Get Updates
Get notified of breaking news, exclusive insights, and must-see stories!

ನನಗೆ ಕ್ಷಮಾದಾನ ಕೊಡಿ- ಜಯಲಲಿತಾಗೆ ವೀರಪ್ಪನ್‌ ಪತ್ರ?

ಬೆಂಗಳೂರು : ನರಹಂತಕ ವೀರಪ್ಪನ್‌ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಗೊಂದು ಪತ್ರ ಬರೆದಿದ್ದು, ಒಂದು ವೇಳೆ ಆಕೆ ಮುಖ್ಯಮಂತ್ರಿಯಾದರೆ ತನಗೆ ಸಾರ್ವತ್ರಿಕ ಕ್ಷಮಾದಾನ ನೀಡಬೇಕು ಎಂದು ಕೇಳಿಕೊಂಡಿದ್ದಾನೆ.

ಗೃಹ ಇಲಾಖೆಯಲ್ಲಿ ಗುರುವಾರ ಈ ಸುದ್ದಿಯದೇ ಗುಲ್ಲು . ಒಂದು ಮಾಧ್ಯಮ ಕೂಡ ಈ ಸುದ್ದಿಯನ್ನು ವರದಿ ಮಾಡಿದೆ. ನರಹಂತಕ ಜಯಲಲಿತಾ ಅವರಿಗೆ ಬರೆದಿರುವ ಪತ್ರದ ತಿರುಳು ಇಂತಿದೆ- ನೀವು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನೀವು ಅಧಿಕಾರಕ್ಕೆ ಬಂದ ತಕ್ಷಣ ನನಗೆ ಸಾರ್ವತ್ರಿಕ ಕ್ಷಮಾದಾನ ನೀಡಬೇಕು.

ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ ಕೆ.ಶ್ರೀನಿವಾಸನ್‌ ಆಗಲೀ, ಗೃಹ ಸಚಿವಾಲಯ ಆಗಲೀ ವೀರಪ್ಪನ್‌ ಪತ್ರದ ಪ್ರತಿಯನ್ನು ಈವರೆಗೆ ಪಡೆದಿಲ್ಲ. ಆದರೆ ಜಯಲಲಿತಾ ಅವರಿಗೆ ಬರೆದಿರುವ ಪತ್ರದ ಒಂದು ಪ್ರತಿಯನ್ನು ವೀರಪ್ಪನ್‌ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರಿಗೂ ಕಳುಹಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ.

ಜಯಲಲಿತಾಗೇ ಪತ್ರ ಯಾಕೆ ?
ಪ್ರಸ್ತುತ ತಮಿಳುನಾಡಿನಲ್ಲಿ ಜಯಲಲಿತಾ- ಕರುಣಾನಿಧಿ ಚುನಾವಣಾ ಟಂಗಾಟುಂಗಿಯ ಬಿಸಿ. ವಿವಾದಗಳ ನಡುವೆಯೂ ಜಯಲಲಿತಾ ಚರಿಷ್ಮಾ ಮಾಸಿಲ್ಲ. ತನ್ನ ಅಧಿಕಾರಾವಧಿಯಲ್ಲಿ ವೀರಪ್ಪನ್‌ ವಿರುದ್ಧ ಜಯಲಲಿತಾ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಎಷ್ಟೋ ಬಾರಿ ಕೂದಲೆಳೆಯಲ್ಲಿ ಕಾಡುಗಳ್ಳ ಪಾರಾಗಿದ್ದ . ರಾಜ್‌ ಅಪಹರಣ ಪ್ರಕರಣದ ನಂತರ ವೀರಪ್ಪನನ್ನು ಹಿಡಿಯಿರಿ ಎಂಬ ಒತ್ತಾಯವನ್ನು ಸದಾ ಸರ್ಕಾರದ ಮೇಲೆ ಜಯಲಲಿತಾ ಹೇರುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಪ್ಪನ್‌ಗೆ, ಜಯಲಲಿತಾ ಮುಖ್ಯಮಂತ್ರಿಯಾದರೆ ತನಗೆ ಉಳಿಗಾಲವಿಲ್ಲ ಎಂಬುದು ಮನದಟ್ಟಾಗಿರಬಹುದು. ಈ ಕಾರಣಕ್ಕಾಗೇ ಆತ ಖುದ್ದು ಆಕೆಗೇ ಕ್ಷಮಾದಾನ ನೀಡುವಂತೆ ಪತ್ರ ಬರೆದಿದ್ದಾನೆ ಎಂದು ಗೃಹ ಇಲಾಖೆಯಲ್ಲಿ ಗುಸುಗುಸು ಕೇಳುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+