ಜಿಎಸ್ಎಲ್ವಿ ಯಶಸ್ವೀ ಉಡಾವಣೆ: ಭಾರತ ವಿಜ್ಞಾನಿಗಳ ಸಾಧನೆ
ಶ್ರೀಹರಿಕೋಟಾ : ಮಾರ್ಚ್ 28ರಂದು ಉಡ್ಡಯನಕ್ಕೆ ಕೇವಲ ಒಂದು ಕ್ಷಣ ಬಾಕಿ ಉಳಿದಿದ್ದಾಗ ತಾಂತ್ರಿಕ ದೋಷದಿಂದ ಮೇಲೇರದೆ ವಿಫಲಗೊಂಡಿದ್ದ, ಭಾರತದ ಮಹತ್ವಾಕಾಂಕ್ಷೆಯ ಜಿ.ಎಸ್.ಎಲ್.ವಿ. - ಡಿ.1 ಅಂತರಿಕ್ಷ ವಾಹನದ ಮರು ಉಡಾವಣೆ ಬುಧವಾರ ಯಶಸ್ವಿಯಾಗಿದೆ.
ದೇಶೀ ನಿರ್ಮಿತ ಉಪಗ್ರಹ ವಾಹನವು ಬುಧವಾರ ಮಧ್ಯಾಹ್ನ 3:44ರಲ್ಲಿ ತನ್ನ ನಿಗದಿತ ಕಕ್ಷೆಯತ್ತ ಪ್ರಯಾಣ ಬೆಳೆಸಿತು. ಮೊದಲು ನಿಗದಿಯಾಗಿದ್ದ ದಿನದಂದು ಮೋಟರ್ ದೋಷದಿಂದ ಉಪಗ್ರಹ ಉಡಾವಣೆ ವಾಹನದ ಕೆಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಕೊನೆ ಕ್ಷಣದಲ್ಲಿ ಉಪಗ್ರಹ ಉಡಾವಣೆಯನ್ನು ರದ್ದುಗೊಳಿಸಲಾಗಿತ್ತು.
ಆದರೆ, ಉಡಾವಣೆ ವಿಫಲವಾದ ಕೇವಲ 15 ದಿನಗಳ ಅವಧಿಯಾಳಗೆ ದೋಷವೇನೆಂಬುದನ್ನು ಪತ್ತೆಹಚ್ಚಿ, ಸರಿಪಡಿಸಿ, ಮರು ಉಡಾವಣೆ ದಿನಾಂಕ ನಿಗದಿ ಪಡಿಸಿ, ಯಶಸ್ವಿಯಾಗಿರುವುದು ಭಾರತೀಯ ವಿಜ್ಞಾನಿಗಳ ಸಾಧನೆಯಾಗಿದೆ.
ಮೂರು ಹಂತಗಳ ಜಿಯೋ ಸಿಂಕ್ರೋನಸ್ ಉಪಗ್ರಹ ಉಡ್ಡಯನ ವಾಹನದಲ್ಲಿ (ಜಿ.ಎಸ್.ಎಲ್.ವಿ) ಜೋಡಿಸಲಾಗಿದ್ದ ನಾಲ್ಕು ಮೋಟರ್ಗಳ ಪೈಕಿ ಒಂದು ವಿಫಲವಾಗಿ, ದೋಷಪೂರಿತವಾಗಿದ್ದ ಆಕ್ಸಿಡೈಸರ್ ಪ್ಲಂಬಿಂಗ್ ಉಡ್ಡಯನಕ್ಕೆ ಅಡ್ಡಿಪಡಿಸಿತ್ತು ಎಂದು ತಿಳಿಸಲಾಗಿತ್ತು. ಅಗ್ನಿ ಅನಾಹುತದಿಂದ ಹಾಳಾಗಿದ್ದ ಇಂಜೆಕ್ಟರ್ ಮೊದಲಾದ ಭಾಗಗಳನ್ನು ವಿಜ್ಞಾನಿಗಳು ಬದಲಾಯಿಸಿದ್ದರು.
ಬುಧವಾರ ಶ್ರೀಹರಿ ಕೋಟಾದಲ್ಲಿ ಶುಭ್ರ ಆಕಾಶ ಇತ್ತು. ಸ್ವಚ್ಛ ಬೆಳಕು ಹರಡಿತ್ತು. ಜಿ.ಎಸ್.ಎಲ್.ವಿ. ಮರು ಉಡಾವಣೆಗೆ ಕಾಲ ಪಕ್ವವಾಗಿತ್ತು. ಹವಾಮಾನವೂ ಸಹಕರಿಸಿತು. ಸೋಮವಾರ ಬೆಳಗ್ಗೆ ಕ್ಷಣಗಣನೆ ಆರಂಭವಾದ ಸಮಯದಿಂದ ಉಪಗ್ರಹ ವಾಹನದ ಯಶಸ್ವೀ ಉಡಾವಣೆಗೆ ಅವಿರತವಾಗಿ ಶ್ರಮಿಸಿದ ವಿಜ್ಞಾನಿಗಳು ಈ ಯಶಸ್ಸಿನಿಂದ ಅಮಿತಾನಂದರಾಗಿದ್ದರು.
ಇಸ್ರೋ ಅಧ್ಯಕ್ಷ ಕಸ್ತೂರಿ ರಂಗನ್ ಅವರ ನೇತೃತ್ವದ ವಿಜ್ಞಾನಿಗಳ ತಂಡ ಈ ಉಡಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಜಿ.ಎಸ್.ಎ.ಟಿ. 1 ಸಂಪರ್ಕ ಉಪಗ್ರಹವನ್ನು ಹೊತ್ತು ನಿಗದಿತ ಕಕ್ಷೆಯತ್ತ ಜಿಎಸ್ಎಲ್ವಿ ಯಶಸ್ವಿಯಾಗಿ ಜಿಗಿದಾಗ ಆನಂದ ತುಂದಿಲರಾಗಿದ್ದ ಡಾ. ಕೆ. ಕಸ್ತೂರಿ ರಂಗನ್ ತಮ್ಮ ಸಹೋದ್ಯೋಗಿಗಳನ್ನು ಅಭಿನಂದಿಸಿದರು.
ಪ್ರಧಾನಿ ಅಭಿನಂದನೆ : ಜಿಎಸ್ಎಲ್ವಿ ಯಶಸ್ವಿ ಉಡಾವಣೆಯಾದ ಸುದ್ದಿ ತಿಳಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.
ಈ ಯಶಸ್ಸಿನೊಂದಿಗೆ ಭಾರತವು ಬಾಹ್ಯಾಕಾಶದಲ್ಲಿ ಸಾರ್ವಭೌಮತ್ವ ಸ್ಥಾಪಿಸಿದ ಅಮೆರಿಕ, ರಷ್ಯ, ಜಪಾನ್, ಚೈನಾ ಮತ್ತು ಯೂರೋಪ್ ಒಕ್ಕೂಟವನ್ನೊಳಗೊಂಡ ಐದು ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಯಿತು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications