ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ : ಸಿಡಿಲಿಗೆ ಒಬ್ಬನ ಬಲಿ, ಮನೆ ಕುಸಿದು ಇಬ್ಬರಿಗೆ ಗಾಯ

By Staff
|
Google Oneindia Kannada News

ಉಡುಪಿ : ಜಿಲ್ಲೆಯ ಪಾರಂಪಲ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯಾಬ್ಬ ಮೃತನಾಗಿದ್ದರೆ, ಗಂಗೊಳ್ಳಿ- ಆಲೂರು ಗ್ರಾಮದಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿ ಮನೆ ಕುಸಿದ ಕಾರಣವಾಗಿ ಇಬ್ಬರು ಗಾಯಗೊಂಡಿದ್ದಾರೆ.

ಜಾನುವಾರುಗಳಿಗೆ ಒಣ ಮೇವನ್ನು ತರಲು ಮನೆಯ ಸಮೀಪ ತನ್ನ ಮಗಳಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಗೆ ಸಿಡಿಲು ತಾಗಿ ಮೃತನಾಗಿದ್ದಾನೆ . ಮತ್ತೊಂದು ಘಟನೆಯಲ್ಲಿ ಮನೆ ಕುಸಿತದಿಂದಾಗಿ ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡು ದುರಂತಗಳ ಹೊರತಾಗಿಯೂ ಜಿಲ್ಲೆಯ ಜನ ಮಳೆಯ ಆಗಮನದಿಂದಾಗಿ ಹರ್ಷಚಿತ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಡುಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನತೆಗೆ, ಈ ಮಳೆ ನೆಮ್ಮದಿ ತಂದಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X