ಮಾನನಷ್ಟ ವರದಿ : ಲಂಕೇಶ್ ಪತ್ರಿಕೆ ಕುಷ್ಟಗಿಗೆ ಜೈಲು
ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಗಿನ ನಿರ್ದೇಶಕ ಬಿ.ಎ.ಹರೀಶ್ ಗೌಡರ ವಿರುದ್ಧ ಲಂಕೇಶ್ ಪತ್ರಿಕೆಯಲ್ಲಿ ಬರೆದಿದ್ದ ಲೇಖನ ಮಾನನಷ್ಟ ಮಾಡುವಂಥದ್ದು ಎಂದು ನಿರ್ಧರಿಸಿದ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಪತ್ರಿಕೆಯ ವರದಿಗಾರ ಗಂಗಾಧರ ಕುಷ್ಟಗಿ ಅವರಿಗೆ 3 ತಿಂಗಳ ಸಾದಾ ಶಿಕ್ಷೆ ಹಾಗೂ 1 ಸಾವಿರ ರುಪಾಯಿ ದಂಡ ವಿಧಿಸಿದ್ದಾರೆ. ಇನ್ನಿಬ್ಬರು ವರದಿಗಾರರಾದ ರವೀಂದ್ರ ರೇಶ್ಮೆ ಹಾಗೂ ಟಿ.ಕೆ.ತ್ಯಾಗರಾಜ್ ಅವರಿಗೆ ತಲಾ 5 ಸಾವಿರ ರುಪಾಯಿ ದಂಡ ಹೇರಿದೆ.
ಮ್ಯಾಜಿಸ್ಟ್ರೇಟ್ ಪಿ.ಎ.ಶಿವಪ್ರಸಾದ್ ಗುರುವಾರ ಮಧ್ಯಾಹ್ನ ಈ ತೀರ್ಪನ್ನೊಳಗೊಂಡ ಆದೇಶ ನೀಡಿದರು. ಆದೇಶ ನೀಡಿದ ಸಂದರ್ಭದಲ್ಲಿ ಮೂವರೂ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಕೇವಲ ದಂಡ ವಿಧಿಸಿರುವ ಆರೋಪಿಗಳಿಬ್ಬರು ಅದನ್ನು ಕಟ್ಟದಿದ್ದಲ್ಲಿ 2 ತಿಂಗಳ ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದೂ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಆದದ್ದೇನು ? : 1998ರ ಆಗಸ್ಟ್ ತಿಂಗಳ ಲಂಕೇಶ್ ಪತ್ರಿಕೆಯ 3 ಸಂಚಿಕೆಗಳಲ್ಲಿ , ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ವಿಶೇಷಾಧಿಕಾರಿಯೂ ಆಗಿದ್ದ ಹರೀಶ್ಗೌಡರ ವಿರುದ್ಧ ಅವಹೇಳನ ಮಾಡುವಂಥ ವರದಿಗಳನ್ನು ಪ್ರಕಟಿಸಲಾಗಿತ್ತು. ಇದು ಸುಳ್ಳೆಂದು ಹರೀಶ್ ಗೌಡ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.
ಕನ್ನಡ ಉಪನ್ಯಾಸಕ ಎಲ್.ಎನ್.ಮುಕುಂದರಾಜ್ ಎಂಬುವರನ್ನು ಬೆಂಗಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ತುಮಕೂರು ತಾಲ್ಲೂಕಿನ ಕಾಲೇಜೊಂದಕ್ಕೆ ವರ್ಗಾವಣೆ ಮಾಡಿದ್ದರ ಫಲ ಆ ಲೇಖನವಾಗಿತ್ತು. ವಿಧಾನ ಪರಿಷತ್ ಸದಸ್ಯ ಎಸ್.ಚನ್ನಬಸವಯ್ಯ ತಮ್ಮ ಬೆಂಬಲಿಗರೊಟ್ಟಿಗೆ ಪದವಿ ಪೂರ್ವ ನಿರ್ದೇಶನಾಲಯದ ಮುಂದೆ ಧರಣಿ ಕೂತರೂ ನಾನು ವರ್ಗಾವಣೆ ಆದೇಶ ರದ್ದು ಮಾಡಲಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಇಲ್ಲ ಸಲ್ಲದ್ದನ್ನು ಲಂಕೇಶ್ ಪತ್ರಿಕೆ ಬರೆಯಿತು. ಹೋರಾಟದ ಹಾದಿಯಲ್ಲೇ ಮುಖ್ಯ ಆರೋಪಿ ಲಂಕೇಶ್ ಮೃತಪಟ್ಟರೂ, ನಾನು ಇತರೆ ಆರೋಪಿಗಳನ್ನು ಬಯಲಿಗೆ ಎಳೆಯಲು ಮೊಕದ್ದಮೆ ಮುಂದುವರೆಸಿದೆ. ಈಗ ಅದಕ್ಕೆ ಸತ್ಫಲ ದೊರೆತಿದೆ ಎಂದು ಹರೀಶ್ ಗೌಡ ಹರ್ಷದಿಂದ ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications