ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೀಯ ಸಂಗೀತಕ್ಕೊಂದು ಟೀ.ವಿ. ಚಾನೆಲ್‌ ಬೇಕು : ಏಸುದಾಸ್‌

By Staff
|
Google Oneindia Kannada News

ಬೆಂಗಳೂರು : ಶಾಸ್ತ್ರೀಯ ಸಂಗೀತಕ್ಕೇ ಮುಡಿಪಾದ ಟೀವಿ ಚಾನೆಲ್‌ ಒಂದನ್ನು ಆರಂಭಿಸುವಂತೆ ಖ್ಯಾತ ಗಾಯಕ ಕೆ.ಜೆ. ಏಸುದಾಸ್‌ ಭಾನುವಾರ ಬೆಂಗಳೂರಿನಲ್ಲಿ ಕರೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಗೀತಕ್ಕೆ ಮಾರುಹೋಗುತ್ತಿದ್ದು, ನಮ್ಮ ತನ, ನಮ್ಮ ಸಂಸ್ಕೃತಿ, ನಮ್ಮ ಸಂಗೀತ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಅರಿವು ಮೂಡಿಸುವ ಪ್ರತ್ಯೇಕ ಟೀವಿ ಚಾನೆಲ್‌ ಒಂದರ ಅಗತ್ಯ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿಯ ರಾಮೋತ್ಸವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗಾನಸುಧೆ ಹರಿಸುವ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಏಸುದಾಸ್‌ ಈ ಅಭಿಪ್ರಾಯ ಮಂಡಿಸಿದಾಗ ಸಾವಿರಾರು ಸಂಗೀತಾಸಕ್ತರು ಭಾರಿ ಕರತಾಡನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಏಸುದಾಸರ ಗಾಯನಕ್ಕೆ ಭಕ್ತವತ್ಸಲಂ ಮೃದಂಗ, ವಿ. ಸುರೇಶ್‌ ಅವರ ಘಟಂ ನೆರವು ನೀಡಿದರು. ಕಾರ್ಯಾಕ್ರಮಾನಂತರ ರಾಜ್ಯದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಏಸುದಾಸ್‌ರಿಗೆ ಶಾಲು ಹೊದೆಸಿ ಸನ್ಮಾನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X