Get Updates
Get notified of breaking news, exclusive insights, and must-see stories!

ಮಲ್ಲಿಗೆ ಮಳೆಯಲ್ಲಿ ಕರಗ ಬಂತು ಕರಗ

ಬೆಂಗಳೂರು : ಮೋಡಗಳೆಲ್ಲ ಹುಸಿಯಾದವು,karaga ಮಳೆ ಸುರಿಯಲಿಲ್ಲ . ಸುರಿದದ್ದು ಬಿಡಿ ಮಲ್ಲಿಗೆಗಳ ಮಳೆ. ಬಿಚ್ಚುಗತ್ತಿಯ ಕಾವಲಿನವರ ಜೊತೆ ಕರಗ ಹೊತ್ತ ವೀರ ಕುಮಾರ ಅಭಿಮನ್ಯು ಮುನ್ನಡೆಯುತ್ತಿದ್ದಂತೆ, ಹೆಜ್ಜೆ ಹೆಜ್ಜೆಗೂ ಭಕ್ತರಿಂದ ಹೂ ಮಳೆ. ಅದು ಬೆಂಗಳೂರು ಕರಗ. ರಜೆ ದಿನ, ಭಾನುವಾರದ ರಾತ್ರಿ, ಸಂದು ಹೋಗುವ ಮುನ್ನ ಸಂಭ್ರಮವೊಂದಕ್ಕೆ ಸಾಕ್ಷಿಯಾಯಿತು.

ಚೈತ್ರ ಹುಣ್ಣಿಮೆ. ಅಕ್ಕಿರೊಟ್ಟಿಯಂಥಾ ಚಂದ್ರಮನ ಹಾಲು ಚೆಲ್ಲಿದಂತಿದ್ದ ಬೆಳದಿಂಗಳು. ಅಲಸೂರು ಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಕರಗ ಮತ್ತೆ ದೇವಸ್ಥಾನಕ್ಕೆ ಮರಳುವ ಹೊತ್ತಿಗಾಗಲೇ ಚಂದ್ರಮ ಕಳೆಗುಂದಿದ್ದ . ಅದಕ್ಕೂ ಮುನ್ನ , ಆಂಜನೇಯ ಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿ ದೇಗುಲಗಳಲ್ಲಿ ಕರಗಕ್ಕೆ ಪೂಜೆ ಸಂದಿತ್ತು .

ಅಲಸೂರು ಪೇಟೆ, ತಿಗಳರ ಪೇಟೆ, ಗೊಲ್ಲರ ಪೇಟೆ, ನಗರ್ತ ಪೇಟೆ, ಗಾಣಿಗರ ಪೇಟೆ, ಕುಂಬಾರ ಪೇಟೆ, ದೇವಾಂಗ ಪೇಟೆ, ಜೋರಿ ಪೇಟೆ, ಚಿಕ್ಕ ಪೇಟೆ, ಕಿಲಾರಿ ಪೇಟೆ, ಅಕ್ಕಿ ಪೇಟೆ, ರಾಣಾಸಿಂಗ್‌ ಪೇಟೆ, ಬಳೇ ಪೇಟೆ, ಬಿನ್ನಿ ಪೇಟೆ ಹಾಗೂ ನಗರ ದೇವತೆ ಅಣ್ಣಮ್ಮನ ಗುಡಿ ಪ್ರದೇಶದಲ್ಲಿ ಸಾಗಿ ಬಂದ ಕರಗಕ್ಕೆ ಎಲ್ಲೆಲ್ಲೂ ಅದ್ದೂರಿ ಸ್ವಾಗತ. ಹಾದಿಯುದ್ದಕೂ ಜನ ಕಾದು ನಿಂತಿದ್ದರು, ಕರಗದೊಂದಿಗೇ ಸಾಗಿ ಬಂದರು. ಭಕ್ತಿ ಭಾವದಲ್ಲಿ ಕರಗಿದರು, ದಣಿವವರೆಗೆ ಕುಣಿದರು. ಇದರೊಂದಿಗೆ, ಮಾರ್ಚ್‌ 31 ರ ಮುಂಜಾವು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿದ್ದ ಶಕ್ತ್ತ್ಯೊತ್ಸವಕ್ಕೆ ಶಾಸ್ತ್ರೋಕ್ತ ತೆರೆಬಿತ್ತು .

ಕರಗವನ್ನು ಹೊತ್ತ ಗೌರವವನ್ನು ವರ್ಷದ ಅಂತರದ ನಂತರ ಅಭಿಮನ್ಯು ಮರಳಿ ಪಡೆದಿದ್ದರು. ಅವರು ಮೊದಲು ಕರಗ ಹೊತ್ತಿದ್ದು 1994 ರಲ್ಲಿ . ಆನಂತರ, 1996, 97, 99 ರಲ್ಲಿ ಕರಗ ಹೊತ್ತಿದ್ದರು. ಅಭಿಮನ್ಯು ಅವರ ತಂದೆ ಮುನಿಯಪ್ಪ ಹಾಗೂ ಅಜ್ಜ ಅರ್ಜುನಪ್ಪ ಇಬ್ಬರೂ ಕರಗ ಹೊತ್ತಿದ್ದರು. ಅವರಿಬ್ಬರೂ ಈಗಿಲ್ಲ . ಹೆಸರು ಹೇಳಲಿಕ್ಕೆ ಅಭಿಮನ್ಯು ಇದ್ದಾರೆ.

ಜನ ಸಾಮಾನ್ಯರು ಮಾತ್ರವಲ್ಲದೆ ರಾಜಕೀಯ ಪ್ರಮುಖರು, ಪಾಲಿಕೆಯ ಸದಸ್ಯರು ಕರಗ ನೋಡಲು ನೆರೆದವರಲ್ಲಿ ಸೇರಿದ್ದರು. ಜನ ಜಂಗುಳಿಯನ್ನು ನಿಯಂತ್ರಿಸಲು ಸೇರಿದ್ದ ಪೊಲೀಸರ ಸಂಖ್ಯೆಯೂ ಹೆಚ್ಚಿತ್ತು . ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಪ್ರಹಾರ ದಳವೂ ಕರಗವನ್ನು ಹಿಂಬಾಲಿಸಿತು.

(ಇನ್ಫೋ ವಿಶೇಷ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+