ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಐಓಸಿಎಲ್-ನ 300 ಕೋಟಿ ರು. ಯೋಜ-ನೆ-ಗೆ ಚಾಲ-ನೆ
ಬೆಂಗಳೂರು : ಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ (ಕೆಐಓಸಿಎಲ್) ದ 300 ಕೋಟಿ ರುಪಾಯಿ ಕಬ್ಬಿಣದ ಅದಿರು ಯೋಜನೆಗೆ ಕೇಂದ್ರ ಉಕ್ಕು ಖಾತೆ ರಾಜ್ಯ ಸಚಿವ ಬಿ.ಕೆ.ತ್ರಿಪಾಠಿ ಏಪ್ರಿಲ್ 12, ಗುರುವಾರ ಆಂಧ್ರಪ್ರದೇಶದ ಆಂಗೋಲ್ನಲ್ಲಿ ಶಂಕು ಸ್ಥಾಪನೆ ಮಾಡಲಿದ್ದಾರೆ.
ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಂಕು ಸ್ಥಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆಂಧ್ರಪ್ರದೇಶದ ಸರ್ಕಾರದೊಟ್ಟಿಗೆ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಮಾಡಿಕೊಂಡ ಒಡಂಬಡಿಕೆಯ ಫಲ ಈ ಯೋಜನೆ ಎಂದು ಕೆಓಸಿಎಲ್ ಪ್ರಕಟಣೆ ತಿಳಿಸಿದೆ.
(ಯುಎನ್ಐ)
Comments
Story first published: Wednesday, April 11, 2001, 5:30 [IST]