ಕುಂಬ್ಳೆ ಪತ್ನಿಗೆ ಕೋರ್ಟಿನಾಟದಲ್ಲಿ ಸಿಕ್ಕ ಅರ್ಧ ಯಶಸ್ಸು
ನವದೆಹಲಿ : ಲೆಗ್ಗಿ ಅನಿಲ್ ಕುಂಬ್ಳೆ ಪತ್ನಿ ಚೇತನ ಅವರಿಗೆ ತಮ್ಮ ಹೆಣ್ಣು ಮಗು ಲಾಲನೆಗೆ ತಾತ್ಕಾಲಿಕ ಅವಕಾಶ ಸಿಕ್ಕಿದೆ !
ಇದೇನು, ತನ್ನ ಮಗುವನ್ನು ಸಾಕಲು ಅವಕಾಶ ಎಂಥದ್ದು ಅಂದುಕೊಂಡಿರಾ ? ಕುಂಬ್ಳೆಗೆ ಚೇತನ ಮೊದಲ ಹೆಂಡತಿಯಾದರೆ, ಚೇತನ ಅವರಿಗೆ ಕುಂಬ್ಳೆ 2ನೇ ಗಂಡ. ಈ ಕಾರಣಕ್ಕೇ ಅಪ್ಪ- ಅಮ್ಮ ಇಬ್ಬರೂ ಮಗು ಖಾಯಂ ಆಗಿ ನನ್ನದು ಎನ್ನತೊಡಗಿದರು. ವಿಷಯ ಸುಪ್ರಿಂಕೋರ್ಟಿನ ಕಟಕಟೆವರೆಗೆ ಹೋಯಿತು. ಆದರೆ ಅಹವಾಲು ಇನ್ನೂ ವಿಚಾರಣೆ ಹಂತದಲ್ಲೇ ಇದ್ದು, ತೀರ್ಪು ಹೊರಬೀಳುವವರೆಗೆ ಮಗು ಚೇತನಾ ಅವರ ಬಳಿಯಲ್ಲೇ ಇರಲಿ ಎಂದು ಡಿ.ಪಿ.ಮೊಹಾಪಾತ್ರ ಹಾಗೂ ಶಿವರಾಜ್ ವಿ.ಪಾಟೀಲ್ ಅವರನ್ನೊಳಗೊಂಡ ಸುಪ್ರಿಂಕೋರ್ಟ್ನ ವಿಭಾಗೀಯ ಪೀಠ ಗುರುವಾರ ಆದೇಶಿಸಿದೆ.
ಅಂದಿನಿಂದ ಇಂದಿನವರೆಗೆ : ಚೇತನ, ಕುಮಾರ್ ವಿ. ಜಹಗೀರ್ದಾರ್ ಎಂಬ ಸ್ಟಾಕ್ ದಲ್ಲಾಳಿಯನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಆರುಣಿ ಎಂಬ ಹೆಣ್ಣು ಮಗು ಇತ್ತು. 1999ರ ಏಪ್ರಿಲ್ 17ರಂದು ಕುಟುಂಬ ನ್ಯಾಯಾಲಯದಲ್ಲಿ ದಂಪತಿಗಳು ಒಪ್ಪಿ ವಿಚ್ಛೇದನ ಪಡೆದರು. ಮಗು ಇಬ್ಬರ ಬಳಿಯೂ ಬೆಳೆಯಲು ಕುಟುಂಬ ನ್ಯಾಯಾಲಯ ಅವಕಾಶ ಕೊಟ್ಟಿತು. ನಂತರ ಅನಿಲ್ ಕುಂಬ್ಳೆ ಅವರನ್ನು ಚೇತನ ಮದುವೆಯಾದರು. ಮಗು ಶಾಶ್ವತವಾಗಿ ತಮ್ಮ ಬಳಿಯೇ ಇರಬೇಕು, ಅದನ್ನು ವಿದೇಶಕ್ಕೆ ಕರೆದೊಯ್ಯಲು ಅನುಮತಿ ಕೊಡಬೇಕು ಎಂಬ ಚೇತನ ಅವರ ಅಹವಾಲನ್ನು ಕುಟುಂಬ ಕೋರ್ಟ್ ತಿರಸ್ಕರಿಸಿತು.
ಚೇತನ ಅವರ ಮೊದಲ ಗಂಡ ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಿದರು. ವಿಚಾರಣೆ ಇನ್ನೂ ನಡೆಯುತ್ತಿದೆ. ವಿಚಾರಣೆ ಮುಗಿಯುವವರೆಗೆ ಮಗು ತಾಯಿಯ ಸುಪರ್ದಿಯಲ್ಲೇ ಇರಲಿ, ಆದರೆ ವಿದೇಶಕ್ಕೆ ಕರೆದೊಯ್ಯುವಂತಿಲ್ಲ ಎಂದು ಸುಪ್ರಿಂಕೋರ್ಟ್ ವಿಭಾಗೀಯ ಪೀಠ ಈಗ ತೀರ್ಪಿತ್ತಿದೆ.
ಸೆಪ್ಟೆಂಬರ್ 29, 2000ದಲ್ಲಿ ಮಗು ಒಂದು ವರ್ಷಗಳ ಕಾಲ ತಾಯಿ ಜೊತೆಯಿರಲಿ ಎಂದು ಹೈಕೋರ್ಟ್ ತೀರ್ಪಿತ್ತಿತ್ತು. ಕುಟುಂಬ ನ್ಯಾಯಾಲಯದ ಅನುಮತಿ ಪಡೆದು ವಿದೇಶಕ್ಕೂ ಕರೆದೊಯ್ಯಬಹುದೆಂದು ಆದೇಶಿಸಿತ್ತು. ಆದರೆ, ಕುಮಾರ್ ವಿ. ಜಹಗೀರ್ದಾರ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications