Get Updates
Get notified of breaking news, exclusive insights, and must-see stories!

ವ್ಯವಸ್ಥೆಗೆ ಗುದ್ದು ನೀಡಲು ಏ.2 ರಂದುರೈತರಿಂದ ಕರಾಳ ದಿನಾಚರಣೆ

ಮಂಡ್ಯ : ಜಾಗತೀಕರಣ ಮತ್ತು ಉದಾರೀಕರಣದಿಂದಾಗಿ ರಾಜ್ಯದ ರೈತರು ಬೆಳೆದ ಬೆಳೆಗಳಿಗೆ ಮೂರು ಕಾಸಿನ ಬೆಲೆಯೂ ಸಿಗದಿರುವಾಗ, ಕೃಷಿ ಕೈಗಾರಿಕಾ ಕ್ಷೇತ್ರಗಳನ್ನು ರಕ್ಷಿಸುವತ್ತ ಸರಕಾರ ಗಮನ ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘವು ಏಪ್ರಿಲ್‌ ಎರಡರಂದು ಕರಾಳ ದಿನ ಆಚರಿಸಲಿದೆ ಎಂದು ಸಂಘದ ಅಧ್ಯಕ್ಷ ಕೆ. ಎಸ್‌ ಪುಟ್ಟಣ್ಣಯ್ಯ ಹೇಳಿದ್ದಾರೆ.

ಪುಟ್ಟಣ್ಣಯ್ಯ ಅವರು ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಏಪ್ರಿಲ್‌ ಎರಡರಂದು ಮಂಡ್ಯದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು. ಬೆಳಿಗ್ಗೆ ಹನ್ನೊಂದು ಗಂಟೆಗೆ ಸಿಲ್ವರ್‌ ಜ್ಯೂಬಿಲಿ ಹಾಲ್‌ನಿಂದ ಚೆಡ್ಡಿ ತೊಟ್ಟ ಸಾವಿರಾರು ಮಂದಿ ರೈತರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸುವರು. ಕೊಂಬು, ಜಾಗಟೆ, ನಗಾರಿ, ತಮಟೆಗಳನ್ನು ಬಾರಿಸುತ್ತಾ ಮೆರವಣಿಗೆ ಹೊರಡುವ ರೈತರು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದು ರಾಜ್ಯದಲ್ಲಿ ರೈತರಿಗೆ ಬಂದಿರುವ ಬರವನ್ನು ಸಾಂಕೇತಿಕವಾಗಿ ಬಿಂಬಿಸಲಿದ್ದಾರೆ.

2,700 ವಿದೇಶೀ ಉತ್ಪನ್ನಗಳು ದೇಶದೊಳಗೆ ಬರಲು ಸರಕಾರ ದಾರಿ ಮಾಡಿಕೊಟ್ಟಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನ ವ್ಯಾಪಾರ ವಲಯ ಅಸ್ತವ್ಯಸ್ತವಾಗಿದೆ ಎಂದು ವಿಷಾದಿಸಿದ ಪುಟ್ಟಣ್ಣಯ್ಯ ಅವರು ಕೃಷಿ , ಕೈಗಾರಿಕಾ ಕ್ಷೇತ್ರವನ್ನು ನಾಶ ಮಾಡಲು ಹೊರಟಿರುವ ಸರಕಾರವನ್ನು ಬಡಿದೆಚ್ಚರಿಸಲು ಈ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ರೈತರ ಆಗ್ರಹಗಳನ್ನು ಪಟ್ಟಿ ಮಾಡುವುದಾದರೆ -

  • ಮುಕ್ತ ಮಾರುಕಟ್ಟೆಯಲ್ಲಿ ಬಿಯರ್‌ ಮಾರಾಟ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು.
  • ನುಸಿರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ನೀರಾ ಇಳಿಸಲು ಅನುಮತಿ ನೀಡಬೇಕು.
  • ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗೆಳು ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ತಕ್ಷಣವೇ ನೀಡಬೇಕು.
  • ಜಿಲ್ಲೆಯಾದ್ಯಂತ ಪ್ರಸ್ತುತ ಬೆಳೆದ ಕಬ್ಬು ನೀರಿಲ್ಲದೆ ಒಣಗುತ್ತಿದೆ. ಇದಕ್ಕಾಗಿ ಸರಕಾರ ನೀರು ನಿರ್ವಹಣೆಯ ನಿಯಂತ್ರಣ ಪಡೆ ರಚಿಸಬೇಕು.
(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+