ಶ್ರೀರಾಮ ನವಮಿ
(ನಮ್ಮ ವರದಿಗಾರರಿಂದ)
ಈಶ್ವರ ಅಲ್ಲಾ ತೇರೇನಾಮ್
ಸಬಕೋ ಸನ್ಮತಿ ದೇ ಭಗವಾನ್
ಬೆಂಗಳೂರು : ಚೈತ್ರಶುದ್ಧ ನವಮಿ ಏಪ್ರಿಲ್ 2ರ ಈ ಹೊತ್ತು ಕರ್ನಾಟಕದಲ್ಲಿ ಶ್ರೀರಾಮನವಮಿಯ ಸಂಭ್ರಮ. ಏರುತ್ತಿರುವ ಬಿಸಿಲ ಬೇಗೆಗೆ ಶ್ರೀರಾಮ ನವಮಿಯ ನೀರು ಮಜ್ಜಿಗೆ ಹಾಗೂ ಬೇಲದ ಹಣ್ಣಿನ ಪಾನಕ ತಂಪನ್ನೆರೆಯುತ್ತಿದೆ. ಬಾಯಾರಿದವರ ನೀರಿನ ದಾಹವನ್ನು ತೀರಿಸುತ್ತಿದೆ. ಬೆಂಗಳೂರೂ ಸೇರಿದಂತೆ ರಾಜ್ಯದೆಲ್ಲೆಡೆ ತ್ರೇತಾಯುಗಪುರುಷನ ಜನ್ಮದಿನ ಆಚರಣೆ ಅತ್ಯಂತ ಶ್ರದ್ಧಾಭಕ್ತಿ ಹಾಗೂ ವೈಭವದಿಂದ ಜರುಗುತ್ತಿದೆ.
ಶ್ರೀರಾಮ ಮಂದಿರ, ಊರಮುಂದಿನ ಆಂಜನೇಯನ ಗುಡಿಗಳಲ್ಲಿ ಶ್ರೀರಾಮ ನವಮಿಯ ಸಡಗರ ತುಂಬಿ ತುಳುಕುತ್ತಿದೆ. ಆಳೆತ್ತರದ ಶ್ರೀರಾಮನ ಫೋಟೋಗಳಿಗೆ ಪುಷ್ಪಗಳಿಂದ ಅಲಂಕರಿಸಿ ರಥೋತ್ಸವಗಳನ್ನೂ ನಡೆಸಲಾಗುತ್ತಿದೆ. ಬೆಂಗಳೂರಿನ ಶ್ರೀರಾಮಪುರ, ಬಸವನಗುಡಿ, ಮಲ್ಲೇಶ್ವರ, ರಾಜಾಜಿನಗರ, ಹನುಮಂತ ನಗರವೇ ಮೊದಲಾದ ಎಲ್ಲ ಬಡಾವಣೆಗಳಲ್ಲೂ ಶ್ರೀರಾಮ ಸೇವಾ ಸಮಿತಿಯ ಸೇವಾಕರ್ತರು ರಸ್ತೆಯಂಚಿನಲ್ಲಿ ಪೆಂಡಾಲ್ ಹಾಕಿ, ಶ್ರೀರಾಮನ ಪೂಜಿಸಿ, ಪುರಜನರಿಗೆ ಪಾನಕ, ಕೋಸಂಬರಿ ಹಂಚುತ್ತಿದ್ದಾರೆ.
ಹನುಮಂತನಗರ ನರಹರಿರಾಯನ ಗುಡ್ಡ, ಆನಂದ ಮಿಲನಾದ್ರಿ ದೇವಾಲಯದಲ್ಲಿ, ಮಹಾಲಕ್ಷ್ಮೀ ಲೇಔಟ್ ಹನುಮಂತನ ಗುಡಿಯಲ್ಲಿ, ಜಯನಗರ 9ನೇ ಬ್ಲಾಕ್ ರಾಗಿ ಗುಡ್ಡದ ಆಂಜನೇಯನ ಗುಡಿಯಲ್ಲಿ ಹಾಗೂ ಎಲ್ಲ ಕೋದಂಡರಾಮಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು. ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತು ರಾಮನ ದರ್ಶನ ಮಾಡಿದರು.
