ಜನಗಣತಿ -2001 : ನಮ್ಮವರ ಸಂಖ್ಯೆ 5,27,33,958
ಬೆಂಗಳೂರು : ಚತುಷ್ಕೋಟಿ ಕನ್ನಡಿಗರು ಎನ್ನುವ ಪರಿಕಲ್ಪನೆಯನ್ನು ಜನಗಣತಿ-2001 ಬದಲಿಸಿದ್ದು , ಕನ್ನಡಿಗರೀಗ ಪಂಚಕೋಟಿಯ ಗೆರೆ ದಾಟಿದ್ದಾರೆ. ಪಕ್ಕಾ ಹೇಳುವುದಾದರೆ - ಕರ್ನಾಟಕದ ಜನಸಂಖ್ಯೆಯೀಗ 5 ಕೋಟಿ 27 ಲಕ್ಷ 33 ಸಾವಿರದ 958. ಜನಗಣತಿ - 91 ರಲ್ಲಿ ರಾಜ್ಯದ ಜನಸಂಖ್ಯೆ 4, 49,77,201 ರಷ್ಟಿತ್ತು . ಜನಸಂಖ್ಯಾ ಗಾತ್ರದ ದೃಷ್ಟಿಯಿಂದ ಕರ್ನಾಟಕ ದೇಶದಲ್ಲಿ 9 ನೇ ಸ್ಥಾನದಲ್ಲಿದೆ.
1991ರ ಜನಗಣತಿಯ ಅಂಕಿ ಅಂಶಗಳಿಗೆ ಹೋಲಿಸಿದರೆ, ಕಳೆದೊಂದು ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆಯ ದರ ರಾಜ್ಯದಲ್ಲಿ ಇಳಿಮುಖವಾಗಿದೆ. ಜನಗಣತಿ-2001 ರ ಮೊದಲ ಸುತ್ತಿನ ವಿವರಗಳನ್ನು ಜನಗಣತಿ ನಿರ್ದೇಶನಾಲಯದ ನಿರ್ದೇಶಕ ಎಚ್. ಶಶಿಧರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
91 ರ ಜನಗಣತಿ ವಿವರಗಳಿಗೆ ಹೋಲಿಸಿದರೆ, ಲಿಂಗ ಅನುಪಾತ ಹಾಗೂ ಸಾಕ್ಷರತೆಯ ದರವೂ ರಾಜ್ಯದಲ್ಲಿ ಸ್ವಲ್ಪಮಟ್ಟಿಗಿನ ಏರಿಕೆಯನ್ನು ಕಂಡಿದೆ. ಸಾಕ್ಷರತೆಯ ಪ್ರಮಾಣ ಪ್ರತಿಶತ 56.04 ರಿಂದ 67.04 ಕ್ಕೆ ಏರಿಕೆ ಕಂಡಿದ್ದರೆ, ಲಿಂಗ ಅನುಪಾತದ ದರ - ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 960 ರಿಂದ 964 ಕ್ಕೆ ಹೆಚ್ಚಿದೆ.
ರಾಜ್ಯದ ಒಟ್ಟು 3,07,74,988 ಸಾಕ್ಷರರಲ್ಲಿ ಪುರುಷರ ಸಂಖ್ಯೆ 1,78,17,682. ಮಹಿಳೆಯರ ಸಂಖ್ಯೆ 1,29,57,306. ಅಧಿಕ ಸಾಕ್ಷರರನ್ನು ಹೊಂದಿರುವ ಹೆಗ್ಗಳಿಕೆ ಬೆಂಗಳೂರಿನದಾದರೆ (ಶೇ.83.91), ಕಡಿಮೆ ಸಾಕ್ಷರರ ವಿಷಾದ ರಾಯಚೂರಿನದು (49.54). ದಕ್ಷಿಣ ಕನ್ನಡ ಜಿಲ್ಲೆಯ ಸಾಕ್ಷರರಲ್ಲಿ ಪುರುಷರ ಪ್ರಮಾಣ ಹೆಚ್ಚಾದರೆ, ಬೆಂಗಳೂರಿನಲ್ಲಿ ಸ್ತ್ರೀ ಸಾಕ್ಷರರ ಸಂಖ್ಯೆ ಹೆಚ್ಚು . ಇನ್ನು , ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ(65 ಲಕ್ಷ) ಎಂದಿನಂತೆ ಮುಂದಿದೆ. 5 ಲಕ್ಷ ಜನಸಂಖ್ಯೆ ಹೊಂದಿರುವ ಕೊಡಗು ಕೊನೆಯ ಸ್ಥಾನದಲ್ಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications