ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಹಾಕಿಕೊಂಡ ಯೋಜನೆಗಳ ಪ್ರಗತಿ ಎಷ್ಟಾಗಿದೆ ಎಂದು ಸ್ನೇಹಿತರು ನೋಡ ಬಯಸಿದಾಗ ಹಿಂಜರಿಕೆ ಬೇಡ. ಅಥವಾ ಬೇರೆ ಕಡೆಗೆ ಮುಖ ತಿರುಗಿಸುವುದು ಬೇಡ.

ವೃಷಭ : ವಿಜಯ ನಿಮ್ಮ ಕಡೆಗಿರುವುದುರಿಂದ ದಿನವಿಡೀ ಆತಂಕ ಪಡುವ ಆಗತ್ಯ ಇಲ್ಲ. ಸುಮ್ಮನೇ ಆತ್ಮ ವಿಶ್ವಾಸ ಕುಂದಿಸಿಕೊಂಡರೆ ಮನಸ್ಸು ಕೆಡುತ್ತದೆ.

ಮಿಥುನ : ಬರೀ, ಗಲಾಟೆ ಸೃಷ್ಟಿಸುವುದನ್ನು ಬಿಟ್ಟು ಪಾಠ ಪ್ರವಚನಗಳ ಕಡೆಗೆ ಸ್ವಲ್ಪ ಗಮನ ಹರಿಸುವುದನ್ನು ಕಲಿತುಕೊಳ್ಳಿ. ಹಿರಿಯರಿಂದ ಬೈಯಿಸಿ ಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು.

ಕಟಕ : ಶಕುನಗಳನ್ನು ನಂಬಿ ಸುಮ್ಮನೇ ತಲೆ ಕೆಡಿಸಿಕೊಳ್ಳುತ್ತೀರಿ. ಸ್ನೇಹಿತರು ಮತ್ತು ಬಂಧುಗಳು ನಿಮ್ಮ ಒಳ್ಳಿತನ್ನೇ ಹಾರೈಸುವುದರಿಂದ ಸೋಲು ನಿಮ್ಮ ಕಡೆ ತಲೆಯಿಟ್ಟು ಮಲಗುವುದಿಲ್ಲ.

ಸಿಂಹ : ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಒಸಗೆ ನಿಮ್ಮ ಕೈ ಸೇರುವುದಿಲ್ಲ. ಆದ್ದರಿಂದ ವೃಥಾ ಸಮಯ ಹಾಳು ಮಾಡಬೇಡಿ. ನಿಮ್ಮ ಯೋಜನೆಗಳನ್ನು ಸ್ಪಷ್ಟಪಡಿಸಿಕೊಂಡು ಮುಂದುವರೆಯುವುದು ಎಲ್ಲಾ ದೃಷ್ಠಿಯಿಂದಲೂ ಉತ್ತಮ.

ಕನ್ಯಾ : ಬೇರೆಯವರ ಸಹಾಯವನ್ನು ನೆಚ್ಚಿಕೊಳ್ಳದೇ ಇರುವುದರಿಂದ ನಿಮ್ಮ ಸ್ಥಿಮಿತವನ್ನು ಉಳಿಸಿಕೊಳ್ಳುತ್ತೀರಿ. ಮತ್ತೆ ಗೌರವ ಎನ್ನುವುದು ಕೊಟ್ಟು ತೆಗೆದುಕೊಳ್ಳಬೇಕಾದ್ದು ಅಲ್ಲವೇ ?

ತುಲಾ : ಎಲ್ಲ ಕೆಲಸವನ್ನು ನಿಮ್ಮ ಬಂಧುಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮಾಡುವುದರಿಂದ ನಿಮಗೆ ಸುಸ್ತೆನಿಸುತ್ತದೆ. ಕೋಲಾ, ಪೆಪ್ಸಿ, ಸುತ್ತಾಟದಲ್ಲೆಲ್ಲಾ ನಿರಾಳವಾಗಿರುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರ.

ವೃಶ್ಚಿಕ : ನಿಮಗೆ ನಿಮ್ಮವರೇ ಶತ್ರುಗಳು. ಅವರ ಕಾಟವನ್ನು ಸಹಿಸಿಕೊಳ್ಳುವುದುನ್ನು ಈಚೀಚೆಗೆ ಜಾಸ್ತಿ ಮಾಡಿದ್ದೀರಿ. ನಿಮ್ಮ ತಾಳ್ಮೆಯೇ ನಿಮ್ಮನ್ನು ರಕ್ಷಿಸುತ್ತದೆ.

ಧನಸ್ಸು : ಇವತ್ತು ಹೊಸ ಆಭರಣ ಅಥವಾ ಬಟ್ಟೆ ತೊಡುವ ಯೋಗವಿದೆ. ಮದುವೆ, ಮುಂಜಿ ಪಾರ್ಟಿಗಳಿಗೆಲ್ಲಾ ಹಣ ಖರ್ಚಾಗುತ್ತಿದೆ ಎಂದು ಕೊರಗುವುದು ಸಲ್ಲ.

ಮಕರ : ಇನ್ನು ವ್ಯರ್ಥ ಮಾಡುವುದಕ್ಕೆ ಕಾಲ ನಿಮ್ಮ ಬಳಿ ಇಲ್ಲ. ಎಲ್ಲಕ್ಕಿಂತ ಮುಂಚೆ ಆಗಾಗ ಕೆಟ್ಟು ಹೋಗುತ್ತಿರುವ ಮನಸ್ಸನ್ನು ಚೆಂದವಾಗಿಟ್ಟುಕೊಳ್ಳುವುದು ಅಗತ್ಯ .

ಕುಂಭ : ಇನ್ನೊಬ್ಬರ ತೊಂದರೆಗಳನ್ನು ಸಹಿಸಿಕೊಂಡು ನಿಮ್ಮ ಪ್ರಮುಖ ಕೆಲಸಗಳನ್ನು ನಿಭಾಯಿಸಿಕೊಂಡು ಹೋಗುವ ನಿಮ್ಮ ಜಾಣ್ಮೆಯನ್ನು ಈಗ ಸದುಪಯೋಗ ಪಡಿಸಿಕೊಳ್ಳಬೇಕು.

ಮೀನ : ಸಂಬಂಧಗಳ ವಿಷಯದಲ್ಲಿ ಎದುರಾದ ಸೋಲಿನಿಂದ ಬೇಜಾರು ಪಟ್ಟುಕೊಂಡರೆ ದಿನ ಹಾಳಾಗುತ್ತದೆ. ಎನಿವೇ, ಸದ್ಯಕ್ಕೆ ಬಿಸಿ ಶೆಡ್ಯೂಲ್‌ ಏನೂ ನಿಮ್ಮ ಮುಂದಿಲ್ಲ ವಾದ್ದರಿಂದ ರಿಲ್ಯಾಕ್ಸ್‌ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X