ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ : ಸಿಡಿಲಿಗೆ ಒಬ್ಬನ ಬಲಿ, ಮನೆ ಕುಸಿದು ಇಬ್ಬರಿಗೆ ಗಾಯ
ಉಡುಪಿ : ಜಿಲ್ಲೆಯ ಪಾರಂಪಲ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯಾಬ್ಬ ಮೃತನಾಗಿದ್ದರೆ, ಗಂಗೊಳ್ಳಿ- ಆಲೂರು ಗ್ರಾಮದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಮನೆ ಕುಸಿದ ಕಾರಣವಾಗಿ ಇಬ್ಬರು ಗಾಯಗೊಂಡಿದ್ದಾರೆ.
ಜಾನುವಾರುಗಳಿಗೆ ಒಣ ಮೇವನ್ನು ತರಲು ಮನೆಯ ಸಮೀಪ ತನ್ನ ಮಗಳಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಗೆ ಸಿಡಿಲು ತಾಗಿ ಮೃತನಾಗಿದ್ದಾನೆ . ಮತ್ತೊಂದು ಘಟನೆಯಲ್ಲಿ ಮನೆ ಕುಸಿತದಿಂದಾಗಿ ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎರಡು ದುರಂತಗಳ ಹೊರತಾಗಿಯೂ ಜಿಲ್ಲೆಯ ಜನ ಮಳೆಯ ಆಗಮನದಿಂದಾಗಿ ಹರ್ಷಚಿತ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಡುಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನತೆಗೆ, ಈ ಮಳೆ ನೆಮ್ಮದಿ ತಂದಿದೆ.
(ಯುಎನ್ಐ)
Comments
Story first published: Wednesday, April 11, 2001, 5:30 [IST]