ನಾಸ್ಕಾಂ ಅಧ್ಯಕ್ಷ ದೇವಾಂಗ್ ಮೆಹ್ತಾ ನಿಧನರಾದದ್ದು ಹೇಗೆ?
ಸಿಡ್ನಿ : ನಾಸ್ಕಾಂ ಅಧ್ಯಕ್ಷ ದೇವಾಂಗ್ ಮೆಹ್ತಾ ನಿಧನರಾಗಿದ್ದು ಹೃದಯಾಘಾತದಿಂದ ಎಂದು ಶವ ಪರೀಕ್ಷಾ ವರದಿ ಶುಕ್ರವಾರ ದೃಢಪಡಿಸಿದೆ.
ಅಪ-ರಾ-ಧ ಸಂಶೋ--ಧ-ನಾ (ಫೊರೆನ್ಸಿಕ್ ಸೈನ್ಸ್) ವೈದ್ಯರು ಶವಪರೀಕ್ಷೆ ನಡೆಸಿದಾಗ, 38ರ ಹರೆಯದ ದೇವಾಂಗ್ ಮೆಹ್ತಾ ಸಾವಿಗೆ ಹೃದಯಾಘಾತವೇ ಕಾರಣ ಎಂಬುದು ಖಚಿತವಾಗಿದೆ. ಪ್ರಸ್ತುತ ಸಿಡ್ನಿಯಲ್ಲಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್ ಮಹಾಜನ್, ಮೆಹ್ತಾ ಅವರ ಕಳೇಬರ ತರುವ ಸಲುವಾಗಿ ಭಾರತಕ್ಕೆ ವಿಳಂಬವಾಗಿ ಹಿಂತಿರುಗಲಿದ್ದಾರೆ ಎಂದು ಸಿಡ್ನಿಯಲ್ಲಿನ ಭಾರತದ ಹಂಗಾಮಿ ಕನ್ಸಲ್ ಜನರಲ್ ಸುಧೀರ್ ಕುಮಾರ್ ಹೇಳಿದ್ದಾರೆ.
ನಾವು ಮೆಹ್ತಾ -ಅವರ ಪಾರ್ಥಿವ ಶರೀರ ಪಡೆಯಲು ಶತಾಯಗತಾಯ ಯತ್ನಿಸುತ್ತಿದ್ದೇವೆ. ಶುಕ್ರವಾರ ಗುಡ್ಫ್ರೆೃಡೆ ರಜೆ ಆದ್ದರಿಂದ ಇಲ್ಲಿನ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಶುಕ್ರವಾರ ಇಳಿಸಂಜೆ ಹೊತ್ತಿಗೆ ಕಳೇಬರ ದೊರೆಯುವ ನಿರೀಕ್ಷೆಯಿದೆ ಎಂದು ಪ್ರಮೋದ್ ಮಹಾಜನ್ ತಿಳಿಸಿದ್ದಾರೆ.
ಮರಣಕ್ಕೆ ಮುನ್ನ : ಬುಧವಾರ ರಾತ್ರಿಯುನೈಟೆಡ್ ಇಂಡಿಯಾ ಅಸೋಸಿಯೇಷನ್ ಡಿನ್ನರ್ ನಂತರ ಮೆಹ್ತಾ ತಮ್ಮ ಸಹೋದರಿ ರುಪಾಲ್ ಮನೆಗೆ ಹೋಗಿದ್ದಾರೆ. ರುಪಾಲ್ ಕೈಲಿ ತಮಗಿಷ್ಟವಾದ ಮೆಕ್ಸಿಕನ್ ಅಡುಗೆ ಮಾಡಿಸಿ ತಿಂದು, ಮೆಚ್ಚಿದ್ದಾರೆ. ರುಪಾಲ್ರ 10 ವರ್ಷದ ಮಗಳ ಜೊತೆ ಕಂಪ್ಯೂಟರ್ನಲ್ಲಿ ಆಟ ಆಡಿದ್ದಾರೆ. ಹರಟೆ ಕೊಚ್ಚಿದ್ದಾರೆ. ರಾತ್ರಿ 1.45ಕ್ಕೆ ಅಲ್ಲಿಂದ ಹೊಟೇಲಿಗೆ ಹೊರಟಿದ್ದಾರೆ. ಇಷ್ಟೆಲ್ಲವನ್ನೂ ಹೇಳುವ ರುಪಾಲ್ಗೆ ಈಗ ತಮ್ಮ ಸೋದರನ ಸಾವನ್ನು ನಂಬಲಾಗುತ್ತಿಲ್ಲ. ಸಿಡ್ನಿಗೆ ಇದು ಮೆಹ್ತಾ ಕೊಟ್ಟ ಐದನೇ ಭೇಟಿ. ಈ ಬಾರಿ ತುಂಬಾ ಬಿಜಿಯಾಗಿದ್ದರು ಎಂದು ರುಪಾಲ್ ಹೇಳಿದ್ದಾರೆ.
ರುಪಾಲ್ ಸೋದರಿ ಅಮಿತ, ಮೆಹ್ತಾ ಪಾರ್ಥಿವ ಶರೀರವನ್ನು ದೆಹಲಿಗೆ ತರಲಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications