ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಸಂಜೆಯೆಲ್ಲಾ ಚೆನ್ನಾಗಿರುತ್ತದೆ. ಕೃಷಿ ಕ್ಷೇತ್ರದಲ್ಲಿ ದುಡಿಯುವವರಾದರೆ ತುಂಬಾ ತಲೆ ಖರ್ಚು ಮಾಡಿ ಮುಂದಿನ ವರ್ಷದ ಯೋಜನೆ ಸಿದ್ಧಪಡಿಸಿ. ಬರಲಿರುವ ಲಾಭ ನಷ್ಟವನ್ನು ತುಂಬುತ್ತದೆ, ಆದ್ದರಿಂದ ತಲೆ ಬಿಸಿ ಬೇಡ.ವೃಷಭ : ಬರೀ ಫಿಲಾಸಫೀ ಮಾತಾಡುತ್ತಾ ಯಾಕೆ ಸಮಯ ಹಾಳು ಮಾಡುತ್ತೀರಿ. ನಿಜ ಹೇಳಬೇಕೆಂದರೆ ನೀವು ಯೋಚನೆಯೇ ಮಾಡಿರದ ಹಲವು ಒಳ್ಳೆಯ ಘಟನೆಗಳು ನಡೆಯುತ್ತಿವೆ.
ಮಿಥುನ : ಜಗತ್ತಿನಲ್ಲಿ ಚೆಂದ ಕಂಡದ್ದೆಲ್ಲಾ ಅನುಭವಿಸುವುದಕ್ಕೆ ಆಪ್ಯಾಯಮಾನವಾಗಿರುವುದಿಲ್ಲ ಅನ್ನುವ ಮಾತಿಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬಾರದು. ಈಗ ಸಮಯ ಬಹಳ ಅಮೂಲ್ಯ.
ಕಟಕ : ಆಫೀಸಿನಲ್ಲಿ ಕೀಟಲೆ ಮಾಡುವವರು ಜಾಸ್ತಿಯಾಗಿದ್ದಾರೆ. ಹಾಗಂತ ನಿಮ್ಮ ಕೆಲಸದ ಮೇಲೆಯೇ ಜಿಗುಪ್ಸೆ ಬಂದರೆ ದೊಡ್ಡ ನಷ್ಟವಾಗುವುದು ನಿಮಗೇ ತಾನೇ ? ಆದ್ದರಿಂದ ಕೂಲ್ ಆಗಿರಲು ಪ್ರಯತ್ನಿಸಿ.
ಸಿಂಹ : ಜಂಭ ಎನ್ನುವುದನ್ನು ನೀವು ಗುತ್ತಿಗೆಗೆ ಪಡೆದಿದ್ದೀರೇನೋ ಅಂತ ನಿಮ್ಮ ಸ್ನೇಹಿತರು ಆಶ್ಚರ್ಯ ಪಡುತ್ತಾರೆ. ಆದರೆ ಪ್ರಾಮಾಣಿಕ ಕೆಲಸಗಳು ಮತ್ತು ಪ್ರಯತ್ನದಿಂದ ಅವರಲ್ಲಿರುವ ಇಂಪ್ರೆಷನ್ನ್ನು ಬದಲಿಸಬಹುದು.
ಕನ್ಯಾ : ಮಾತು ಆಡಿದ ಮೇಲೆ ಮುಗಿಯಿತು, ನಂತರ ನಿಮ್ಮದೇನೂ ಕೆಲಸವಿರುವುದಿಲ್ಲ ಎಂಬುದನ್ನು ಎಷ್ಟೇ ಕಷ್ಟಪಟ್ಟರೂ ನಿಮ್ಮ ಸ್ನೇಹಿತರು ಅರ್ಥ ಮಾಡಿಕೊಳ್ಳುವುದಿಲ್ಲ. ಇವತ್ತು ಚಾಲೆಂಜ್ಗಳ ಗೋಜಿಗೆ ಹೋಗಬೇಡಿ.
ತುಲಾ : ನಿಮ್ಮದಲ್ಲದ ಕೆಲಸಗಳನ್ನು ಮಾಡಲು ಹೋದರೆ ಶುರುವಿಗೆ ಸೋಲು ಸ್ವಲ್ಪ ಎಡತಾಕುತ್ತದೆ. ಆದರೆ ನಿಮ್ಮ ಬಳಿ ಜಮೆಯಾಗುವ ಅನುಭವ ಸಾಮರ್ಥ್ಯ, ಮುಂದೆ ನಿಮ್ಮ ಕೈ ಹಿಡಿಯುತ್ತದೆ.
ವೃಶ್ಚಿಕ : ಮನೆಯಲ್ಲಿ ದೇವರ ಕಾರ್ಯ ನಡೆಸುವ ನಿಮ್ಮ ಯೋಚನೆಗೆ ದೊಡ್ಡದೊಂದು ಕಲ್ಲು ಬೀಳುತ್ತದೆ. ಅದಕ್ಕೆ ನೀವು ಬೇಜಾರು ಪಡುವುದಿಲ್ಲ. ಇವತ್ತು ಆಫೀಸಿನಲ್ಲಿ ತುಂಬಾ ಕೆಲಸಗಳು ನಿಮ್ಮ ಕಾದಿರುತ್ತವೆ.
ಧನಸ್ಸು : ಇವತ್ತೆಲ್ಲಾ ಬರೀ ಯೋಚನೆಯಲ್ಲಿಯೇ ದಿನ ಕಳೆಯಬೇಡಿ. ಬಂಧುಗಳ ತೊಳಲಾಟ ನಿಮಗೆ ಅರ್ಥವಾಗುವುದರಿಂದಲೇ ಇಷ್ಟು ಬೇಜಾರು ಪಟ್ಟುಕೊಳ್ಳಬೇಕಾಗುತ್ತಲ್ಲಾ ಅಂತ ಮತ್ತಷ್ಟು ನೋಯುತ್ತೀರಿ.
ಮಕರ : ನಿಮ್ಮ ಓದಿನ ಮರ್ಜಿಯನ್ನು ನಿಮ್ಮ ಕೈಯಲ್ಲಿಯೇ ಉಳಿಸಿಕೊಳ್ಳುತ್ತಿದ್ದ ಕಾಲದ ಬಗ್ಗೆ ಯೋಚನೆ ಮಾಡುತ್ತಾ ಸಮಯ ಹಾಳು ಮಾಡಿಕೊಳ್ಳುತ್ತೀರಿ. ಪ್ರಯಾಣ ಹೋಗಬೇಕೆಂಬ ಆಸೆಗೆ ಯಾವ ಕಡೆಯಿಂದಲೂ ನೀರು ಸಿಗದು.
ಕುಂಭ : ಪ್ರಯಾಣ ಯೋಗವಿದೆ. ತತ್ವಗಳಿಗೆ ನೀವು ಬದ್ಧರಾಗಿದ್ದುಕೊಂಡು ಅಲ್ಪ ಸ್ವಲ್ಪ ಕಳೆದುಕೊಂಡರೆ ಅದಕ್ಕಾಗಿ ಬೇಜಾರು ಮಾಡಿಕೊಳ್ಳುವುದು ಸರಿ ಅಲ್ಲ . ಅಲ್ವೇ?
ಮೀನ : ಸಿಂಪಥಿ ಎನ್ನುವುದು ಎಲ್ಲಾ ದಿಕ್ಕಿನಿಂದಲೂ ನಿಮ್ಮ ಬಳಿ ಹರಿದು ಬರುತ್ತದೆ. ಆ ವಿಷಯದಲ್ಲೂ ನೀವು ಲಕ್ಕಿ. ನಿಮ್ಮ ಸಾಮರ್ಥ್ಯದಿಂದ ಅಂದುಕೊಂಡ ಕೆಲಸಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications