ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ : ಡಕಾಯಿತರಗುಂಡಿಗೆ ಪೊಲೀಸನ ಬಲಿ

By Staff
|
Google Oneindia Kannada News

ಚಿತ್ರದುರ್ಗ : ನಗರದ ಹೊರವಲಯದಲ್ಲಿ ಶನಿವಾರ ಬೆಳಿಗ್ಗೆ ದರೋಡೆಕೋರರು ಹಾಗೂ ಪೊಲೀಸರ ನಡುವೆ ಸಂಭವಿಸಿದ ಗುಂಡಿನ ವಿನಿಮಯದಲ್ಲಿ ಓರ್ವ ಪೊಲೀಸ್‌ ಪೇದೆ ದರೋಡೆಕೋರರ ಗುಂಡಿಗೆ ಬಲಿಯಾಗಿದ್ದಾನೆ.

ತಮ್ಮ ಮನೆಯ ಮುಂದೆ ನಾಲ್ವರು ಡಕಾಯಿತರ ಗುಂಪು ಸುಳಿದಾಡುತ್ತಿದೆ ಎಂದು ಪಟ್ಟಣದ ಹೊರ ವಲಯದಲ್ಲಿ ವಾಸವಾಗಿರುವ ಎಕ್ಸೈಸ್‌ ಇನ್ಸ್‌ಪೆಕ್ಟರ್‌ ಒಬ್ಬರು ದೂರವಾಣಿಯ ಮೂಲಕ ಪೊಲೀಸರಿಗೆ ಮಾಹಿತಿ ತಿಳಿಸಿದಾಗ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಲ್ಲಿ ಪೊಲೀಸರು ಮತ್ತು ಡಕಾಯಿತರ ನಡುವೆ ತುಸು ಹೊತ್ತು ಗುಂಡಿನ ಕಾಳಗ ನಡೆದಾಗ ಈ ಅನಾಹುತ ಸಂಭವಿಸಿದೆ.

ಮೂವರು ಪೇದೆಗಳನ್ನುಳ್ಳ ತಂಡದ ನೇತೃತ್ವವನ್ನು ಸಬ್‌ ಇನ್ಸ್‌ಪೆಕ್ಟರ್‌ ವಹಿಸಿದ್ದು , ಗುಂಡಿಗೆ ಬಲಿಯಾದ ಪೇದೆಯನ್ನು ಶಫೀಉಲ್ಲಾ (27) ಎಂದು ಗುರ್ತಿಸಲಾಗಿದೆ. ದುರಂತ ಸಂಭವಿಸಿದ ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಡಕಾಯಿತರ ತಂಡವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಎರಡು ಪೊಲೀಸ್‌ ತಂಡಗಳು ತೊಡಗಿವೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X