ತೋಳಿನ ಚಿಕಿತ್ಸೆಗೆ ಮತ್ತೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಅನಿಲ್ ಕುಂಬ್ಳೆ
ಬೆಂಗಳೂರು : ಬಲತೋಳಿನ ತೊಂದರೆಯಿಂದ ನರಳುತ್ತಿರುವ ಖ್ಯಾತ ಲೆಗ್ಸ್ಪಿನ್ನರ್ ಅನಿಲ್ಕುಂಬ್ಳೆ ಅವರು ಖ್ಯಾತ ವೈದ್ಯ ಮಾರ್ಕ್ ಫರ್ಗುಸನ್ ಅವರಿಂದ ಚಿಕಿತ್ಸೆ ಪಡೆಯಲು ಮತ್ತೊಮ್ಮೆ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಿ ಕುಂಬ್ಳೆ ಅವರ ಬಲತೋಳಿನ ಶಸ್ತ್ರಚಿಕಿತ್ಸೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಈಗ ಮತ್ತೊಮ್ಮೆ ತಮ್ಮ ತೋಳಿನ ಚಿಕಿತ್ಸೆಯ ಸಂಬಂಧ ವೈದ್ಯರನ್ನು ಭೇಟಿ ಮಾಡಲು ಕುಂಬ್ಳೆ ಜೋಹನ್ಸ್ಬರ್ಗ್ಗೆ ತೆರಳಿದ್ದು, ಮುಂದಿನ ತಿಂಗಳು ಬೆಂಗಳೂರಿಗೆ ಹಿಂತಿರುಗುವರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ತೋಳಿನ ತೊಂದರೆಯಿಂದ ಕೆಲವು ತಿಂಗಳುಗಳಿಂದ ಕುಂಬ್ಳೆ ಅವರು ಕ್ರಿಕೆಟ್ ಮೈದಾನದಿಂದ ಹೊರಗುಳಿಯುವಂತಾಗಿದೆ. ಇದರಿಂದಾಗಿಯೇ ಭಾರತ - ಆಸ್ಟ್ರೇಲಿಯಾ ನಡುವಣ ಮಹತ್ವದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಸಹ ಕುಂಬ್ಳೆ ಕಳೆದುಕೊಂಡರು.
ಮತ್ತೊಮ್ಮೆ ತಮ್ಮ ಬೌಲಿಂಗ್ ದಾಳಿಯಿಂದ ಭಾರತ ತಂಡವನ್ನು ಬಲಪಡಿಸುವ ಮಹದಾಸೆ ಕುಂಬ್ಳೆ ಅವರದು. ಹೆಸರಾಂತ ಮೂಳೆ ತಜ್ಞ ಡಾ. ಫರ್ಗುಸನ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಕುಂಬ್ಳೆ ಅವರ ತೋಳಿನ ಸಮಸ್ಯೆ ಬಗೆಹರಿಸಲು ಹಲವು ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸಿದ್ದಾರೆ. ಸಲಹೆ - ಸೂಚನೆಗಳನ್ನೂ ನೀಡಿದ್ದಾರೆ. ಕುಂಬ್ಳೆ ಅವರು ಕಟ್ಟು ನಿಟ್ಟಾಗಿ ವೈದ್ಯರ ಸಲಹೆ ಪಾಲಿಸುತ್ತಿದ್ದು, ಅದು ಉತ್ತಮ ಪರಿಣಾಮ ಬೀರಿವೆ.
ಕುಂಬ್ಳೆ ಅವರು ತೋಳಿನ ತೊಂದರೆಯಿಂದ ಗುಣಮುಖರಾಗುತ್ತಿರುವ ಬಗ್ಗೆ ವೈದ್ಯ ಫರ್ಗುಸನ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರ ಈ ಭೇಟಿ ಬಳಿಕ ಭಾರತಕ್ಕೆ ಮರಳಲಿರುವ ಕುಂಬ್ಳೆ ಅವರ ಸೇವೆ ಎಂದಿನಿಂದ ಭಾರತ ತಂಡಕ್ಕೆ ದೊರಕಲಿದೆ ಎನ್ನುವುದು ಕೂಡ ತಿಳಿದುಬರಲಿದೆ. ಇನ್ನೇನು ಜಿಂಬಾಬ್ವೆ ಪ್ರವಾಸ ಹತ್ತಿರ ಬರುತ್ತಿದೆ.
(ಯುಎನ್ಐ )
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications