ಬೆಂಗಳೂರು ಸಂಪಂಗಿಕೆರೆ ಆವರಣದಲ್ಲಿ ಸಂಭ್ರಮದ ಹಸಿ ಕರಗ
ಬೆಂಗಳೂರು : ವಿಶ್ವ ವಿಖ್ಯಾತ ಬೆಂಗಳೂರು ಕರಗದ ಪೂರ್ವಭಾವಿಯಾಗಿ ಶನಿವಾರ ಬೆಳಗಿನ ಜಾವ ಸಂಪಂಗಿ ಕೆರೆ ಆವರಣದಲ್ಲಿ ಶ್ರದ್ಧೆ ಹಾಗೂ ಸಂಭ್ರಮದಿಂದ ಹಸಿ ಕರಗ ಪೂಜೆ ಹಾಗೂ ಮೆರವಣಿಗೆ ನಡೆಯಿತು. ಸಾವಿರಾರು ಜನ ಭಕ್ತಾದಿಗಳ ಸಮ್ಮುಖದಲ್ಲಿ ಹಸಿ ಕರಗವನ್ನು ಮಲ್ಲಿಗೆ ಹೂವಿನಿಂದ ಪೂಜಿಸಿ, ಗೋವಿಂದಾ ಗೋವಿಂದ ಎಂದು ಕೂಗುತ್ತಾ ವಹ್ನಿಕುಲ ವಂಶಸ್ಥರು ಉರಿಯುವ ಪಂಜಿನ ಬೆಳಕಲ್ಲಿ ಹಸಿ ಕರಗ ಹೊತ್ತು ಸಾಗಿದರು.
ಕರಗದ ಹಿಂದೆ ವೀರಕುಮಾರರು ಖಡ್ಗಗಳನ್ನು ಝಳಪಿಸುತ್ತಾ, ಗೋವಿಂದಾ ಡಿ, ಡಿಕ್ - ಡಿ ಎಂದು ಕೂಗುತ್ತಾ ಹಿಂಬಾಲಿಸಿದರು. ಭಾನುವಾರ ಚೈತ್ರ ಹುಣ್ಣಿಮೆ. ಭಾನುವಾರ ರಾತ್ರಿ ಬೆಂದಕಾಳೂರಿನಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಕ್ಕೆ ನಗರ ಸಜ್ಜಾಗಿದೆ. ಅಂದೇ ಬೆಂಗಳೂರು ನಗರ ಪಾಲಿಕೆ ಕೂಡ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಜಯಂತಿಯನ್ನೂ ಆಚರಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನೂ ಸನ್ಮಾನಿಸುತ್ತದೆ.
ಭಾರತದ ಸಿಲಿಕಾನ್ ಕಣಿವೆ ಎನಿಸಿರುವ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ನಡುವೆಯೂ ಕೂಡ ಕರಗ ಕಳೆಗುಂದಿಲ್ಲ. ದೇಶ ವಿದೇಶಗಳಿಂದ ಜನರು ಬೆಂಗಳೂರು ಕರಗ ಕಾಣಲು ಬರುತ್ತಾರೆ. ಅಷ್ಟೇಕೆ. ಬೆಂಗಳೂರಿನಲ್ಲಿರುವ ಯುವಪೀಳಿಗೆ, ಅದರಲ್ಲೂ ಸಾಫ್ಟ್ವೇರ್ ಎಂಜಿನಿಯರ್ಗಳ ದಂಡು ಕೂಡ ಕರಗ ವೀಕ್ಷಣೆಗೆ ಧರ್ಮರಾಯನ ದೇವಾಲಯದ ಬಳಿ ಬೀಡು ಬಿಡುತ್ತದೆ.
ಕಳೆದ ವರ್ಷ ಲಕ್ಷ್ಮೀಶರು ಹೊತ್ತಿದ್ದ ಕರಗ ಕಾಣಲು ಎಲೆಕ್ಟ್ರಾನಿಕ್ ಸಿಟಿಯಿಂದ ಬಸ್ ಮಾಡಿಕೊಂಡು ಬಂದ ಎಂಜಿನಿಯರ್ಗಳ ಸಂಖ್ಯೆಯೂ ಕಡಿಮೆ ಇರಲಿಲ್ಲ. ಈ ಬಾರಿ ಅಭಿಮನ್ಯು ಕರಗ ಹೊರುತ್ತಿದ್ದಾರೆ. ಬೆಂಗಳೂರಿನ ಕರಗ ಕುಣಿಯುವ ಕರಗ ಅಲ್ಲ. ಓಡುವ ಕರಗ. ಗಂಟೆ ಗಟ್ಟಲೆ ಕರಗ ಈಗ ಬರುತ್ತದೆ, ಆಗ ಬರುತ್ತದೆ ಎಂದು ಕಾಯುವ ಜನರನ್ನು ಕರಗ ಬಂತು ಕರಗ ಎಂದು ಕೂಗಿ ಏಪ್ರಿಲ್ ಫೂಲ್ ಮಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೂ ಜನ ಕಾದು ಕರಗ ನೋಡಿ, ಪುರಿ ಬತ್ತಾಸು, ಕಡಲೆಕಾಯಿ ತಿನ್ನುತ್ತಾ ಆನಂದದಿಂದ ಮನೆಗೆ ಮರಳುತ್ತಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications