Get Updates
Get notified of breaking news, exclusive insights, and must-see stories!

ಬೆಂಗಳೂರು- ಹುಬ್ಬಳ್ಳಿ ರೈಲಿಗೆಸಿದ್ಧಾರೂಢ ಶ್ರೀಗಳ ಹೆಸರು

ಬೆಂಗಳೂರು : ಹುಬ್ಬಳ್ಳಿ ಹಾಗೂ ಬೆಂಗಳೂರನ್ನು ಸಂಪರ್ಕಿಸುವ ಅಂತರನಗರ ರೈಲಿಗೆ ಸಿದ್ಧಾರೂಢ ಶ್ರೀಗಳ ಹೆಸರನ್ನಿಡಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು , ಈ ಕುರಿತಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ರಾಜ್ಯದ ಧರ್ಮ, ಸಂಸ್ಕೃತಿಯನ್ನು ಎತ್ತರಕ್ಕೊಯ್ದ ಮಹನೀಯರಲ್ಲಿ ಸಿದ್ಧಾರೂಢರೂ ಒಬ್ಬರು. ಅವರ ಹೆಸರನ್ನು ಅಂತರನಗರ ರೈಲಿಗಿಡುವುದು ಸೂಕ್ತ . ಆ ಕಾರಣದಿಂದಾಗಿ, ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೇ ಪತ್ರ ಬರೆಯಲಾಗುವುದು ಎಂದು ಕೃಷ್ಣ ಹೇಳಿದರು. ಸೋಮವಾರ ಅವರು, ಸಿದ್ಧಾರೂಢ ಸ್ವಾಮಿಗಳ 164 ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿದ್ದ ವೇದ, ಉಪನಿಷತ್ತನ್ನು ಸಾಮಾನ್ಯನವರೆಗೆ ತಂದ ಅಗ್ಗಳಿಕೆ ಸಿದ್ಧಾರೂಢರದು. ಸರ್ವಧರ್ಮ, ಸಮಭಾವ ಹಾಗೂ ಜಾತ್ಯತೀತ ನಿಲುವನ್ನು ಜೀವನದುದ್ದಕ್ಕೂ ಪ್ರಚುರ ಪಡಿಸಿದ ಸಿದ್ಧಾರೂಢರು ಶೋಷಿತರ ಕಣ್ಣೀರು ಒರೆಸಿದ ಮಹಾತ್ಯಾಗಿ ಎಂದು ಮುಖ್ಯಮಂತ್ರಿ ಬಣ್ಣಿಸಿದರು .

ಸಿದ್ಧಾರೂಢರ ಹುಟ್ಟೂರು ಸ್ಮಾರಕವಾದೀತೆ ?

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೃಹತ್‌ ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌ ಸಿದ್ಧಾರೂಢರು ಹುಟ್ಟಿದ ಊರು, ಆಸ್ತಿ ಪಾಸ್ತಿಯನ್ನು ಸ್ಮಾರಕವನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸಂಸ್ಕೃತಿ ಖಾತೆ ಸಚಿವರ ಗಮನಕ್ಕೆ ತಂದರು. ಆನಂತರ ಮಾತನಾಡಿದ ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌, ಈ ನಿಟ್ಟಿನಲ್ಲಿ ಸ್ವಾಮೀಜಿಯ ಹುಟ್ಟೂರಿಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಆಶ್ವಾಸನೆ ನೀಡಿದರು. ಇದೇ ಸಂದರ್ಭದಲ್ಲಿ ವೇದಾಂತ ಸಾರ್ವಭೌಮ ಕೃತಿಯನ್ನು ಎಚ್‌.ಕೆ. ಪಾಟೀಲ್‌ ಬಿಡುಗಡೆ ಮಾಡಿದರೆ, ಸಿದ್ಧಾರೂಢರ ಭಾವಚಿತ್ರವನ್ನು ಶಾಸಕ ಪಿಜಿಆರ್‌ ಸಿಂಧ್ಯಾ ಬಿಡುಗಡೆ ಮಾಡಿದರು.

ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣ, ಕಾರ್ಮಿಕ ಸಚಿವ ಎ.ಎಂ. ಹಿಂಡಸಗೇರಿ, ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಸಂಸದ ವಿ.ಎಸ್‌. ಕೃಷ್ಣ ಅಯ್ಯರ್‌, ನೇತ್ರ ತಜ್ಞ ಡಾ.ಎಂ.ಸಿ. ಮೋದಿ, ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+