ಹತ್ತು ಸಾವಿರ ರನ್ನುಗಳ ಮೈಲುಗಲ್ಲಿನ ಹೊಸಿತಿಲಲ್ಲಿ ಸಚಿನ್
ಇಂದೋರ್ : ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಎನ್ನುವ ಅಗ್ಗಳಿಕೆಯ, ಸಿಡಿಲ ಹೊಡೆತಗಳ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತೊಂದು ಮೈಲುಗಲ್ಲಿನ ಹೊಸಿತಿಲಲ್ಲಿ ನಿಂತಿದ್ದಾರೆ. ಇನ್ನು 34 ರನ್ ಚಚ್ಚಿದರೆ, ಸೀಮಿತ ಓವರ್ಗಳ ಪಂದ್ಯದಲ್ಲಿ 10 ಸಹಸ್ರ ರನ್ ಪೂರೈಸಿದ ಮೊದಲ ಆಟಗಾರ ಎನ್ನುವ ದಾಖಲೆಗೆ ಅವರು ಪಾತ್ರರಾಗುತ್ತಾರೆ.
ಶನಿವಾರ (ಮಾ.31) ನಡೆಯುವ ಪಂದ್ಯದಲ್ಲಿ 10 ಸಾವಿರ ರನ್ಗಳ ದಾಖಲೆಯನ್ನು ಸಚಿನ್ ಮುಟ್ಟುವ ವಿಶ್ವಾಸವನ್ನು ತಂಡದ ಮ್ಯಾನೇಜರ್ ರಾಜೇಶ್ ಚೌಹಾಣ್ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅತ್ಯುತ್ತಮ ಫಾರ್ಮ್ನಲ್ಲಿರುವ ಸಚಿನ್ ಕೂಡ ಹೊಸ ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿದ್ದಾರೆ. ಅವರಿಗೆ, ಅಭಿನಂದನೆಗಳು. ಮುಂಗಡವಾಗಿ .
ದ್ರಾವಿಡ್ ಆಡುತ್ತಾರೆ : ತಲೆ ಕೆಡಿಸಿಕೊಂಡು ಕೂತಿದ್ದ ಚಿಂತಕರ ಚಾವಡಿಯ ಮಂದಿಯೀಗ ನಿರಾಳವಾಗಿದ್ದಾರೆ. ಗಲ್ಲದ ಗಾಯದ ಕಾರಣವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಸೀಮಿತ ಓವರ್ಗಳ ಪಂದ್ಯದಲ್ಲಿ ದ್ರಾವಿಡ್ ಆಡುವ ಕುರಿತು ಎದ್ದಿದ್ದ ಅನುಮಾನಗಳೆಲ್ಲ ಈಗ ಬಗೆಹರಿದಿವೆ.
ದ್ರಾವಿಡ್ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಚೇತರಿಕೆಯಿಂದಿದ್ದಾರೆ. ಮೂರನೇ ಪಂದ್ಯದಲ್ಲಿ ಆಡಿಯೇ ತೀರುತ್ತಾರೆ ಎಂದು ತಂಡದ ಮ್ಯಾನೇಜರ್ ಚೌಹಾಣ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರೇ ಹೇಳಿದಂತೆ, ತಂಡದ ಯಾವ ಆಟಗಾರರೂ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿಲ್ಲ .
ವಿಕೆಟ್ಗಳ ನಡುವೆ ಓಡುವ ಅಭ್ಯಾಸ : ಎರಡನೇ ಪಂದ್ಯದಲ್ಲಿ ಸುಲಭವಾಗಿ ಸೋತ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರು ತರಬೇತುದಾರ ಜಾನ್ ರೈಟ್ ನೇತೃತ್ವದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ವಿಕೆಟ್ಗಳ ನಡುವಿನ ಓಟದ ಸುಧಾರಣೆ ಹಾಗೂ ಗಾಳಿಯಲ್ಲಿ ತೇಲುವ ಚೆಂಡುಗಳನ್ನು ಕ್ಯಾಚಾಗಿ ಪರಿವರ್ತಿಸುವ ಕಲೆಯ ಬಗೆಗೆ ಕಠಿಣ ಅಭ್ಯಾಸ ನಡೆಸಲಾಗುತ್ತಿದೆ. ಎರಡೂ ತಂಡಗಳು ಮುನ್ನಡೆಗಾಗಿ ತೀವ್ರ ಹೋರಾಟ ನಡೆಸುವ ನಿರೀಕ್ಷೆ ಇರುವುದರಿಂದ, ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications