ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿಗೆ ಸಾವೇ ಶ್ರದ್ಧಾಂಜಲಿ,ಖ್ಯಾತ ವಿಜ್ಞಾನಿ ವಿಶ್ವಾಮಿತ್ರ ನಿಧನ

By Staff
|
Google Oneindia Kannada News

ಬೆಂಗಳೂರು : ಕಳೆದ ಶನಿವಾರ ಚೆನ್ನೈನಲ್ಲಿ ನಿಧನರಾದ ಹೆಸರಾಂತ ವಿಜ್ಞಾನಿ ಪ್ರೊ. ಜಿ.ಎನ್‌. ರಾಮಚಂದ್ರನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಗರದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಸ್ನೇಹಿತನ ಸಾಧನೆಯನ್ನು ಕೊಂಡಾಡಿದ ಖ್ಯಾತ ವಿಜ್ಞಾನಿ ಪ್ರೊ. ಎಂ.ಎ. ವಿಶ್ವಾಮಿತ್ರ ಮಂಗಳವಾರ ಇಲ್ಲಿ ನಿಧನರಾದರು.

ಮಾಜಿ ರಾಜ್ಯ ಸಭಾ ಸದಸ್ಯ ಸಚ್ಚಿದಾನಂದ ಸ್ವಾಮಿ ಅವರ ಸೋದರರಾದ ವಿಶ್ವಾಮಿತ್ರ ಅವರು, ಅಲ್ಟ್ರಾ ಅತಿ ಉಷ್ಣ (2000 ಡಿಗ್ರಿ ಸೆಲ್ಸಿಯಸ್‌) ಸಿಂಗಲ್‌ ಕ್ರಿಸ್ಟಲ್‌ ಎಕ್ಸ್‌ರೇ ವಿಸನ್‌ಬರ್ಗ್‌ ಕ್ಯಾಮರಾ ಅಭಿವೃದ್ಧಿಪಡಿಸಿದ್ದರು. ಹಲವಾರು ಸಂಶೋಧನೆಗಳನ್ನು ನಡೆಸಿದ್ದರು.

ಭಾರತ ರಾಷ್ಟ್ರೀಯ ವಿಜ್ಞಾನ ಅಕಾಡಮಿಯ ಜೆ.ಸಿ. ಬೋಸ್‌ ಪದಕ, ಸರ್‌.ಸಿ.ವಿ. ರಾಮನ್‌ ಪ್ರಶಸ್ತಿಯೇ ಮೊದಲಾದ ಗೌರವಗಳಿಗೂ ಅವರು ಪಾತ್ರರಾಗಿದ್ದರು. ವಿಶ್ವಮಿತ್ರಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೆಂಗಳೂರಿನ ಹರಿಶ್ಚಂದ್ರಘಾಟ್‌ನಲ್ಲಿ ನೆರವೇರಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X