ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮಗಿವತ್ತು ಪ್ರಶಸ್ತಿ ಪತ್ರಗಳ, ಸನ್ಮಾನ ಸುದ್ದಿ ಎದುರಾಗುತ್ತದೆ. ಹಾಗಂತ ತುಂಬಾ ಜಂಬ ಮಾಡಿಕೊಳ್ಳಬೇಡಿ. ಈ ಖುಷಿಗೆ ಸಂಜೆ ಒಂದು ಸಣ್ಣ ಪಾರ್ಟಿಗಾಗಿ ಕಿಸೆ ಹಗುರಾಗುತ್ತದೆ.ವೃಷಭ : ನಿಮ್ಮೊಡನೆ ವ್ಯವಹರಿಸುವುದು ಕಷ್ಟ ಅಂತ ನಿಮ್ಮ ಸ್ನೇಹಿತರೆಲ್ಲರೂ ನಿರ್ಧರಿಸುವ ಮುಂಚೆ ನೀವು ಸ್ವಲ್ಪ ಬದಲಾಗಬೇಕು. ಆ ದಿಕ್ಕಿನಲ್ಲಿ ಇನ್ನೂ ಯೋಚನೆ ಮಾಡಿಲ್ಲ ಅಲ್ಲವಾ ?
ಮಿಥುನ : ನಿಮ್ಮ ನಿರ್ಧಾರಗಳು ತುಂಬಾ ಡೈಲ್ಯೂಟ್ ಅಂತ ನೀವೇ ಸಂಶಯಪಟ್ಟುಕೊಳ್ಳುವ ಅಗತ್ಯ ಇಲ್ಲ. ಇವತ್ತು ಬ್ಯಾಂಕ್ ವ್ಯವಹಾರಗಳಲ್ಲಿ ಗೆಲವು ಅಂದಮೇಲೆ ಧನಲಾಭ ಅಂತ ಬೇರೆ ಹೇಳಬೇಕಿಲ್ಲ.
ಕಟಕ : ನಿಮ್ಮ ಆಫೀಸು ಕೆಲಸಗಳು ಟೇಬಲ್ ಮೇಲೆ ರಾಶಿ ಬೀಳುತ್ತಿರುವುದನ್ನು ನೋಡಿ ಗಾಬರಿಯಾಗಬೇಡಿ. ಸದ್ಯದಲ್ಲಿಯೇ ನಿಮಗೆ ಅಸಿಸ್ಟೆಂಟ್ ಒಬ್ಬರು ದೊರಕುತ್ತಾರೆ.
ಸಿಂಹ : ಇವತ್ತು ಶಾಪಿಂಗ್ಗೆ ಉತ್ತಮ ದಿನ. ಚೌಕಾಸಿ ಮಾಡುವುದರಲ್ಲಿ ನೀವು ಎತ್ತಿದ ಕೈಯಾಗಿದ್ದರೆ ಲಾಭ ಕಾದಿಟ್ಟದ್ದು. ಆದ್ದರಿಂದ ಆಲ್ ದ ಬೆಸ್ಟ್.
ಕನ್ಯಾ : ವಿದ್ಯಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇವತ್ತು ಸುದಿನ. ನೀವು ಬಹುದಿನಗಳಿಂದ ಕಾಪಿಟ್ಟುಕೊಂಡು ಬಂದಿರುವ ಜ್ಞಾನ ಭಂಡಾರ ಇವತ್ತು ಉಪಯೋಗಕ್ಕೆ ಬರುತ್ತದೆ.
ತುಲಾ : ಮನೆ ವ್ಯವಹಾರಗಳು ತಲೆ ತುಂಬಾ ತುಂಬಿದೆ ಅಂತ ಅನಿಸುವುದು ಸಹಜ. ಆದರೆ ಸ್ವಲ್ಪವೇ ತಲೆ ಖರ್ಚು ಮಾಡಿದರೂ ಎಲ್ಲ ಕೆಲಸಗಳೂ ಮುಗಿದು ಹೋಗುತ್ತವೆ.
ವೃಶ್ಚಿಕ : ಮಕ್ಕಳು ಮರಿಗಳ ತಂಟೆ ಸಹಿಸಿಕೊಂಡರೆ ಆರಾಮವಾಗಿರುತ್ತೀರಿ. ಆಫೀಸಿನಲ್ಲಿಯೂ ಉಪಟಳಗಳಿರುವುದರಿಂದ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿ.
ಧನಸ್ಸು :ಸದ್ಯಕ್ಕೆ ಅಂತ ಎತ್ತಿಟ್ಟಿರುವ ಹಣವೇನೂ ನಿಮ್ಮ ಬಳಿ ಇಲ್ಲದೇ ಇರುವುದರಿಂದ ಸಾಲ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹಣ ಪಡೆವ ಮುನ್ನ ಎರಡೆರಡು ಸಾರಿ ಯೋಚಿಸಿ.
ಮಕರ : ಒಂದಷ್ಟು ಕೆಲಸಗಳನ್ನು ಈ ಸಮಯದಲ್ಲಿಯೇ ಮಾಡಬೇಕು ಅಂತ ಯೋಚಿಸಿದ್ದು ನೆನಪಿದೆಯಾ ? ಅವುಗಳನ್ನೆಲ್ಲಾ ಮರೆತ ಹಾಗಿದೆ.
ಕುಂಭ : ಸ್ಪೋರ್ಟ್ಸ್ ಮೀಟ್ನಲ್ಲಿ ಭಾಗವಹಿಸಲು ಹಿಂದೆ ಮುಂದೆ ನೋಡುವುದು ಬೇಡ. ಇವತ್ತು ಲಕ್ ನಿಮ್ಮ ಪಾಲಿಗಿದೆ.
ಮೀನ : ಅಳಿದು ಹೋದ ರಾಜ್ಯಕ್ಕೆ ಉಳಿದವನೇ ಗೌಡ ಅನ್ನುವ ಗಾದೆ ನಿಮಗೀಗ ನೆನಪಿಗೆ ಬರಬೇಕು. ಪರಿಸ್ಥಿತಿಯ ದುರುಪಯೋಗ ಪಡೆಯಬಾರದು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications