‘ಸೈಬರ್ ಕ್ರೆೃಂ ತನಿಖೆಗೆ ಬೆಂಗಳೂರಲ್ಲಿವಿಶೇಷ ಪೊಲೀಸ್ ಠಾಣೆ’
ಬೆಂಗಳೂರು : ಸೈಬರ್ ಅಪರಾಧಗಳನ್ನು ಪತ್ತೆ ಹಚ್ಚುವುದು ಹೇಗೆ? ತಡೆಯುವುದು ಹೇಗೆ? ಎಂಬ ಬಗ್ಗೆ ಪೊಲೀಸರನ್ನು ಸನ್ನದ್ಧಗೊಳಿಸಲು ಬೆಂಗಳೂರು ನಗರದಲ್ಲಿ ಎರಡು ದಿನಗಳ ಕಾರ್ಯಾಗಾರ ಬುಧವಾರ ಮುಕ್ತಾಯಗೊಂಡಿತು. ಈ ತರಬೇತಿ ಶಿಬಿರದಲ್ಲಿ ಹೈದರಾಬಾದ್, ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕದ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸೈಬರ್ ಪಾತಕಗಳನ್ನು ಪತ್ತೆಹಚ್ಚಲು ಹಾಗೂ ತಡೆಯಲು ಪೊಲೀಸರಿಗೆ ಅಗತ್ಯವಾದ ಕೌಶಲವನ್ನು ಹೆಚ್ಚಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು. ಸೈಬರ್ ಕ್ರೆೃಂ ತನಿಖೆಗೆ ಹಾಗೂ ವಿಚಾರಣೆಗೆ ನಗರದಲ್ಲಿ ವಿಶೇಷ ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾವವೂ ಇದ್ದು, ರಾಜ್ಯಸರಕಾರ ಒಪ್ಪಿಗೆ ನೀಡಲಿದೆ ಎಂದು ಸಿ.ಓ.ಡಿಯ ಐಜಿಪಿ ವಿ.ವಿ. ಭಾಸ್ಕರ್ ಕಾರ್ಯಾಗಾರದಲ್ಲಿ ತಿಳಿಸಿದರು.
ಈ ಠಾಣೆಯು ವಿವಿಧ ರಾಜ್ಯಗಳೊಂದಿಗೆ ಸಂಪರ್ಕ ಸಂವಹನ ಕೇಂದ್ರವಾಗಿ ಕೆಲಸ ಮಾಡಲಿದೆ ಎಂದರು. ಕೇಂದ್ರ ಹಾಗೂ ರಾಜ್ಯದಲ್ಲಿರುವ ತನಿಖಾ ದಳಗಳ ನಡುವೆ ಪರಸ್ಪರ ಸಹಕಾರ ಮೂಡಿಸಲು ಈ ಕಾರ್ಯಾಗಾರದಿಂದ ಅನುವಾಯಿತು ಎಂದೂ ಅವರು ಹೇಳಿದರು. ಸಿ.ಬಿ.ಐ ಹಾಗೂ ರಾಜ್ಯ ಸಿ.ಓ.ಡಿ ಸಂಯುಕ್ತಾಶ್ರಯದಲ್ಲಿ ಈ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.
ಕರ್ನಾಟಕದಲ್ಲಿ 1999ರಿಂದಲೇ ಸೈಬರ್ ಅಪರಾಧಗಳ ತಡೆಗೆ ತನಿಖಾದಳ ರೂಪುಗೊಂಡಿದ್ದು, ಕಾರ್ಯಪ್ರವೃತ್ತವಾಗಿದೆ. ನಗ-ರ-ದ-ಲ್ಲಿ-ನ ಸೈಬ-ರ್ ಕೆಫೆ-ಗ-ಳು, ತಂತ್ರ-ಜ್ಞ-ರು ಹಾಗೂ ಇಂ-ಡಿ-ಯ-ನ್ ಇ-ನ್-ಸ್ಟಿ-ಟ್ಯೂ-ಟ್ ಆಫ್ ಸೈನ್ಸ್-ನ ಅಧಿ-ಕಾ-ರಿ-ಗ-ಳೊಂ-ದಿ-ಗೆ ಉನ್ನ-ತ ಪೊಲೀ-ಸ್ ಅಧಿ-ಕಾ-ರಿ-ಗ-ಳು -ಸ-ಮಾ-ಲೋ-ಚ-ನೆ ನಡೆ-ಸಿ ಸೈಬ-ರ್ ಅಪ-ರಾ-ಧ-ಗ-ಳ-ನ್ನು ತಡೆ-ಯ-ಲು ಯೋಜ-ನೆ-ಗ-ಳ-ನ್ನು ರೂಪಿ-ಸಿದ್ದಾರೆ.
ಕೇಂದ್ರದ ವಿಜ್ಞಾ-ನ ಮತ್ತು ತಂತ್ರ-ಜ್ಞಾ-ನ -ಕು-ರಿ-ತ ಸಂಸ-ತ್ತಿ-ನ ಸ್ಥಾಯಿ ಸಮಿ-ತಿ-ಯು ಸೈಬ-ರ್ ಅಪ-ರಾ-ಧಿ-ಗ-ಳಿ-ಗೆ 3 ವ-ರ್ಷ-ಗ-ಳ ಜೈಲು-ಶಿಕ್ಷೆ ಅಥ-ವಾ 2 ಲಕ್ಷ ರುಪಾ-ಯಿ-ವ-ರೆ-ಗೆ ದಂಡ ವಿಧಿ-ಸ-ಬೇ-ಕೆಂ-ದು -ಸ-ಲ-ಹೆ ನೀಡಿತ್ತು. ಸಚಿವ ಸಂಪುಟ ಇದಕ್ಕೆ ಅನುಮೋದನೆಯನ್ನೂ ನೀಡಿತ್ತು.
ಸೈಬರ್ ತಂತ್ರಜ್ಞಾನ ವಿಶ್ವ ವ್ಯಾಪಿಯಾಗುತ್ತಿರುವಂತೆಯೇ ರಾಷ್ಟ್ರದಲ್ಲಿ ಅಧಿಕಗೊಳ್ಳುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸಮಗ್ರ ಕಾಯಿದೆಯಾಂದನ್ನು ತರಲು ಸಹ ಕೇಂದ್ರ ಸರಕಾರ ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ನಡೆದ ಈ ತರಬೇತಿ ಕಾರ್ಯಾಗಾರಕ್ಕೆ ಮಹತ್ವ ಬಂದಿದೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications