ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್.ಎಲ್. ಭೈರಪ್ಪ, ಇನಾಂದಾರ್ಗೆ ಪಾಟೀಲ್ ಪ್ರತಿಷ್ಠಾನ ಪ್ರಶಸ್ತಿ
ಬೆಂಗಳೂರು : ಕನ್ನಡದ ಹೆಸರಾಂತ ಸಾಹಿತಿ ಎಸ್.ಎಲ್. ಭೈರಪ್ಪ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣಗೌಡ ಇನಾಂದಾರ್ ಅವರನ್ನು 2000 ಸಾಲಿನ ಎಸ್.ಆರ್. ಪಾಟೀಲ್ ಪ್ರತಿಷ್ಠಾನದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 10 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಏಪ್ರಿಲ್ 4ರಂದು ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರಶಸ್ತಿಯನ್ನು ಗುಲ್ಬರ್ಗಾದಲ್ಲಿ ಪ್ರದಾನ ಮಾಡುವರು ಎಂದು ಪ್ರತಿಷ್ಠಾನದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಎಸ್.ಎಲ್. ಭೈರಪ್ಪ ಅವರ ಮತದಾನ ಕಾದಂಬರಿ ಆಧರಿಸಿ ಅದೇ ಹೆಸರಿನಲ್ಲಿ ತಯಾರಾದ ಕನ್ನಡ ಚಿತ್ರ ಮೊನ್ನೆಯಷ್ಟೇ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
(ಯು.ಎನ್.ಐ)
Comments
Story first published: Friday, March 30, 2001, 5:30 [IST]