ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ವೃಷಭ :ಮನೆಯ ಕೆಲಸ ಕಾರ್ಯಗಳೆಲ್ಲಾ ಅರ್ಧದಲ್ಲಿಯೇ ನಿಂತುಹೋಗಿರುವುದರಿಂದ ನಿಮ್ಮ ಚಿಂತೆ ಹೆಪ್ಪುಗಟ್ಟುತ್ತದೆ. ಆದರೆ ತುಂಬಾ ದಿನ ಈ ಚಿಂತೆ ಉಳಿದುಕೊಳ್ಳದು.
ಮಿಥುನ : ಅಸಮಾಧಾನ ಎಂಬುದನ್ನು ಇನ್ನೊಬ್ಬರು ತಂದಿಕ್ಕುವುದಿಲ್ಲ. ಹಾಗೆಯೇ ಖುಷಿಯನ್ನೂ. ನಿಮ್ಮ ಸಾಮರ್ಥ್ಯವನ್ನವಲಂಬಿಸಿ ದಿನ ಸಾಗುತ್ತದೆ.
ಕಟಕ : ಬಡವರಿಗೆ ಸಹಾಯ ಮಾಡಬೇಕು ಎಂಬ ಬೆಟ್ಟದಾಸೆಯ ಜೊತೆಗೆ ನೀವು ಸ್ವಲ್ಪ ಶ್ರಮ ಹಾಕಬೇಕು. ಆದ್ದರಿಂದ ಹೆಚ್ಚಿನ ಕನಸುಗಳು ನಿಮ್ಮ ಪ್ರಯತ್ನ ಸಾಗುವ ದಿಕ್ಕಿನಲ್ಲಿರುತ್ತವೆ.
ಸಿಂಹ : ವ್ಯಾಪಾರ ಉದ್ಯಮಗಳಲ್ಲಿ ನಿಮಗಿವತ್ತು ಯಶಸ್ಸು ಕಾದಿದೆ. ಸಂತೋಷದಿಂದಲೇ ಬರಮಾಡಿಕೊಳ್ಳಿ. ಆದರೆ ಅತಿ ಸಂತೋಷದಿಂದ ವರ್ತಿಸಿದರೆ ಕಳೆದುಕೊಂಡು ಬಿಡುತ್ತೀರಿ.
ಕನ್ಯಾ : ಹುಡುಗಿಯರ ವಿಷಯದಲ್ಲಿ ಜಾಗ್ರತೆಯಿಂದಿರುವುದು ಒಳ್ಳಿತು. ಮತ್ತೆ ಮತ್ತೆ ಸೋಲುವುದರಿಂದ ತುಂಬಾ ನಷ್ಟ ಅನುಭವಿಸುತ್ತೀರಿ ಎನ್ನುವುದು ನಿಮಗೆ ತಿಳಿದಿದೆ ಅಲ್ವೇ ?.
ತುಲಾ : ಗಣಿ ಉದ್ಯಮಗಳಲ್ಲಿ ತೊಡಗಿರುವವರಿಗೆ ಲಾಭವಿದೆ. ಮಾನಸಿಕವಾಗಿ ಹೆಚ್ಚು ನೊಂದುಕೊಂಡರೆ ತೊಂದರೆಯಾಗುತ್ತದೆ ಆದ್ದರಿಂದ ಎಲ್ಲಮರೆತು ಬಿಡಲು ಯತ್ನಿಸಿ.
ವೃಶ್ಚಿಕ : ತುಂಬಾ ವರುಷಗಳಿಂದ ತುಂಬಿಸಿಟ್ಟುಕೊಂಡಿದ್ದ ಸಿಟ್ಟನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ಸು ಗಳಿಸುತ್ತೀರಿ. ಮತ್ತೆ ಸ್ನೇಹಿತರ ಅಗಲಿಕೆಯ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ನಿಮ್ಮ ಕೈಲಿದೆ.
ಧನಸ್ಸು :ಹೊಸಬರನ್ನು ಕಂಡ ತಕ್ಷಣ ಅನುಮಾನಿಸುವ ನಿಮ್ಮ ಗುಣದಿಂದ ಸ್ವಲ್ಪ ನಷ್ಟ ತಂದೊಡ್ಡಿಕೊಳ್ಳುತ್ತೀರಿ. ಎನಿವೇ, ಬಿಸಿನೆಸ್ ಎಂದರೆ ಹಾಗೇ ಆದ್ದರಿಂದ ಚಲೇಗಾ.
ಮಕರ : ಕಳೆದ ದಿನಗಳು ಮತ್ತೆ ಬಾರವು. ಇವತ್ತಿನ ಈ ಖುಷಿ ಅನುಭವಿಸುವಾಗ ನಾಳೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಬೇಡ.
ಕುಂಭ : ಇನ್ನೊಬ್ಬರನ್ನು ನೋಯಿಸಿದ ನಂತರ , ಅವರು ನಿಮ್ಮಿಂದಾಗಿಯೇ ನೋವು ಅನುಭವಿಸುತ್ತಿದ್ದಾರೆ ಎನ್ನುವ ಪ್ರಜ್ಞೆ ಮ್ತತು ದಾಕ್ಷಿಣ್ಯ ಇರಬೇಕಲ್ವೇ ? ಮನುಷ್ಯತ್ವಕ್ಕಿಂತ ಇನ್ನೊಂದು ದೊಡ್ಡ ಗುಣವಿಲ್ಲ.
ಮೀನ : ಕಮಿಟ್ಮೆಂಟ್ಗಳು ಎಲ್ಲೇ ಆದರೂ, ಅದಕ್ಕೆ ಬದ್ಧರಾಗಿರಬೇಕು ಎಂಬುದನ್ನು ಒಪ್ಪಿಕೊಂಡಿದ್ದೀರಿ. ಸಂತೋಷ. ಈ ಬಾರಿ ಸೋಲಿನ ಅನುಭವ ಜಾಸ್ತಿಯಾಗಬಹುದು.
ಮುಖಪುಟ / ಇವತ್ತು... ಈ ಹೊತ್ತು...