ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿರಸಿ ಶಾಲೆಯಲ್ಲಿ ಬೆಂಕಿ, 8 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ
ಶಿರಸಿ : ಇಲ್ಲಿನ ಹಳಿಯಾಳದ ಶಿವಾಜಿ ಕಾಲೇಜಿನ ಹೈಸ್ಕೂಲಿನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅಪಘಾತ ಸಂಭವಿಸಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ ವಾಗಿವೆ.
ಶಾಲೆಯ ಆಟದ ಸಾಮಾನುಗಳು, ಲೈಬ್ರರಿ ಪುಸ್ತಕಗಳು, ಮೇಜು ಕುರ್ಚಿಗಳು ಮತ್ತು ಸಂಗೀತ ವಾದ್ಯಗಳು ಬೆಂಕಿಗೆ ಆಹುತಿಯಾಗಿವೆ. ದಾಂಡೇಲಿಯ ಅಗ್ನಿ ಶಾಮಕದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕ್ಯೂಟ್ನಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನದಿಯಲ್ಲಿ ಮುಳುಗಿ ಸಾವು: ಬನವಾಸಿಯ ರಥೋತ್ಸವ ನೋಡಲು ಬಂದಿದ್ದ ಭದ್ರಾವತಿಯ ಅರುಣ್ಕುಮಾರ್ ರಂಗಪ್ಪ ಉಪ್ಪಾರ್(18) ವರದಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಾತ್ರಿ ಊಟದ ನಂತರ ನದಿ ಬದಿಗೆ ಹೋಗಿದ್ದ ಉಪ್ಪಾರ್ ಅವರು ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿದ್ದಾರೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.
(ಯು.ಎನ್.ಐ)
Story first published: Saturday, April 7, 2001, 5:30 [IST]