ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇ.1 : ಬೆಂಗಳೂರಿನಲ್ಲಿ ಲಿಂಗಾಯತವಧೂ ವರರ ಸಮ್ಮೇಳನ
ಬೆಂಗಳೂರು : ಮೇ 1, ಕಾರ್ಮಿಕರ ದಿನದಂದು ಲಿಂಗಾಯಿತ ಧರ್ಮೀಯ ವಧೂ ವರರ ಸಮ್ಮೇಳನ ರಾಜಾಜಿ ನಗರ ಕಾರ್ಡ್ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ನಡೆಯಲಿದೆ.
ಲಿಂಗಾಯಿತ ವಧೂ ವರರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ವಿವಾಹ ಮೇಳದ ಸಂಘಟಕರು ಮನವಿ ಮಾಡಿದ್ದಾರೆ. ಆಸಕ್ತರು, ಬಸವ ಮಂಟಪ, ಕಾರ್ಡ್ ರಸ್ತೆ , ರಾಜಾಜಿ ನಗರ 2 ನೇ ಹಂತ, ಬೆಂಗಳೂರು ಈ ವಿಳಾಸವನ್ನು ಅಥವಾ ದೂರವಾಣಿ ಸಂಖ್ಯೆ 080- 3325335 ಸಂಪರ್ಕಿಸಬಹುದು.
ಕನಕಪುರದಲ್ಲಿ ಸಾಮೂಹಿಕ ವಿವಾಹ
ಸರಳ ವಿವಾಹ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ಗಳು ಏಪ್ರಿಲ್ 29 ರಂದು ಕನಕಪುರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿವೆ. ವಿವಾಹವಾಗುವ ವಧುವಿಗೆ ಸೀರೆ, ಕುಪ್ಪಸ, ಮಾಂಗಲ್ಯ ಹಾಗೂ ವರನಿಗೆ ಅಂಗಿ- ಪಂಚೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಲಯನ್ಸ್ ಸಂಸ್ಥೆಯ ಎಂ. ವೆಂಕಟೇಶ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Saturday, April 21, 2001, 5:30 [IST]