸಂಗೀತಾಸಕ್ತರು ಭಾರಿ ಕರತಾಡನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಏಸುದಾಸರ ಗಾಯನಕ್ಕೆ ಭಕ್ತವತ್ಸಲಂ ಮೃದಂಗ, ವಿ. ಸುರೇಶ್ ಅವರ ಘಟಂ ನೆರವು ನೀಡಿದರು. ಕಾರ್ಯಾಕ್ರಮಾನಂತರ ರಾಜ್ಯದ ರಾಜ್ಯಪಾಲರಾದ ವಿ.ಎಸ್. ರಮಾದೇವಿ ಅವರು ಏಸುದಾಸ್ರಿಗೆ ಶಾಲು ಹೊದೆಸಿ ಸನ್ಮಾನಿಸಿದರು.