ರಾಜ್ಯದ ಗರಡಿಯ ಮನೆಗಳಲ್ಲಿ ಶ್ರೀರಾಮನ ಪೂಜೆ, ರಾಮರಸ ಪ್ರಸಾದ ವಿತರಣೆಯೂ ನಡೆಯಿತು. ರಾಮೋತ್ಸವದ ನಿಮಿತ್ತ ಸಂಗೀತೋತ್ಸವ, ಭಜನೆ, ನಾಟಕ, ನೃತ್ಯ ರೂಪಕಗಳೂ ನಡೆಯುತ್ತಿವೆ. ವಸಂತ ನವರಾತ್ರಿಯ ಸಂದಂರ್ಭದಲ್ಲಿ ವಸಂತ ಸಾಹಿತ್ಯೋತ್ಸವ ಕಾರ್ಯಕ್ರಮಗಳೂ ಜರುಗುತ್ತಿವೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆಯುವ ರಾಮೋತ್ಸವ ಕಾರ್ಯಕ್ರಮದ ಪಟ್ಟಿ ಇಲ್ಲದೆ:
ಮಾರುತಿ ಭಕ್ತ ಮಂಡಳಿ, ವಿಜಯನಗರ : ವಿದ್ಯಾಭೂಷಣ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ
ಶ್ರೀರಾಮಮಂದಿರ, ಎನ್.ಆರ್. ಕಾಲೋನಿ : ಶ್ರೀವಿದ್ಯಾ ವಾಚಸ್ಪತಿ ತೀರ್ಥ ಸ್ವಾಮೀಜಿಗಳಿಂದ ರಾಮೋತ್ಸವ ಕಾರ್ಯಕ್ರಮ ಉದ್ಘಾಟನೆ, ಸಂಜೆ. 6-30ಕ್ಕೆ
ಶ್ರೀ ಜಯರಾಮ ಸೇವಾ ಮಂಡಳಿ, 8ನೇ ಬ್ಲಾಕ್ ಜಯನಗರ : ಹಂಸಿನಿ ನಾಗೇಂದ್ರ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.
ಶ್ರೀ ವಾಣಿ ವಿದ್ಯಾ ಕೇಂದ್ರ, ಬಸವೇಶ್ವರ ನಗರ : ಗುಡಿಬಂಡೆ ಸೋದರರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.
ಶ್ರೀಕಾಂತ ಸಂಗೀತ ಸಭಾ, ಮಲ್ಲೇಶ್ವರ 8ನೇ ಕ್ರಾಸ್ : ಡಾ. ಎನ್.ಆರ್. ಶ್ರೀಲತಾ ಅವರಿಂದ ಹಾಡುಗಾರಿಕೆ, ಸಂಜೆ 6-30ಕ್ಕೆ.
ಸಮಾಜ ಸೇವಾ ಸಂಘ, ಜಯನಗರ ಎರಡನೇ ಬ್ಲಾಕ್ : ಕುಮಾರಿ ಭಾರ್ಗವಿ ಅವರಿಂದ ನೃತ್ಯ,
ಶ್ರೀರಾಮ ಮಂದಿರ ಸಂಘ, ಬಸವನಗುಡಿ : ಪ್ರಭಾತ್ ಕಲಾವಿದರಿಂದ ನೃತ ರೂಪಕ, ಸಂಜೆ -6-30ಕ್ಕೆ.
ಶ್ರೀರಾಮ ಮಂಡಳಿ, 9ನೇ ಬ್ಲಾಕ್ ಜಯನಗರ : ಜಗನ್ನಾಥರಾವ್ ಅವರಿಂದ ದೇವರನಾಮ, ಸಂಜೆ 6-30ಕ್ಕೆ.
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications