ಕತ್ತಲಲ್ಲಿ ಷೇರುಪೇಟೆ ! ಸಿಬಿಐ ವಶದಲ್ಲಿಕೇತನ್ ಪಾರೇಖ್
ಮುಂಬಯಿ : ಹರ್ಷದ್ ಮೆಹ್ತಾ ಅನ್ನುವ ಖದೀಮ 1992 ರಲ್ಲಿ ಷೇರುಪೇಟೆಯಲ್ಲಿ ಇತಿಹಾಸ ಕಂಡರಿಯದ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ . ಅವನ ವಾರಸುದಾರರು ಇನ್ನೂ ಇದ್ದಾರೆ ಅನ್ನುವುದು ಎಂಟು ವರ್ಷಗಳ ನಂತರ ರುಜುವಾತಾಗಿದೆ. ಶುಕ್ರವಾರ ಬಯಲಿಗೆ ಬಂದ ಷೇರು ಹಗರಣ 843 ಕೋಟಿ ರುಪಾಯಿ ಮೊತ್ತದ್ದು. ಹಗರಣದ ಹಿಂದಿನ ಕೈ ದಲ್ಲಾಳಿ ಕೇತನ್ ಪಾರೇಖ್ ಎಂಬಾತನದ್ದು .
ಕೇತನ್ ಪಾರೇಖ್ನನ್ನು ಬಂಧಿಸಲಿರುವ ಸಿಬಿಐ, ಆತನ ಸಂಬಂಧಿಗಳು ಹಾಗೂ ದಲ್ಲಾಳಿಗಳಾದ ಕೀರ್ತಿಕುಮಾರ್ ಪಾರೇಖ್ ಹಾಗೂ ಕಾರ್ತೀಕ್ ಪಾರೇಖ್ ಅವರ ವಹಿವಾಟುಗಳತ್ತ ತೀವ್ರ ನಿಗಾ ಇಟ್ಟಿದೆ. ಮಾತ್ರವಲ್ಲದೆ ಪಾರೇಖ್ ಅವ್ಯವಹಾರಗಳಿಗೆ ಇಂಬುಕೊಟ್ಟಿರುವರೆಂದು ಶಂಕಿಸಲಾದ ಅಧಿಕಾರಿಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ.
ಪಾರೇಖ್ ಜೊತೆ ವಾಣಿಜ್ಯಿಕ ನಂಟು ಹೊಂದಿದೆ ಎನ್ನಲಾದ ಪ್ಯಾಂಥರ್ ಇನ್ವೆಸ್ಟ್ಮೆಂಟ್ ಟ್ರೇಡರ್ಸ್, ಪ್ಯಾಂಥರ್ ಫೈನ್ಕಾಪ್ ಅಂಡ್ ಮ್ಯಾನೇಜ್ಮೆಂಟ್ ಸರ್ವೀಸ್, ಕ್ಲಾಸಿಕ್ ಪ್ರೆೃವೇಟ್ ಲಿಮಿಟೆಡ್, ಚಿತ್ರಕೂಟ ಕಂಪ್ಯೂಟರ್ಸ್ ಪ್ರೆೃವೇಟ್ ಲಿ ಹಾಗೂ ನಕ್ಷತ್ರ ಸಾಫ್ಟ್ವೇರ್ ಪ್ರೇವೇಟ್ ಲಿಮಿಟೆಡ್ಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅನೇಕ ದಾಖಲೆಗಳನ್ನು ಹೊತ್ತು ತಂದಿದೆ. ಮುಂಬಯಿಯ ಮಾಂಡ್ವಿ ಹಾಗೂ ಮಾಧವಪುರಗಳ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳ ಮೇಲೂ ಸಿಬಿಐ ದಾಳಿ ನಡೆದಿದೆ.
ಬೌನ್ಸಾದ 130 ಕೋಟಿ ರು.ಗಳ ಪೇ ಆರ್ಡರ್
ಮಾಧವಪುರ ಮರ್ಕಂಟೈಲ್ ಸಹಕಾರಿ ಬ್ಯಾಂಕ್ ನೀಡಿದ್ದ 130 ಕೋಟಿ ರುಪಾಯಿಗಳ ಪೇ ಆರ್ಡರನ್ನು , ಕೇತನ್ ಪಾರೇಖ್ ಬ್ಯಾಂಕ್ ಆಫ್ ಇಂಡಿಯಾಗೆ ನೀಡಿದ್ದು , ಅದು ಬೌನ್ಸ್ ಆಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಭಾರೀ ಕೋಲಾಹಲ ಉಂಟಾಯಿತು. ಸೂಚ್ಯಂಕದಲ್ಲಿ ದಿಢೀರನೆ 147 ಪಾಯಿಂಟುಗಳಷ್ಟು ಕುಸಿತ ಕಂಡರೆ, ಚೆನ್ನೈ ಷೇರು ವಿನಿಮಯ ಕೇಂದ್ರದಲ್ಲಿ ಇಂಡೆಕ್ಸ್ 130 ಪಾಯಿಂಟುಗಳಷ್ಟು ಕುಸಿತ ಕಂಡಿತು.
ಷೇರು ಹಗರಣವನ್ನು ಕುರಿತು ಸೆಬಿ ಕೂಲಂಕಷವಾಗಿ ಪರಿಶೀಲಿಸುವುದು. ಅದರ ತನಿಖಾ ವರದಿಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications