ಕೆಓಐಸಿಎಲ್ಗೆ 25 : ಸಾಧಿಸಬೇಕಾದುದು ಇನ್ನೂ ಬಹಳಷ್ಟು
ಮಂಗಳೂರು : ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ರಜತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು , ಈ ಹಿನ್ನೆಲೆಯಲ್ಲಿ ಕುದುರೆಮುಖದ ಆಳ ಪ್ರದೇಶದಲ್ಲಿರುವ ಕಬ್ಬಿಣ ಅದಿರನ್ನು ಹೊರತೆಗೆದು ಸಂಸ್ಕರಿಸಲಿದೆ ಎಂದು ಕೆಒಐಸಿಎಲ್ನ ಪ್ರಕಟಣೆ ಹೇಳಿದೆ.
1976ರಲ್ಲಿ ಸ್ಥಾಪನೆಯಾದ ಕಂಪೆನಿ ಚಿಕ್ಕಮಗಳೂರಿನ ಕುದುರೆಮುಖ ಮತ್ತು ನವ ಮಂಗಳೂರಿನಲ್ಲಿ ತನ್ನ ಸ್ಥಾವರಗಳನ್ನು ಹೊಂದಿದೆ. ಈ ವರ್ಷದ ಕಾರ್ಯಸೂಚಿಯಲ್ಲಿ , ಕಾರವಾರದಲ್ಲಿ ಸ್ಥಾಪಿಸಲಿರುವ ಕಲ್ಲಿದ್ದಲ ಸ್ಥಾವರ ಮತ್ತು ಆಂಧ್ರ ಪ್ರದೇಶದ ಒಂಗೋಲ್ನಲ್ಲಿರುವ ಕಬ್ಬಿಣ ಅದಿರು ಕಾರ್ಖಾನೆಯ ಅಭಿವೃದ್ಧಿ ಸೇರಿದೆ.
ಪೈಪ್ಲೈನ್ ಮೂಲಕ ಕಚ್ಚಾ ಅದಿರನ್ನು 93 ಕಿಲೋ ಮೀಟರ್ ದೂರ ಸಾಗಿಸಿ ಕಬ್ಬಿಣ ತಯಾರಿಸುವ ದೇಶದ ಪ್ರಥಮ ಕಂಪೆನಿ ಎಂಬ ಹೆಗ್ಗಳಿಕೆ ಕುದುರೆಮುಖ ಕಂಪೆನಿಯದು. ಪ್ರಸ್ತುತ, ಕಂಪೆನಿಯು 6.8 ಮಿಲಿಯನ್ ಟನ್ ಕಬ್ಬಿಣ ಅದಿರು ಉತ್ಪಾದಿಸುತ್ತಿದೆ. ಚೀನಾ, ಜಪಾನ್, ತೈವಾನ್, ಟರ್ಕಿ, ಜಪಾನ್ ಹಾಗೂ ಇರಾನ್ ಮಾರುಕಟ್ಟೆಗಳಲ್ಲದೆ, ದೇಶೀ ಮಾರುಕಟ್ಟೆಯ ಕಡೆಗೂ ಕಂಪೆನಿ ಗಮನ ಹರಿಸಲಿದೆ. ಈ ಸಾಲಿನಲ್ಲಿ ಸುಮಾರು 570 ಕೋಟಿ ರೂಪಾಯಿಗಳ ಆಯವ್ಯಯ ಪಟ್ಟಿ ಕಂಪೆನಿಯ ಮುಂದಿದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications